ರೆಡ್ಡಿ ಜಡ್ಜ್ ಪಟ್ಟಾಭಿ ವಿರುದ್ಧ FIR ದಾಖಲು; ಬಂಧನ?
ಇದರಿಂದ ಜಡ್ಜ್ ಪಟ್ಟಾಭಿ ಮತ್ತು ಅಕ್ರಮ ಗಣಿವೀರ ಜನಾರ್ದನ ರೆಡ್ಡಿ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. ರೆಡ್ಡಿ ವಿರುದ್ಧದ ಅಕ್ರಮ ಗಣಿ ಕುಣಿಕೆ ಇನ್ನಷ್ಟು ಬಿಗಿಯಾಗಿದ್ದರೆ ಜಡ್ಜ್ ಪಟ್ಟಾಭಿ ಕಥೆ ಅಯೋಮಯವಾಗಿದೆ. ಜಡ್ಜ್ ಪಟ್ಟಾಭಿ ವಿರುದ್ಧ FIR ದಾಖಲಿಸಿಕೊಂಡು ಅವರನ್ನು ಇಂದೇ (ಶನಿವಾರ) ACB ಬಂಧಿಸುವ ಸಾಧ್ಯತೆಯಿದೆ. ಪ್ರಕರಣದಲ್ಲಿ ಲಂಚ ತಿಂದು ರೆಡ್ಡಿಗೆ ಜಾಮೀನು ನೀಡಿದ್ದು ಸಾಬೀತಾದರೆ ರೆಡ್ಡಿ ಕಥೆ ಮುಗಿಯಿತು ಎಂದೇ ಕಾನೂನು ಪಂಡಿತರು ವಿಶ್ಲೇಷಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಡ್ಜ್ ಪಟ್ಟಾಭಿ ಕಡೆಯಿಂದ ವಶಪಡಿಸಿಕೊಂಡಿರುವ ಅಷ್ಟೂ ಸಾಕ್ಷ್ಯ, ದಾಖಲೆಗಳನ್ನು ಸಿಬಿಐ ACB ಹಸ್ತಾಂತರಿಸಿದೆ. ಮುಖ್ಯವಾಗಿ ಸಿಸಿಟಿವಿ ಕ್ಲಿಪಿಂಗ್ಸ್, ಮೊಬೈನ್ ಫೋನ್ ರೆಕಾರ್ಡಿಂಗ್, ಬ್ಯಾಂಕ್ ಲಾಕರಿನಿಂದ ವಶಪಡಿಸಿಕೊಂಡ ನಗದು ಮುಂತಾದ ಸಾಂದರ್ಭಿಕ ಸಾಕ್ಷ್ಯಗಳನ್ನು ಒದಗಿಸಿದೆ.
ಏನಿದು ಪ್ರಕರಣ: ಸಿಬಿಐ ವಿಶೇಷ ನ್ಯಾಯಾಲಾಯದ ನ್ಯಾಯಾಧೀಶ ಪಟ್ಟಾಭಿ ರಾಮರಾವ್ ಅವರು ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಗಾಲಿ ಜನಾರ್ದನ ರೆಡ್ಡಿ ಅವರಿಂದ ಲಂಚ ಸ್ವೀಕರಿಸಿ, ಕಳೆದ ಮೇ 11ರಂದು ಜಾಮೀನು ಭಾಗ್ಯ ಕರುಣಿಸಿದ್ದಾರೆ ಎಂದು ಸಿಬಿಐ ಆಂಧ್ರ ಹೈಕೊರ್ಟಿಗೆ ದೂರಿತ್ತು.
ಆರೋಪ ಮೇಲ್ನೋಟಕ್ಕೆ ಸಾಬೀತಾಗುತ್ತಿದ್ದಂತೆ ಆಂಧ್ರ ಹೈಕೋರ್ಟಿನ ಅಂದಿನ ಮುಖ್ಯ ನ್ಯಾಯಮೂರ್ತಿ (CJ) ಮದನ್ ಭೀಮರಾವ್ ಲೋಕೂರ್ (ಕರ್ನಾಟಕದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಲೋಕೂರಿನವರು. ಪ್ರಸ್ತುತ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ) ತಕ್ಷಣ ರೆಡ್ಡಿ ಜಡ್ಜ್ ಪಟ್ಟಾಭಿಯನ್ನು ಅಮಾನತು ಮಾಡಿದ್ದರು.
ಲಂಚ ಪಡೆದು ಆರೋಪಿಗೆ ಜಾಮೀನು ನೀಡಿದ ಆರೋಪದ ಮೇಲೆ ನ್ಯಾಯಾಧೀಶಯರನ್ನೇ ಅಮಾನತು ಮಾಡಿದ ಅಪರೂಪದ, ಆಘಾತಕಾರಿ ಪ್ರಕರಣ ಇದಾಗಿದ್ದರೆ ರೆಡ್ಡಿಯ ಗಣಿ ಅಕ್ರಮಗಳಿಗೆ ಹೊಸ ತಿರುವು ಸಿಕ್ಕಿತ್ತು.
AP civil services (CC