ಕೋಕಾ ಕೋಲಾ 28000 ಕೋಟಿ ಹೂಡಿಕೆ ಏಕೆ?

ಆದರೆ, ಎಲ್ಲಾ ಬಿಟ್ಟು ಭಾರತಕ್ಕೆ ಅಷ್ಟೊಂದು ಹಣ ಹೂಡಿಕೆ ಮಾಡುತ್ತಿರುವುದಾದರೂ ಏಕೆ? ಡಾಲರ್ vs ರುಪಾಯಿ ಸಮರ ತಾರಕ್ಕೇರಿರುವ ಬೆನ್ನಲ್ಲೇ ಈ ನಿರ್ಣಯ ಏಕೆ? ಎಫ್ ಡಿಐ ಇನ್ನೂ ಚಾಲ್ತಿಗೊಳ್ಳುವ ಮೊದಲೇ ಈ ನಿರ್ಧಾರ ಎಷ್ಟರಮಟ್ಟಿಗೆ ಸರಿ? ಇದಕ್ಕೆ ಇಲ್ಲಿದೆ ಉತ್ತರ
2011ರಲ್ಲೇ 3 ಬಿಲಿಯನ್ ಡಾಲರ್ ಹೂಡಿಕೆ ಬಗ್ಗೆ ಕೋಕಾ ಕೋಲಾ ಪ್ರಸ್ತಾಪಿಸಿತ್ತು. ಮಿನಿಟ್ ಮೈಡ್, ದಾಸನಿ ಹಾಗೂ ಪವರೆಡ್ ಮುಂತಾದ ಉತ್ಪನ್ನಗಳ ಮೂಲಕ ಅಟ್ಲಾಂಟಾ ಮೂಲದ ಕಂಪನಿ, ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ ಶೇ 20 ರಷ್ಟು ಪ್ರಗತಿ ಕಂಡಿದ್ದರೆ, ಉತ್ತರ ಅಮೆರಿಕದಲ್ಲಿ ಶೇ 2 ರಷ್ಟು ಮಾತ್ರ ಗಳಿಸಿತ್ತು.
ಈಗಲೂ ತಂಪು ಪಾನೀಯ ಮಾರುಕಟ್ಟೆಯಲ್ಲಿ ಶೇ 52 ರಷ್ಟು ಪಾಲು ಹೊಂದಿದ್ದು, ಶೇ 21.4 ರಷ್ಟು ಪಾಲು ಹೊಂದಿರುವ ಪೆಪ್ಸಿಕೋ ಗಿಂತ ಮುಂದಿದೆ.
2020ರೊಳಗೆ ಕೋಕಾ ಕೋಲಾ 5 ಬಿಲಿಯನ್ ಡಾಲರ್ ಬಂಡವಾಳ ಹೂಡಲು ನಿರ್ಧರಿಸಿದೆ. ಜಾಗತಿಕವಾಗಿ 30 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಸಂಸ್ಥೆ ನಿರ್ಧರಿಸಿದ್ದು ಇದರ ಒಂದು ಭಾಗ ಭಾರತದಲ್ಲೂ ಹೂಡಿಕೆಯಾಗಲಿದೆ. ಟಾಪ್ 5 ದೇಶಗಳ ಸಾಲಿಗೆ ಭಾರತವೂ ಸೇರಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಭಾರತ 7ನೇ ಸ್ಥಾನದಲ್ಲಿದೆ ಎಂದು ಕೋಕಾ ಕೋಲಾ ಚೆರ್ಮನ್ ಹಾಗೂ ಸಿಇಒ ಮಹ್ತರ್ ಕೆಂಟ್ ಹೇಳಿದ್ದಾರೆ.
ಭಾರತವೇ ಏಕೆ? : ಈಗಲೂ ಜಾಗತಿಕವಾಗಿ ತಂಪು ಪಾನೀಯ ಮಾರುಕಟ್ಟೆಯಲ್ಲಿ ಶೇ 52 ರಷ್ಟು ಪಾಲು ಹೊಂದಿದ್ದು, ಶೇ 21.4 ರಷ್ಟು ಪಾಲು ಹೊಂದಿರುವ ಪೆಪ್ಸಿಕೋ ಗಿಂತ ಮುಂದಿದೆ. ಆದರೆ, ಭಾರತದ ಮಾರುಕಟ್ಟೆಯಲ್ಲಿ ಕೋಕಾ ಕೋಲಾಗೆ ಕಠಿಣ ಪೈಪೋಟಿ ಎದುರಿಸುತ್ತಿದೆ.
ಭಾರತದಲ್ಲಿ ಕೋಕಾ ಕೋಲಾ ಶೇ 56 ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದರೆ, ಶೇ 40 ರಷ್ಟು ಪಾಲು ಪೆಪ್ಸಿಕೋ ಬಳಿ ಇದೆ.
1993ರಲ್ಲಿ ಥಮ್ಸ್ ಅಪ್, ಸ್ಥಳೀಯ ಸೋಡಾ ಬ್ರಾಂಡ್ ಗಳನ್ನು ಖರೀದಿಸಿದ ಕೋಕಾ ಕೋಲಾ ಮತ್ತೆ ಹಿಂತಿರುಗಿ ನೋಡಿಲ್ಲ, ಸ್ಪ್ರೈಟ್ ಅತಿ ಹೆಚ್ಚು ಮಾರಾಟವಾಗುವ ಬ್ರಾಂಡ್ ಆಗಿದೆ. ಶೇ 16.5ರಷ್ಟು ಪಾಲು ಹೊಂದಿದೆ. ಮಾಜಾ ಜ್ಯೂಸ್ ಕೆಟಗೆರಿಯಲ್ಲಿ ಮುಂಚೂಣಿಯಲ್ಲಿದೆ.
ಸೋಡಾ ಮಾರುಕಟ್ಟೆಯಲ್ಲಿ ಪೆಪ್ಸಿಕೋ ಶೇ 15ರಷ್ಟು ಪಾಲು ಹೊಂದಿದ್ದರೆ ಕೋಕ್ ಶೇ 8.8 ರಷ್ಟು ಮಾತ್ರ ಹೊಂದಿದ್ದು ಹಿಂದೆ ಬಿದ್ದಿದೆ.
ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಮೂಲಕ ಆರ್ಥಿಕ ಏರಿಳಿತಕ್ಕೂ ಉತ್ತರ ನೀಡಲಾಗುವುದು. ಲಾಭ ವನ್ನು ದ್ವಿಗುಣಗೊಳಿಸಲಾಗುವುದು. ಸಚಿನ್ ತೆಂಡೂಲ್ಕರ್ ಅವರಂಥ ಬ್ರಾಂಡ್ ಅಂಬಾಸಿಡರ್ ಮೂಲಕ ಇನ್ನಷ್ಟು ಪ್ರಗತಿ ಕಾಣಲು ಕೋಕಾ ಕೋಲಾ ಯೋಜಿಸಿದೆ ಎಂದು ಸಂಸ್ಥೆಯ ಭಾರತದ ಪ್ರತಿನಿಧಿಗಳು ಹೇಳಿದ್ದಾರೆ. ಸಂಸ್ಥೆ 30 ಬಿಲಿಯನ್ ಡಾಲರ್ ಹೂಡಿಕೆ ಸುದ್ದಿ ಹಬ್ಬಿದ ತಕ್ಷಣ ಮಂಗಳವಾರ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಶೇ 31 ರಷ್ಟು ಷೇರುಗಳು ಏರಿಕೆ ಕಂಡಿತ್ತು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications