ಮೈಸೂರಿನ ಉದ್ಯಮಿಯ ಕಂಪನಿಗೆ ಅಟ್ಲಾಂಟಾದ ಪ್ರತಿಷ್ಠಿತ ಪ್ರಶಸ್ತಿ

ಜಾಗತಿಕ ರಿಟೈಲರ್ಗಳ ವ್ಯಾಪಾರದಲ್ಲಿ ಉತ್ಪನ್ನ ಮತ್ತು ಉತ್ಪಾದನೆ ಹೆಚ್ಚಿಸಲು ಸಹಕಾರಿಯಾಗುವಂತಹ ತಂತ್ರಜ್ಞಾನ ಮತ್ತು ಹಣಕಾಸು ಸೇವೆಯನ್ನು ನೀಡುವ ಅಗ್ರಗಣ್ಯ ಕಂಪನಿಗಳಲ್ಲಿ ಒಂದಾಗಿರುವ ಎಸ್ಪಿಐ, ಅಟ್ಲಾಂಟಾ ಬಿಸಿನೆಸ್ ಕ್ರಾನಿಕಲ್ನ ಪೇಸ್ಸೆಟ್ಟರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಟ್ಲಾಂಟಾದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ 50 ಕಂಪನಿಗಳನ್ನು ಗುರುತಿಸಿ ಪ್ರಶಸ್ತಿಯನ್ನು ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಈ ಪ್ರಶಸ್ತಿಗೆ ಪಾತ್ರರಾಗಿರಲು ಅನೇಕ ನಿಬಂಧನೆಗಳಿವೆ. ಕಂಪನಿ 2009ರ ಮೊದಲ ತ್ರೈಮಾಸಿಕಕ್ಕೆ ಮೊದಲು ಸ್ಥಾಪಿತವಾಗಿರಬೇಕು. 2009ರಿಂದ 2011ರ ನಡುವಿನಲ್ಲಿ ಶೇ.50ರಷ್ಟು ಆದಾಯ ಹೆಚ್ಚಾಗಿರಬೇಕು. ಮತ್ತು 2011ರಲ್ಲಿ 1-300 ಮಿಲಿಯನ್ ಡಾಲರ್ ಲಾಭ ಗಳಿಸಿರಬೇಕು. ಈ ಎಲ್ಲ ಮಾನದಂಡಗಳನ್ನು ಪೂರೈಸಿದ ಕಂಪನಿ ಮಾತ್ರ ಈ ಪ್ರತಿಷ್ಠಿತ ಪ್ರಶಸ್ತಿಗೆ ಅರ್ಹತೆ ಪಡೆಯುತ್ತದೆ.
"ರಿಟೈಲ್ ಕ್ಷೇತ್ರದಲ್ಲಿ ಕಾಲಿಡುವ ಅನೇಕ ಕಂಪನಿಗಳಿಗೆ ನಿಯಮಿತ ಸಂಪನ್ಮೂಲ ಮತ್ತು ಸೂಕ್ತವಾದ ಪಾಲುದಾರ ದೊರೆಯುವುದು ಬಲು ಕಷ್ಟಕರವಾಗುತ್ತಿದೆ. ಉದ್ಯಮದ ಅಗತ್ಯಗಳನ್ನು ಮೀರಿ ಲಾಭದಾಯಕವಾಗುವುದು ನಿಜಕ್ಕೂ ಸವಾಲಿನ ಕೆಲಸ. ಇಂಥ ಸೇವೆಗಳನ್ನು ನೀಡುತ್ತಿರುವ ಎಸ್ಪಿಐ ಈ ಪೇಸ್ಸೆಟ್ಟರ್ ಪ್ರಶಸ್ತಿಗೆ ಭಾಜನವಾಗಿರುವುದು ನಿಜಕ್ಕೂ ಸಂತಸದ ಸಂಗತಿ. ಮುಂದೆ ಇನ್ನೂ ಅತ್ಯುತ್ತಮವಾದ ಸಲ್ಯೂಷನ್ ನೀಡಲು ಇದು ಪ್ರೇರಣೆಯಾಗಿದೆ" ಎಂದು ಎಸ್ಪಿಐ ಸಿಇಓ ಸಿದ್ ಮೂಕರ್ಜಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಬಗ್ಗೆ ಅಪಾರ ಪ್ರೀತಿ ಹೊಂದಿರು ಸಿದ್ ಅವರು ತಮ್ಮ ಕುಟುಂಬದೊಡನೆ ಆಗಾಗ ಸಾಂಸ್ಕೃತಿಕ ನಗರಿಗೆ ಭೇಟಿ ನೀಡುತ್ತಿರುತ್ತಾರೆ. ಅವರ ಮಕ್ಕಳಾದ ಶೀನಾ ಮೂಕರ್ಜಿ ಮತ್ತು ಶೌನಿಶ್ ಮೂಕರ್ಜಿ ಬದ್ಧಿಮಾಂದ್ಯ ಮಕ್ಕಳಿಗಾಗಿ ನಿಧಿಯನ್ನು ಸಂಗ್ರಹಿಸಿ ಮೈಸೂರಿನ ಸ್ನೇಹ ಕಿರಣ್ ಸಂಸ್ಥೆಗೆ ಗಾಲಿಕುರ್ಚಿಗಳ ರೂಪದಲ್ಲಿ ದಾನ ಮಾಡಿದ್ದರು. ಕಾಮತ್.ಕಾಂನ ವಿಕಾಸ್ ಕಾಮತ್ ಅವರು ಹಿಂದೆ ನಡೆಸಿದ ಸಂದರ್ಶನದಲ್ಲಿ, ಮೈಸೂರಿನ ಹವಾಮಾನ, ವಿದ್ಯಾಭ್ಯಾಸ ಮತ್ತು ಜೀವನಮಟ್ಟ ಅತ್ಯುತ್ತಮವಾಗಿದ್ದರಿಂದ ಎಸ್ಸಿಐ ಕಂಪನಿಯ ಶಾಖೆ ಸ್ಥಾಪಿಸಲು ಮೈಸೂರನ್ನೇ ಆಯ್ಕೆ ಮಾಡಿದ್ದಾಗಿ ಹೇಳಿದ್ದರು.











Click it and Unblock the Notifications