ಹುಷಾರು! ಇಂಟರ್ನೆಟ್ ಪ್ರೇಮಿಗೆ 5 ಲಕ್ಷ ರು ದೋಖಾ

ಏನಾಯಿತೆಂದರೆ ಗುರ್ ಗಾಂವನ ಪಾಲಂ ವಿಹಾರದ ಯುವಕನೊಬ್ಬ ಇಂಟರ್ನೆಟ್ಟಿನಲ್ಲಿ ಜಾಲಾಡುತ್ತಿದ್ದಾಗ ಹುಡಗಿಯೊಬ್ಬಳು ಬಲೆಗೆ ಬಿದ್ದಿದ್ದಾಳೆ. ಇದರಿಂದ ಆನಂದತುಂದಿಲಿತನಾದ ಯುವ ಪ್ರೇಮಿ, ಅವಳೊಂದಿಗೆ ಮತ್ತಷ್ಟು chat ಮಾಡಿದ್ದಾನೆ. ಸುಮಾರು ಒಂದು ವರ್ಷದ chat ಅದ್ಯಾವುದೋ ಮಾಯೆಯಲ್ಲಿ ಪ್ರೇಮಕ್ಕೆ ತಿರುಗಿಕೊಂಡಿದೆ.
ಸರಿ, one fine day ಪಾಗಲ್ ಯುವ ಪ್ರಿಯಕರ 'ಹುಡುಗಿಯನ್ನು' ಭೇಟಿ ಮಾಡಲು ನಿರ್ಧರಿಸಿಯೇ ಬಿಟ್ಟ. ಆದರೆ ಅದಕ್ಕೂ ಮುನ್ನ 'ಹುಡುಗಿ' ಒಂದು ಕಂಡೀಷನ್ ಇಟ್ಟಳು -'ನನಗೆ ಸಿಕ್ಕಾಪಟ್ಟೆ family peoblems ಇದೆ. ತಕ್ಷಣಕ್ಕೆ ಅರ್ಜೆಂಟಾಗಿ 5 ಲಕ್ಷ ರುಪಾಯಿ ಬೇಕು, ಏನ್ಮಾಡೋದು' ಎಂದು ಗೋಳು ತೋಡಿಕೊಂಡಳು.
ಮಿಕ ಬಲೆಗೆ ಬೀಳಲು ಕಾದಿತ್ತು. ಆತುರಪಟ್ಟ ಅರಿವುಗೇಡಿ ಹುಡುಗ 'ಸರಿ ತಗೋ ನಿನ್ನ ಬ್ಯಾಂಕ್ ಖಾತೆಗೆ ಅಷ್ಟೂ ದುಡ್ಡನ್ನು ಹಾಕಿದ್ದೇನೆ. ನಿನ್ನ ಸಮಸ್ಯೆಗಳನ್ನು ಮೊದಲು ಪರಿಹರಿಸಿಕೋ' ಎಂದು ಉದಾರ ಮನಸು ತೋರಿದ. ಅದೆ ನಿಜಕ್ಕೂ ಕಷ್ಟದಲ್ಲಿರುವ ವಿದ್ಯಾರ್ಥಿಯೋ ಅಥವಾ ಮತ್ಯಾರೋ ಅರ್ಹ ವ್ಯಕ್ತಿ ಹೀಗೆ ಸಹಾಯ ಕೇಳಿದ್ದರೆ ನಮ್ಮ ಹುಡುಗ ಹೀಗೇ ದುಡ್ಡು transfer ಮಾಡುತ್ತಿದ್ದನಾ? ಎಂಬುದು ಚಿಂತನಾರ್ಹ ವಿಷಯ. ಅದಿರಲಿ ವಿಷಯ ಮುಂದೇನಾಯಿತೋ ನೋಡಿ.
ಬ್ಯಾಂಕ್ ಖಾತೆಯಲ್ಲಿ ಹಣ ಜಮಾವಣೆಯಾಗುತ್ತಿದ್ದಂತೆ ಆ 'ಹುಡುಗಿ' ಕೈ ಎತ್ತಿದ್ದಳು. ಸರಿ ಹುಡುಗ ತಲೆ ಮೇಲೆ ಕೈಹೊತ್ತುಕೊಂಡೇ ಪಾಲಂ ವಿಹಾರ್ ಪೊಲಿಸ್ ಠಾಣೆ ಮೆಟ್ಟಿಲು ಹತ್ತಿದ. ತಕ್ಷಣ 'ಮೋನಿಕಾ ಶೈಲಾ' ಎಂಬ ಹೆಸರಿನ ಹುಡುಗಿಯ ವಿರುದ್ಧ ಐಟಿ ಕಾಯಿದೆಯಡಿ ಸೈಬರ್ ಕ್ರೈಂ ದಾಖಲಾಯಿತು ಅನ್ನಿ.
ಅಷ್ಟಕ್ಕೂ ಈ ಪಾಟಿ ವಂಚನೆಗೊಳಗಾದ ಪಾಗಲ್ ಯುವ ಪ್ರಿಯಕರ ಯಾರಪ್ಪಾ ಅಂದರೆ ಅವನೊಬ್ಬ ಶಿಕ್ಷಕ. ಹೆಸರು ಸಂದೀಪ್ ದಹಿಯಾ. 2011ರ ಮಾರ್ಚ್ ತಿಂಗಳಲ್ಲಿ ಈ ಲವ್ ದೋಖಾ ಗರಿಗೆದರಿತ್ತು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications