ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುವೈತ್‌ನಲ್ಲಿ ಸಮುದ್ರಪಾಲಾದ ಮಂಗಳೂರು ಯುವಕರು

By Prasad
|
Google Oneindia Kannada News

ಕುವೈತ್, ಜೂ. 23 : ಈಜಾಡಲೆಂದು ಸಮುದ್ರಕ್ಕಿಳಿದಿದ್ದ ಇಬ್ಬರು ಮಂಗಳೂರಿನ ಯುವಕರು, ಬಲವಾದ ಅಲೆಯ ಹೊಡೆತಕ್ಕೆ ಸಿಲುಕಿ ಜಲಸಮಾಧಿಯಾಗಿರು ದುರ್ಘಟನೆ ಕುವೈತ್‌ನ ಫಹಾಹೀಲ್ ಬಳಿಯ ಮೆಹಾಬುಲ್ಲಾ ಸಮುದ್ರ ತೀರದಲ್ಲಿ ಜೂ.21ರಂದು ಸಂಜೆ 6.30ಕ್ಕೆ ಘಟಿಸಿದೆ.

Santosh Saliayan and Yogish Poojari

ಕಿನ್ನಿಗೋಳಿಯ ಸಂತೋಷ್ ಸಾಲಿಯಾನ್ (26) ಮತ್ತು ಕವೂರಿನ ಯೋಗಿಶ್ ಪೂಜಾರಿ (25) ಮೃತರಾಗಿರುವ ದುರ್ದೈವಿಗಳು. ಅವರಿಬ್ಬರ ಮೃತ ದೇಹಗಳು ಘಟನೆ ನಡೆದ ಕಡಲತೀರದಿಂದ 15 ಕಿ.ಮೀ. ದೂರದ ತೀರದಲ್ಲಿ ಜೂ.22ರಂದು ಶುಕ್ರವಾರ ಸಂಜೆ ದೊರೆತಿದೆ.

ಸಂತೋಷ್ ಸಾಲಿಯಾನ್, ಯೋಗಿಶ್ ಪೂಜಾರಿ ಮತ್ತಿತರ ಸ್ನೇಹಿತರು ಈಜಾಡಲೆಂದು ಸಮುದ್ರಕ್ಕೆ ಇಳಿದಿದ್ದರು. ಆದರೆ, ಕಡಲಿನ ಬಲವಾದ ಅಲೆಗಳು ಇಬ್ಬರನ್ನೂ ತನ್ನೆಡೆಗೆ ಸೆಳೆದುಕೊಂಡವು. ಜೊತೆಯಲ್ಲಿದ್ದ ಸ್ನೇಹಿತರು ಅವರನ್ನು ಪಾರು ಮಾಡಲು ನಡೆಸಿದ ಪ್ರಯತ್ನವೆಲ್ಲ ವಿಫಲವಾಗಿ, ಇಬ್ಬರನ್ನೂ ಸಮುದ್ರ ತನ್ನತ್ತ ಸೆಳೆದುಕೊಂಡುಬಿಟ್ಟಿತು.

ಕೂಡಲೆ ಅಗ್ನಿಶಾಮಕ ದಳ, ಪೊಲೀಸರು ಮತ್ತು ರಕ್ಷಣಾ ದಳದವರು ಘಟನಾ ಸ್ಥಳಕ್ಕೆ ಧಾವಿಸಿದರೂ ಪ್ರಯೋಜನವಾಗಲಿಲ್ಲ. ಸಾಕಷ್ಟು ಹುಡುಕಾಟ ನಡೆಸಿದರೂ ಅವರಿಬ್ಬರ ದೇಹಗಳು ಜೂ.21ರಂದು ದೊರೆಯಲಿಲ್ಲ. ಮರುದಿನ 15 ದೂರದಲ್ಲಿ ದೇಹಗಳು ದೊರೆತಿವೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

English summary
Tragedy in Kuwait : Twon Mangaloreans, Santosh Saliayan from Kinnigoli and Yogish Poojari from Kavoor meet water grave at Mehabulla beach near Fahaheel in Kuwait. Their bodies were fished out 15 kms away from the tragic incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X