ಹುಷಾರು! ಇಂಟರ್ನೆಟ್ ಪ್ರೇಮಿಗೆ 5 ಲಕ್ಷ ರು ದೋಖಾ

ಏನಾಯಿತೆಂದರೆ ಗುರ್ ಗಾಂವನ ಪಾಲಂ ವಿಹಾರದ ಯುವಕನೊಬ್ಬ ಇಂಟರ್ನೆಟ್ಟಿನಲ್ಲಿ ಜಾಲಾಡುತ್ತಿದ್ದಾಗ ಹುಡಗಿಯೊಬ್ಬಳು ಬಲೆಗೆ ಬಿದ್ದಿದ್ದಾಳೆ. ಇದರಿಂದ ಆನಂದತುಂದಿಲಿತನಾದ ಯುವ ಪ್ರೇಮಿ, ಅವಳೊಂದಿಗೆ ಮತ್ತಷ್ಟು chat ಮಾಡಿದ್ದಾನೆ. ಸುಮಾರು ಒಂದು ವರ್ಷದ chat ಅದ್ಯಾವುದೋ ಮಾಯೆಯಲ್ಲಿ ಪ್ರೇಮಕ್ಕೆ ತಿರುಗಿಕೊಂಡಿದೆ.
ಸರಿ, one fine day ಪಾಗಲ್ ಯುವ ಪ್ರಿಯಕರ 'ಹುಡುಗಿಯನ್ನು' ಭೇಟಿ ಮಾಡಲು ನಿರ್ಧರಿಸಿಯೇ ಬಿಟ್ಟ. ಆದರೆ ಅದಕ್ಕೂ ಮುನ್ನ 'ಹುಡುಗಿ' ಒಂದು ಕಂಡೀಷನ್ ಇಟ್ಟಳು -'ನನಗೆ ಸಿಕ್ಕಾಪಟ್ಟೆ family peoblems ಇದೆ. ತಕ್ಷಣಕ್ಕೆ ಅರ್ಜೆಂಟಾಗಿ 5 ಲಕ್ಷ ರುಪಾಯಿ ಬೇಕು, ಏನ್ಮಾಡೋದು' ಎಂದು ಗೋಳು ತೋಡಿಕೊಂಡಳು.
ಮಿಕ ಬಲೆಗೆ ಬೀಳಲು ಕಾದಿತ್ತು. ಆತುರಪಟ್ಟ ಅರಿವುಗೇಡಿ ಹುಡುಗ 'ಸರಿ ತಗೋ ನಿನ್ನ ಬ್ಯಾಂಕ್ ಖಾತೆಗೆ ಅಷ್ಟೂ ದುಡ್ಡನ್ನು ಹಾಕಿದ್ದೇನೆ. ನಿನ್ನ ಸಮಸ್ಯೆಗಳನ್ನು ಮೊದಲು ಪರಿಹರಿಸಿಕೋ' ಎಂದು ಉದಾರ ಮನಸು ತೋರಿದ. ಅದೆ ನಿಜಕ್ಕೂ ಕಷ್ಟದಲ್ಲಿರುವ ವಿದ್ಯಾರ್ಥಿಯೋ ಅಥವಾ ಮತ್ಯಾರೋ ಅರ್ಹ ವ್ಯಕ್ತಿ ಹೀಗೆ ಸಹಾಯ ಕೇಳಿದ್ದರೆ ನಮ್ಮ ಹುಡುಗ ಹೀಗೇ ದುಡ್ಡು transfer ಮಾಡುತ್ತಿದ್ದನಾ? ಎಂಬುದು ಚಿಂತನಾರ್ಹ ವಿಷಯ. ಅದಿರಲಿ ವಿಷಯ ಮುಂದೇನಾಯಿತೋ ನೋಡಿ.
ಬ್ಯಾಂಕ್ ಖಾತೆಯಲ್ಲಿ ಹಣ ಜಮಾವಣೆಯಾಗುತ್ತಿದ್ದಂತೆ ಆ 'ಹುಡುಗಿ' ಕೈ ಎತ್ತಿದ್ದಳು. ಸರಿ ಹುಡುಗ ತಲೆ ಮೇಲೆ ಕೈಹೊತ್ತುಕೊಂಡೇ ಪಾಲಂ ವಿಹಾರ್ ಪೊಲಿಸ್ ಠಾಣೆ ಮೆಟ್ಟಿಲು ಹತ್ತಿದ. ತಕ್ಷಣ 'ಮೋನಿಕಾ ಶೈಲಾ' ಎಂಬ ಹೆಸರಿನ ಹುಡುಗಿಯ ವಿರುದ್ಧ ಐಟಿ ಕಾಯಿದೆಯಡಿ ಸೈಬರ್ ಕ್ರೈಂ ದಾಖಲಾಯಿತು ಅನ್ನಿ.
ಅಷ್ಟಕ್ಕೂ ಈ ಪಾಟಿ ವಂಚನೆಗೊಳಗಾದ ಪಾಗಲ್ ಯುವ ಪ್ರಿಯಕರ ಯಾರಪ್ಪಾ ಅಂದರೆ ಅವನೊಬ್ಬ ಶಿಕ್ಷಕ. ಹೆಸರು ಸಂದೀಪ್ ದಹಿಯಾ. 2011ರ ಮಾರ್ಚ್ ತಿಂಗಳಲ್ಲಿ ಈ ಲವ್ ದೋಖಾ ಗರಿಗೆದರಿತ್ತು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications