ಸದಾನಂದ ಸಚಿವರಿಂದಲೂ ರಾಜೀನಾಮೆಗೆ ಮಹೂರ್ತ

ಮುಖ್ಯಮಂತ್ರಿ ಸದಾನಂದ ಗೌಡರ ಕಟ್ಟಾ ಬೆಂಬಲಿಗರೆಂದೇ ಗುರುತಿಸಿಕೊಂಡಿರುವ ಸಚಿವ ಜಾರಕಿಹೊಳಿ ಮತ್ತು ಆಸ್ನೋಟಿಕರ್ ಅವರು ಮಧ್ಯಾಹ್ನ 2 ಗಂಟೆಗೆ ರಾಜೀನಾಮೆ ಸಲ್ಲಿಸಲು ಮಹೂರ್ತ ನಿಗದಿಪಡಿಸಿದ್ದಾರೆ.
'ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸದಾನಂದ ಗೌಡರನ್ನು ಕೆಳಗಿಳಿಸಬಾರದು. ಹಾಲಿ ಸರಕಾರ 5 ವರ್ಷ ಪೂರ್ಣಗೊಳಿಸಲು ಅವಕಾಶ ನೀಡಬೇಕು. ಆದ್ದರಿಂದ ಮೊದಲು ನಾವಿಬ್ಬರು ರಾಜೀನಾಮೆ ನೀಡುತ್ತೇವೆ. ಆ ನಂತರ, ಪರಿಸ್ಥಿತಿ ನೋಡಿಕೊಂಡು ಇತರೆ ಶಾಸಕರೂ ಮುಖ್ಯಮಂತ್ರಿ ಕೈಗೆ ರಾಜೀನಾಮೆ ಸಲ್ಲಿಸಲಿದ್ದಾರೆ' ಎಂದು ಆಸ್ನೋಟಿಕರ್ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಈ ಮಧ್ಯೆ, ಯಾವುದೇ ಬಣದೊಂದಿಗೂ ಗುರುತಿಸಿಕೊಳ್ಳದೆ ತಟಸ್ಥರಾಗಿರುವ ಗೃಹ ಸಚಿವ ಆರ್ ಅಶೋಕ್ ಅವರು ಬೆಂಗಳೂರಿಗೆ ಬಂದಿಳಿದ ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರನ್ನು ಸ್ವಾಗತಿಸಿದ್ದಾರೆ.
ಬಚ್ಚೇಗೌಡ ಹೇಳಿಕೆಗೆ ಸುರೇಶ್ ಗೌಡ ಕೆಂಡಾಮಂಡಲ:
ಮಾಜಿ ಮುಖ್ಯಮಂತ್ರಿಯೊಬ್ಬರ ಚಿತಾವಣೆಯ ಮೇರೆಗೆ ಕೆಲವು ಸಹೋದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ ಎಂದು ಬಚ್ಚೇಗೌಡರು ಹಗುರವಾಗಿ ಮಾತನಾಡಿರುವುದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ತುಮಕೂರು ಶಾಸಕ, ಯಡಿಯೂರಪ್ಪ ಅವರ ಕಟ್ಟರ್ ಬೆಂಬಲಿಗ ಸುರೇಶ್ ಗೌಡ ಅವರು ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.
ಬಚ್ಚೇಗೌಡರು ಹೀಗೆ ಮಾತನಾಡುವ ಮುನ್ನ ತಮ್ಮ ಇತಿಹಾಸ ಏನು ಎಂಬುದನ್ನು ಅರಿತುಕೊಳ್ಳಲಿ. Congress, JDS ಪಕ್ಷಗಳು ಆಡಳಿತದಲ್ಲಿದ್ದಷ್ಟೂ ದಿನ ಮಂತ್ರಿಗರಿ ಅನುಭವಿಸಿ, ಆ ಬಳಿಕ ಮಂತ್ರಿಗಿರಿ ಆಸೆಗಾಗಿ BJPಗೆ ಹಾರಿದ ಕುಖ್ಯಾತಿ ಕಾರ್ಮಿಕ ಸಚಿವ ಬಿಎನ್ ಬಚ್ಚೇಗೌಡ ಅವರಿಗೆ ಸಲ್ಲುತ್ತದೆ. ಅಂತಹ ವ್ಯಕ್ತಿ ನಮ್ಮ ಧೀಮಂತ ನಾಯಕರಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ. ಈ ಬಗ್ಗೆ ಯಡಿಯೂರಪ್ಪನವರೇ ಸರಿಯಾದ ಪ್ರತಿಕ್ರಿಯೆ ನೀಡುತ್ತಾರೆ.
ಒಂದು ವಾರದ ಹಿಂದೆ ನಾನು ನನ್ನ ಕ್ಷೇತ್ರದ ಬಗ್ಗೆ ಮಾತನಾಡಲು ಬಚ್ಚೇಗೌಡರನ್ನು ಭೇಟಿ ಮಾಡಿದ್ದೆ. ಆಗ ಸನ್ಮಾನ್ಯ ಬಚ್ಚೇಗೌಡರು - ಸಿದ್ದರಾಮಯ್ಯ ಮತ್ತು ಇಬ್ರಾಹಿಂ ಅವರು ತನ್ನನ್ನು ಕಾಂಗ್ರೆಸ್ಸಿಗೆ ಕರೆಯುತ್ತಿದ್ದಾರೆ. ಆದ್ದರಿಂದ ನೀವೂ (ಸುರೇಶ್ ಗೌಡ) ಬನ್ನಿ. ಅತ್ಲಾಗೆ ಕಾಂಗ್ರೆಸ್ಸಿಗೆ ಹೋಗಿಬಿಡೋಣ - ಎಂದು ನನಗೆ ಆಹ್ವಾನ ನೀಡಿದರು.
ಅಧಿಕಾರಕ್ಕಾಗಿ ಬಚ್ಚೇಗೌಡರು ಯಾವುದೇ ಪಕ್ಷದ ಜತೆಯೂ ಕೈಜೋಡಿಸಬಲ್ಲರು ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ ನಾಲ್ಕು ವರ್ಷಗಳ ಹಿಂದೆ ಮಂತ್ರಿಗಿರಿಗಾಗಿ ಬಿಜೆಪಿಗೆ ಬಂದ ಬಚ್ಚೇಗೌಡರಿಂದ, ಮೊದಲಿನಿಂದಲೂ ಬಿಜೆಪಿಯಲ್ಲಿರುವ ನಾವು ಪಾಠ ಕಲಿಯಬೇಕಿಲ್ಲ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications