ಭೀಕರವಾಗಿ ಹತ್ಯೆಯಾದ ದಿವ್ಯಾಳ ಹಂತಕರಿಬ್ಬರ ಬಂಧನ

ಖಾಸಗಿ ಕಂಪನಿಯಲ್ಲಿ ಕೆಲಸಕ್ಕಿದ್ದ ದಿವ್ಯಾ ಕೆಲಸದಿಂದ ಬಿಟಿಎಂ ಲೇಔಟಿನ ಎರಡನೇ ಹಂತದ 7ನೇ ಅಡ್ಡರಸ್ತೆಯಲ್ಲಿ ಸಂಜೆ 7 ಗಂಟೆಯ ಸುಮಾರಿಗೆ ಮನೆಗೆ ಮರಳುತ್ತಿದ್ದಾಗ ಬೈಕಿನ ಮೇಲೆ ಬಂದ ಇಬ್ಬರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ದಿವ್ಯಾ ಅಪೋಲೊ ಆಸ್ಪತ್ರೆಯಲ್ಲಿ ಅಸುನೀಗಿದ್ದಳು.
ನಾವಿಬ್ಬರೂ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದವು. ಐದು ವರ್ಷಗಳ ಹಿಂದೆ ದಿವ್ಯಾಳೇ ಮದುವೆಯ ಪ್ರಸ್ತಾವನೆ ಇಟ್ಟಿದ್ದಳು. ನನ್ನ ಪಾಲಕರೂ ಒಪ್ಪಿದ್ದರು. ಆದರೆ, ಇನ್ನೂ ಹೆಚ್ಚು ಗಳಿಸುವ ಮತ್ತೊಬ್ಬನೊಂದಿಗೆ ಸ್ನೇಹ ಬೆಳೆಸಿದ ದಿವ್ಯಾ ನನ್ನನ್ನು ನಿರ್ಲಕ್ಷಿಸಲು ಪ್ರಾರಂಭಿಸಿದಳು. ಆಗ ನಾನು ಆಕೆಗೆ ಪಾಠ ಕಲಿಸಬೇಕೆಂದು ತೀರ್ಮಾನಿಸಿದೆ ಎಂದು ರಣಜಿತ್ ಕೃಷ್ಣೇಗೌಡ ಮೈಕೋ ಲೇಔಟ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಆದರೆ, ದಿವ್ಯಾಳ ಮನೆಯವರು ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿರುವ ದಿವ್ಯಾಳ ಸಹೋದರಿಯ ಮೈದುನ ಪ್ರದೀಪ್ನೊಂದಿಗೆ ಮದುವೆಯನ್ನು ನಿಶ್ಚಯಿಸಿದ್ದರು. ಇದನ್ನು ತಿಳಿದ ರಣಜಿತ್, ಪ್ರದೀಪನಿಗೆ ಫೋನ್ ಮಾಡಿ, ದಿವ್ಯಾಳನ್ನು ಮದುವೆಯಾದರೆ ಸರಿ ಇರುವುದಿಲ್ಲ, ಆಕೆಯಿಂದ ದೂರವಿರು ಎಂದು ಬೆದರಿಕೆ ಹಾಕಿದ್ದ. ಇದು ಮನೆಯವರಿಗೆ ತಿಳಿದು ಸಾಕಷ್ಟು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಈ ಬೆದರಿಕೆಗಳಿಗೆ ಉಡುಪಿ ಜಿಲ್ಲೆ ಸಾಲಿಗ್ರಾಮ ಮೂಲದ ದಿವ್ಯಾ ಬಗ್ಗದಿದ್ದಾಗ, ಪ್ರೇಮ ವೈಫಲ್ಯದಿಂದ ಕುದಿಯುತ್ತಿದ್ದ ರಣಜಿತ್ ಆಕೆಯನ್ನು ಮುಗಿಸಿಬಿಡಲು ಸ್ಕೆಚ್ ಹಾಕಿದ್ದಾನೆ. ಆ ಕರಾಳ ದಿನ ಮೇ 28ರಂದು ಸೋಮವಾರ ಆಕೆ ಬಿಟಿಎಂ ಬಡಾವಣೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದು ದಿವ್ಯಾಳ ಕತ್ತು ಕುಯ್ದು ಹಾಕಿದ್ದಾನೆ ರಣಜಿತ್. ಸುತ್ತ ಮುತ್ತ ಇದ್ದವರು ಈ ಭೀಕರ ದೃಶ್ಯವನ್ನು ನೋಡಿ, ಏನಾಯಿತೆಂದು ತಿಳಿಯುವ ಮೊದಲೇ ಅಲ್ಲಿಂದ ಇಬ್ಬರೂ ಪರಾರಿಯಾಗಿದ್ದರು.
ನಂತರ ಬೆಂಗಳೂರು ವಾಯವ್ಯ ವಿಭಾಗದ ಡಿಸಿಪಿ ಆಗಿರುವ ಪಿಎಸ್ ಹರ್ಷಾ ಅವರು ಮೂರು ತಂಡಗಳನ್ನು ರಚಿಸಿ ಹಂತಕರಿಬ್ಬರ ಸೆರೆಗೆ ವ್ಯೂಹ ಹೂಡಿದರು. ಅವರಿಬ್ಬರು ಬೆಂಗಳೂರಿನಿಂದ ಕೇರಳದ ಕೋಳಿಕ್ಕೋಡಿಗೆ ಓಡಿಹೋದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರ ತಂಡ ಕೇರಳಕ್ಕೆ ಧಾವಿಸಿತು. ಪೊಲೀಸರು ಬರುತ್ತಿರುವ ಸುಳಿವು ಸಿಗುತ್ತಿದ್ದಂತೆ ಅವರಿಬ್ಬರು ಅಲ್ಲಿಂದಲೂ ಪರಾರಿಯಾದರು. ಕೇರಳ ಬಸ್ಸಿನಲ್ಲಿ ಪಯಣಿಸುತ್ತಿದ್ದಾಗ ಹೊಸೂರು ಬಳಿ ಹಂತಕರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications