ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿಎಂ ಜಯಲಲಿತಾಗೆ ಜೀವ ಬೆದರಿಕೆ ಇಮೇಲ್
ಮುಖ್ಯಮಂತ್ರಿ ಜಯಲಲಿತಾ ಅಲ್ಲದೆ ಹಲವು ಕ್ಯಾಬಿನೆಟ್ ಸಚಿವರುಗಳಿಗೂ ಬೆದರಿಕೆ ಇಮೇಲ್ ಬಂದಿದೆ. ಮೇ 9 ಏಕಕಾಲಕ್ಕೆ ಇಮೇಲ್ ಬಂದಿದ್ದು, ಮೊದಲಿಗೆ ಅಯರೋ ಹುಡುಗಾಟಕ್ಕೆ ಕಳಿಸಿರಬಹುದು ಎಂದು ಊಹಿಸಲಾಗಿತ್ತು. ಅದರೆ, ವಿಷಯ ತುಂಬಾ ಗಂಭೀರವಾಗಿದೆ. ಬೆದರಿಕೆ ಬಂದವರಿಗೆಲ್ಲ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಚಿಲ್ಲರೆ ವ್ಯಾಪಾರಿಗಳ ಪರ ನಿಂತಿದ್ದ ಜಯಲಲಿತಾ ಅವರು ವಿದೇಶಿ ನೇರ ಬಂಡವಾಳ ಹೂಡಿಕೆ ವಿರುದ್ಧ ಪ್ರತಿಭಟಿಸಿದ್ದರು. ಜಯಲಲಿತಾ ನಿಲುವಿನ ವಿರುದ್ಧ ತಮಿಳುನಾಡಿನ ಉದ್ದಿಮೆಯಲ್ಲಿ ಅಪಸ್ವರ ಕೇಳಿ ಬಂದಿತ್ತು. ಉಳಿದಂತೆ, ಜಯಲಲಿತಾ, ನರೇಂದ್ರ ಮೋದಿ ಸೇರಿದಂತೆ ದೇಶದ ಪ್ರಮುಖ ನಾಯಕರ ಮೇಲೆ ಉಗ್ರರು ಕಣ್ಣಿಟ್ಟಿರುವ ವಿಷಯವನ್ನು ಗುಪ್ತಚರ ಇಲಾಖೆ ಬಹಿರಂಗ ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
Comments
English summary
Tamil Nadu Chief Minister and AIADMK chief Jayalalithaa received an anonymous e-mail with life-threats. Security of the CM has been beefed up following the reports.
Story first published: Thursday, May 10, 2012, 14:31 [IST]