ಸುಪ್ರೀಂ ಸಂತಸ ತಂದಿದೆ: ದೂರುದಾರ ಹಿರೇಮಠ್
'ನೈಸರ್ಗಿಕ
ಸಂಪತ್ತನ್ನು
ಪ್ರಭಾವಿ
ವ್ಯಕ್ತಿಗಳು
ಲೂಟಿ
ಮಾಡುವುದರ
ವಿರುದ್ಧ
ಕೋರ್ಟ್
ಸ್ಪಷ್ಟ
ತೀರ್ಪು
ನೀಡಿದೆ.
ಅಧಿಕಾರ
ದುರ್ಬಳಕೆ
ಮಾಡಿಕೊಳ್ಳುವವರಿಗೆ
ಇದು
ತಕ್ಕ
ಪಾಠವಾಗಿದೆ.
ಮುಂದಿನ
ಪೀಳಿಗೆಯ
ಜನಕ್ಕೆ
ನ್ಯಾಯ
ದೊರಕಿಸಿಕೊಡುವಲ್ಲಿ
ಶ್ರಮಿಸುತ್ತಿದ್ದೇನೆ.
ಸಮಾಜದ
ಸ್ವಾಸ್ಥ
ಕಾಪಾಡಲು
ನಡೆಸುತ್ತಿರುವ
ಹೋರಾಟಕ್ಕೆ
ಸಿಕ್ಕಿದ
ಜಯವಾಗಿದೆ'
ಎಂದು
ಧಾರವಾಡದ
ಸಮಾಜ
ಪರಿರ್ತನಾ
ಸಂಸ್ಥೆ
ಮುಖ್ಯಸ್ಥರೂ
ಆದ
ವಕೀಲ
ಹಿರೇಮಠ
ಅವರು
ಹೇಳಿದ್ದಾರೆ.
ತಾವು ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಸುಪ್ರೀಂಕೋರ್ಟ್ ಗೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಮಾಜಿ ಸಿಎಂಗಳ ವಿರುದ್ಧವೂ ಇಂತಹುದೇ ಪ್ರಕರಣಗಳು ಸುಪ್ರೀಂಕೋರ್ಟ್ ಮುಂದೆ ಇವೆ ಎಂದರು.
ಸವಿಸ್ತಾರ ತನಿಖೆ: 'ಗಣಿ ಲಂಚ ಮತ್ತು ಡಿನೋಟಿಫಿಕಶನ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಯಡಿಯೂರಪ್ಪ ಮತ್ತು ಅವರ ಸಂಬಂಧಿಗಳ ವಿರುದ್ಧ ಸಮಗ್ರ ತನಿಖೆಯಾಗಲಿ. ತನಿಖೆಯ ಪ್ರಾಥಮಿಕ ವರದಿಯನ್ನು ಆಗಸ್ಟ್ 3ರ ಒಳಗೆ ಸಲ್ಲಿಸುವಂತೆ ಸಿಬಿಐಗೆ ಕೋರ್ಟ್ ಆದೇಶಿಸಿದೆ. ಪ್ರಕರಣದ ವಿಚಾರಣೆಗಾಗಿ CEC ಸಲ್ಲಿಸಿರುವ ಮಾಹಿತಿಯನ್ನೂ ಗಣನೆಗೆ ತೆಗೆದುಕೊಳ್ಳುವಂತೆ ಸಿಬಿಐಗೆ ಸೂಚಿಸಿದೆ' ಎಂದು ಪ್ರಶಾಂತ್ ಭೂಷಣ್ ತೀರ್ಪಿನ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.