ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡಿಯೂರಪ್ಪ ಪಕ್ಷ ಬಿಡುವುದಿಲ್ಲ: ಸದಾನಂದ ಗೌಡ
ಯಡಿಯೂರಪ್ಪ ಅವರು ಪಕ್ಷ ತೊರೆಯುವುದಿಲ್ಲ ಇದು ಅವರು ಕಟ್ಟಿ ಬೆಳೆಸಿದ ಪಕ್ಷ. ಅವರ ಬೇಡಿಕೆಗಳು ಏನಿದ್ದರೂ ಹೈಕಮಾಂಡ್ ಜೊತೆ ಚರ್ಚಿಸಿ ಬಗೆಹರಿಸಿಕೊಳ್ಳಲಿದ್ದಾರೆ. ಯಡಿಯೂರಪ್ಪ ಆಗಲಿ ಅವರ ಬೆಂಬಲಿತ ಶಾಸಕರಾಗಲಿ ನೀಡುವ ರಾಜೀನಾಮೆ ಸ್ವೀಕರಿಸುವುದಿಲ್ಲ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ಅರುಣ್ ಜೇಟ್ಲಿ ಸಂಧಾನ ಸಫಲ: ಯಡಿಯೂರಪ್ಪ ಅವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ಯಡಿಯೂರಪ್ಪ ಅವರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ (ಸಮಯ 3.28 ನಿಮಿಷ). ಹೀಗಾಗಿ ಯಡಿಯೂರಪ್ಪ ಅವರು ಪಕ್ಷ ತೊರೆಯುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.
ಸಂಜೆ 4 ಗಂಟೆಗೆ ಕೇವಲ ಔಪಚಾರಿಕವಾಗಿ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಪಕ್ಷ ಬಿಡುವುದಿಲ್ಲ ಎಂದು ಯಡಿಯೂರಪ್ಪ ಘೋಷಿಸುವ ಸಾಧ್ಯತೆಯಿದೆ.
Comments
ಯಡಿಯೂರಪ್ಪ ಸದಾನಂದ ಗೌಡ ಬಿಜೆಪಿ ಬಿಕ್ಕಟ್ಟು ಕರ್ನಾಟಕ ಸರ್ಕಾರ yediyurappa sadananda gowda bjp crisis karnataka government
English summary
CM Sadananda Gowda said he is confident that former CM Yeddyurappa won't quit BJP. Resignation of Yeddyurappa aides will also not be acceptable. Crisis will be over. Meanwhile Sadananda Supporters Anand asnotikar and Balachandra Jarakiholi missing.
Story first published: Monday, May 14, 2012, 16:48 [IST]