ಯಡಿಯೂರಪ್ಪ ಶ್ರೀರಕ್ಷೆ ಬೇಡಿದ ವಾಟಾಳ್ ನಾಗರಾಜ್

ಮಲ್ಲೇಶ್ವರಂನಲ್ಲಿ ಕಚೇರಿಯಲ್ಲಿ ಮಂಗಳವಾರ(ಮೇ.22)ಎಂದಿನಂತೆ 'ಜನ ಸಂಪರ್ಕ'ಕ್ಕಾಗಿ ಕಾದು ಕೂತ್ತಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗಡಿನಾಡಿನ ಕನ್ನಡ ದನಿ ವಾಟಾಳ್ ನಾಗರಾಜ್ ಅವರು ಎದುರಾಗಿದ್ದು ನೋಡಿ ಸಂತೋಷ ಹೆಚ್ಚಾಗಿದೆ.
ಬಹುದಿನಗಳ ನಂತರ ಭೇಟಿಗೆ ಬಂದ ಹಳೆ ಗೆಳೆಯನನ್ನು ಪಕ್ಕದಲ್ಲಿ ಕೂಡಿಸಿಕೊಂಡು ಯಡಿಯೂರಪ್ಪ ಅವರು ಮಾತನಾಡಿದ್ದಾರೆ. ನಂತರ ಪೀಠಿಕೆ ಹಾಕಿದ ವಾಟಾಳ್, ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುತ್ತಿದ್ದೇನೆ ದಯವಿಟ್ಟು ನನಗೆ ನಿಮ್ಮ ಶ್ರೀರಕ್ಷೆ ಬೇಕು ಎಂದು ಕೈ ಜೋಡಿಸಿದ್ದಾರೆ.
ಕನ್ನಡ ಪರ ಹೋರಾಟಗಾರರು ನೀವು, ನಂದು ಜನಪರ ಹೋರಾಟಗಾರ, ಜನರಿಗೆ ಒಳ್ಳೆಯದು ಆಗುತ್ತೆ ಯಾಕೆ ಬೇಡ ಎನ್ನಲಿ. ನಿಮಗೆ ನನ್ನ ಬೆಂಬಲ ಕೊಡುತ್ತೇನೆ. ನನ್ನ ಆಪ್ತರ ಬಳಿ ಈ ಬಗ್ಗೆ ಇವತ್ತೇ ಮಾತಾಡುತ್ತೇನೆ ಎಂದು ಯಡಿಯೂರಪ್ಪ ಅವರು ಆಶ್ವಾಸನೆ ನೀಡಿದ್ದಾರಂತೆ.
ವಾಟಾಳ್ ಹಾಗೂ ಯಡಿಯೂರಪ್ಪ ಅವರ ನಡುವೆ ಮತ್ತೇನು ಮಾತುಕತೆ ನಡೆಯಿತು ಎಂಬುದರ ಬಗ್ಗೆ ಸದ್ಯಕ್ಕೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.












Click it and Unblock the Notifications