ರೇವ್ ಪಾರ್ಟಿ ಮಾಡಿ ಸಿಕ್ಕರೂ ಭಯವಿಲ್ಲ

ಅಂಕೋಲ ತಾಲೂಕಿನ ಹೊನ್ನೆಬೈಲ್ ಬಳಿ ಹನಿಬೀಚ್ ರೆಸಾರ್ಟ್ನಲ್ಲಿ ಶನಿವಾರ ಮಧ್ಯರಾತ್ರಿ ನಡೆದ ಮಹಿಳೆಯರ ಅರೆನಗ್ನ ನೃತ್ಯ, ರೇವ್ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ನಾಲ್ವರು ಯುವತಿಯರು ಸೇರಿದಂತೆ 14 ಜನರನ್ನು ಬಂಧಿಸಿ, ನಗದು ಮತ್ತು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರ ಹೆಸರು ಹೀಗಿದೆ: ಅರೆನಗ್ನ ನೃತ್ಯದ ಮಾಡುತ್ತಿದ್ದ ಯುವತಿಯರು ಸುಮಾರು 20 ರಿಂದ 35 ವರ್ಷ ವಯಸ್ಸಿನವರು.. ರಾಜ ಕುಮಾರ್ ಶೆಟ್ಟಿ, ಸಂದೀಪ್ ಶೆಟ್ಟಿ, ಸಚಿನ್ ಶೆಟ್ಟಿ, ಆರೀಫ್ ಇನಾಯತುಲ್ಹಾ, ಯಶವಂತ್ ಪೂಜಾರಿ, ಹರೀಶ್ ಶೆಟ್ಟಿ ಹಾಗೂ ಮಧು ವೆಂಕಪ್ಪ ಶೆಟ್ಟಿ ಎಲ್ಲರೂ ಮಂಗಳೂರಿನವರು. ಬಾಗಲಕೋಟೆ, ಹುಬ್ಬಳ್ಳಿಯ ತಲಾ ಒಬ್ಬ ಯುವತಿ ಮತ್ತು ನೇಪಾಳದ ಇಬ್ಬರು ಯುವತಿಯರು ಇದ್ದರು.
ವೆಂಕಟ ರಮಣ ನಾಯಕ್ ಹಾಗೂ ಹರೀಶ್ ನಾಯಕ್ ಅವರು ರೇವ್ ಪಾರ್ಟಿ ಆಯೋಜಿಸಿದ್ದರು. ಪೊಲೀಸ್ ದಾಳಿ ನಡೆದಾಗ ಮಹಿಳೆಯರು ಅರೆ ನಗ್ನರಾಗಿದ್ದರು, ಇಂಗ್ಲೀಷ್ ಹಾಡಿಗೆ ನರ್ತಿಸುತ್ತಿದ್ದರು ಎನ್ನಲಾಗಿದೆ. ಇದು ಅನಧಿಕೃತ ಪಾರ್ಟಿ ಎಂದು ಡಿವೈಎಸ್ಪಿ ಉಲ್ಲಾಸ ವೆರ್ಣೇಕರ ಹೇಳಿದ್ದಾರೆ.
ಬಂಧಿತರಿಂದ ರೂ 1.23 ಲಕ್ಷ ನಗದು, 10 ಮೊಬೈಲ್ ಸೆಟ್ ಮತ್ತು ಧ್ವನಿವರ್ಧಕಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಸಿಪಿಐ ಎಸ್. ವಿಜಯ ಪ್ರಸಾದ, ಪಿಎಸ್ಐ ಜಾಯ್ ಆ್ಯಂಟನಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
'ನಮ್ಮ ರೆಸಾರ್ಟ್ನಲ್ಲಿ ಯಾವುದೇ ರೇವ್ ಪಾರ್ಟಿ ನಡೆದಿಲ್ಲ. ಪ್ರವಾಸಿಗರೇ ವೃತ್ತಿಪರ ಕಲಾವಿದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ' ಎಂದು ರೆಸಾರ್ಟ್ ಮಾಲೀಕ ಅಂಕೋಲಾದ ವೆಂಕಟ್ರಮಣ ನಾಯಕ ಸ್ಪಷ್ಟಪಡಿಸಿದ್ದಾರೆ.
ಗೋವಾ ಪ್ರಭಾವ: ರೇವ್ ಪಾರ್ಟಿ, ಪಬ್ ಸಂಸ್ಕೃತಿಗೆ ಹೆಸರಾದ ಗೋವಾ ಗಾಳಿ ಈಗ ಕರ್ನಾಟಕದ ಕರಾವಳಿಗೂ ಹಬ್ಬುತ್ತಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಗೋವಾದಿಂದ ಸರಬರಾಜು ಮಾಡಲಾಗುವ ಮಾದಕದ್ರವ್ಯಗಳನ್ನು ಹಂಚಲು ಕರ್ನಾಟಕದ ಕರಾವಳಿಯನ್ನು ಬಳಸಲಾಗುತ್ತಿದೆ, ಗೋಕರ್ಣ ಹಾಗೂ ಹೊನ್ನೆಬೈಲು ತೀರದಲ್ಲಿ ಆಗಾಗ ರೇವ್ ಪಾರ್ಟಿ ನಡೆಯುವುದು ಕಾಮನ್ ಎಂದು ಸ್ಥಳೀಯರು ದೂರಿದ್ದಾರೆ.
ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಹಾಗೂ ಬಿಹಾರದಿಂದ ಕೂಡಾ ಮಾದಕದ್ರವ್ಯಗಳು ಗೋಕರ್ಣದ ಕಡೆಗೆ ಹರಿದು ಬರುವ ಶಂಕೆ ಇದೆ. ಇತ್ತೀಚೆಗೆ ಕಾರವಾರ ರೈಲ್ವೇ ನಿಲ್ದಾಣದಲ್ಲಿ ಹಿಮಾಚಲ ಪ್ರದೇಶದ ಮಹಿಳೆಯೊಬ್ಬಳನ್ನು ಬಂಧಿಸಿ 90 ಲಕ್ಷ ರೂ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು.
ಆದರೆ, ಹೊನ್ನೆಬೈಲಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಳಸಲಾಗಿತ್ತೆ ಎಂಬುದರ ಬಗ್ಗೆ ಅಂಕೋಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಾದಕದ್ರವ್ಯ ಸೇವನೆ ದೃಢಪಟ್ಟರೆ ಮಾತ್ರ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಹೆಚ್ಚಿನ ಅವಕಾಶ ಸಿಗುತ್ತದೆ. ಇಲ್ಲದಿದ್ದರೆ, ರೇವ್ ಪಾರ್ಟಿ ಮಾಡಿ ಮಜಾ ಉಡಾಯಿಸಿ ಸಿಕ್ಕಿಬಿದ್ದರೂ ಜಾಮೀನು ಪಡೆದು ಹೊರ ನಡೆಯುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications