ಇಟಲಿ ಬಗ್ಗುಬಡಿದು, ಯುರೋ ಕಪ್ ಗೆದ್ದ ಸ್ಪೇನ್
ಕೀವ್, ಜು.1: ಯುರೋಪಿನಲ್ಲಿ ಫುಟ್ಬಾಲ್ ಹಬ್ಬ ರೋಚಕ ಅಂತ್ಯ ಕಂಡಿದೆ. ಅನೀರಿಕ್ಷಿತವಾಗಿ ಫೈನಲ್ ಮುಟ್ಟಿದ್ದ ಇಟಲಿ ತಂಡ ಹಾಲಿ ಚಾಂಪಿಯನ್ ಸ್ಪೇನ್ ತಂಡದ ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ಅಂತಿಮ ಹಣಾಹಣಿಯಲ್ಲಿ ಸ್ಪೇನ್ ತಂಡ 4-0 ಅಂತರದಿಂದ ಇಟಲಿಯನ್ನು ಭರ್ಜರಿಯಾಗಿ ಸೋಲಿಸಿದೆ.
ಯುರೋ 2012 ರ ಫೈನಲ್ ಪಂದ್ಯದಲ್ಲಿ ಡೆವಿಡ್ ಸಿಲ್ವಾ(14ನೇ ನಿಮಿಷ), ಜೋರ್ಡಿ ಆಲ್ಬಾ(41ನೇ ನಿಮಿಷ) ಫರ್ನಾಂಡೋ ಟೊರೆಸ್ (84ನೇ ನಿಮಿಷ) ಹಾಗೂ ಜುವಾನ್ ಮಾಠ(88ನೇ ನಿಮಿಷ) ತಲಾ ಒಂದೊಂದು ಗೋಲು ಬಾರಿಸಿ ಇಟಲಿ ತಂಡ ತಲೆ ಎತ್ತದಂತೆ ಮಾಡಿದರು.

1964 ಹಾಗೂ 2008 ರಲ್ಲಿ ಯುರೋ ಕಪ್ ಗೆದ್ದಿದ್ದ ಸ್ಪೇನ್ ಮತ್ತೊಮ್ಮೆ ಯುರೋ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ತಲೆ ಕೆಳಗಾದ ಪ್ರಾಂಡೆಲ್ಲಿ ತಂತ್ರ: ಬಲೊಟೆಲ್ಲಿ, ಕಸ್ಸಾನೊ ಮೇಲೆ ಅತಿಯಾದ ಆತ್ಮವಿಶ್ವಾಸವಿರಿಸಿದ್ದ ಇಟಲಿ ಕೋಚ್ ಪ್ರಾಂಡೆಲ್ಲಿ ತಂತ್ರಗಳೆಲ್ಲ ವಿಫಲವಾಯಿತು. ಜರ್ಮನಿ ವಿರುದ್ಧ ಭರ್ಜರಿ ಆಟವಾಡಿದ್ದ ಬಲೊಟೆಲ್ಲಿ ಸ್ಪೇನ್ ರಕ್ಷಣಾ ವ್ಯೂಹ ಒಳ ಕಾಲಿಡಲು ಆಗದೆ ಒದ್ದಾಡಿದರು.
ಅಲ್ಲದೆ, ದ್ವಿತೀಯಾರ್ಧದಲ್ಲಿ ಗಾಯಾಳು ಥಿಯೋಗೊ ಮೊಟ ಅವರನ್ನು ಕಣಕ್ಕಿಳಿಸಿದ ಪ್ರಾಂಡೆಲ್ಲಿಗೆ ಭಾರಿ ಹೊಡೆತ ಬಿತ್ತು. ಕೆಲ ನಿಮಿಷಗಳ ನಂತರ ಮೊಟ ಡಗ್ ಔಟ್ ಗೆ ಹಿಂತಿರುಗಿದ್ದರು. ಯಾವುದೇ ಬದಲಾವಣೆ ಮಾಡುವ ಅವಕಾಶ ಇಲ್ಲದೆ 10 ಜನರ ತಂಡವಾದ ಇಟಲಿ 90ನಿಮಿಷವಾದರೆ ಸಾಕು ಎಂಬಂತೆ ಆಡಿದರು.
ಬಲ್ಜಾರೆಟ್ಟಿ ಸೇರಿದಂತೆ ಪ್ರಮುಖ ಆಟಗಾರರು ಗಾಯಗೊಂಡಿದ್ದರಿಂದ ಇಟಲಿ ಪ್ರದರ್ಶನ ಮಂಕಾಯಿತು. ಮಿಡ್ ಫೀಲ್ಡ್ ಹೀರೋ ಪಿರ್ಲೋ ಪಾಸ್ ಗಳನ್ನು ಗೋಲ್ ಆಗಿಸುವ ಮುಂಪಡೆ ಆಟಗಾರರಿಲ್ಲದೆ ಇಟಲಿ ಒದ್ದಾಡಿತು.
| ಸ್ಪೇನ್ | 4 - 0 | ಇಟಲಿ |
| 9(5) | ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) | 6(5) |
| 3 | ಕಾರ್ನರ್ಸ್ | 3 |
| 17 | ಫೌಲ್ಸ್ | 10 |
| 3 | ಆಫ್ ಸೈಡ್ | 3 |
| 1 | ಹಳದಿ ಕಾರ್ಡ್ | 1 |
| 0 | ಕೆಂಪು ಕಾರ್ಡ್ | 0 |
ಸ್ಪೇನ್ ನಿರೀಕ್ಷಿತ ಆಟ: ನಾಯಕ ಐಕರ್ ಕ್ಯಾಸಿಯಸ್ ಅವರ ಅದ್ಭುತ ಗೋಲ್ ಕೀಪಿಂಗ್ ಮೂಲಕ ಇಟಲಿ ತಂಡದ ಆರಂಭಿಕ ದಾಳಿ ತಡೆಯಲಾಯಿತು. ಕಸ್ಸಾನೋ, ಬಲೊಟೆಲ್ಲಿ ಪ್ರಥಮಾರ್ಧದಲ್ಲಿ ಕ್ಯಾಸಿಯಾಸ್ ಗೆ ಕಾಟ ಕೊಟ್ಟಿದ್ದರು. ಆದರೆ, ನಂತರ ಸ್ಪೇನ್ ತಂಡಕ್ಕೆ ಆಟವಾಯಿತು.ಮೊದಲ ಅರ್ಧದಲ್ಲಿ ಗೋಲು ಬಾರಿಸಿದ್ದು ಸ್ಪೇನ್ ನೆರವಿಗೆ ಬಂತು. ಬದಲಿ ಆಟಗಾರನಾಗಿ ಬಂದ ಟೊರೆಸ್ ಯರೋ 2008ರ ಫೈನಲ್ ಹಾಗೂ 2012ರ ಫೈನಲ್ ನಲ್ಲಿ ಗೋಲು ಬಾರಿಸಿದ ವಿಶಿಷ್ಟ ದಾಖಲೆ ಬರೆದರು. ಸ್ಪೇನ್ ಇತಿಹಾಸ ನಿರ್ಮಿಸಿತು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications