ನಕ್ಸಲ್ ದಾಳಿಗೆ ಯಾದಗಿರಿ ಜಿಲ್ಲೆಯ ಸೈನಿಕ ಬಲಿ

ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್ಎಫ್) ಹೆಡ್ ಕಾನ್ಸಟೇಬಲ್ ಆಗಿ ಛತ್ತೀಸಗಢದ ದಂತೇವಾಡದಲ್ಲಿ ಕಳೆದ 18 ವರ್ಷಗಳಿಂದ ಸಗರ (ಬಿ) ಗ್ರಾಮದ ಸುಭಾಶ್ಚಂದ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ನಾಟಕದ ಹೆಮ್ಮೆಯ ಯೋಧ ಸುಭಾಶ್ಚಂದ್ರ ಅವರು ಪತ್ನಿ, ಇಬ್ಬರು ಮಕ್ಕಳನ್ನು ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಅವರ ಅಂತ್ಯ ಸಂಸ್ಕಾರ ತವರೂರಲ್ಲಿ ಬುಧವಾರ ನಡೆಯಲಿದೆ.
ಎಂದಿನಂತೆ ರಾತ್ರಿ ಪಾಳಿ ಕರ್ತವ್ಯಕ್ಕಾಗಿ ಒಬ್ಬ ಸಿಪಿಐ, ಹೆಡ್ ಕಾನ್ಸ್ಟೇಬಲ್, ವಾಹನ ಚಾಲಕ ಮತ್ತು ನಾಲ್ವರು ಪೊಲೀಸರು ಕಾರ್ಖಾನೆಯೊಂದರ ಬಂದೋಬಸ್ತ್ಗೆ ಭಾನುವಾರ ರಾತ್ರಿ 9 ಗಂಟೆಗೆ ಸುಮಾರಿಗೆ ಹೊರಟಾಗ ದಾರಿಯಲ್ಲಿ ಅಡ್ಡಗಟ್ಟಿದ ನಕ್ಸಲ್ ತಂಡ ಗುಂಡಿನ ದಾಳಿ ನಡೆಸಿದೆ ಆಗ ಸುಭಾಶ್ಚಂದ್ರ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.
ಎಸ್ಸೆಸ್ಸೆಲ್ಸಿ ನಂತರ ಸಿಐಎಸ್ಎಫ್ ಸೇರಿದ್ದ ಸುಭಾಶ್ಚಂದ್ರ ಮಡಿವಾಳ ಕರ್ತವ್ಯ ನಿರತರಾಗಿದ್ದಾಗಲೇ ಬಲಿಯಾದದ್ದು ಇಡೀ ಕುಟುಂಬಕ್ಕೆ ಅಘಾತ ನೀಡಿದೆ. ಛತ್ತೀಸ್ಗಡದ ದಂತೇವಾಡದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದೆಹಲಿಗೆ ಸಾಗಿಸಲಾಗಿದೆ. ಅಲ್ಲಿಂದ ಹೈದರಾಬಾದ್ಗೆ ವಿಮಾನದ ಮೂಲಕ ತರಲಾಗುತ್ತದೆ. ಅಲ್ಲಿಂದ ಆಂಬುಲೆನ್ಸ್ ಮೂಲಕ ಸಗರ (ಬಿ) ಗ್ರಾಮಕ್ಕೆ ತರಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.












Click it and Unblock the Notifications