ಬರದ ನಡುವೆ ಬದುಕುತ್ತಿರುವ ಆಸ್ಟ್ರೇಲಿಯಾದ ಹಕ್ಕಿಗಳು

ಕಟ್ಟಿಗೆಯಂತಹ ಕಾಲೂಗಳು, ದೈತ್ಯಾಕಾರದ ದೇಹ, ಒಂಟೆಯಂತಹ ಕುತ್ತಿಗೆ, ಚೂರಿಯಂತಹ ಬಾಯಿ. ಆಸ್ಟ್ರೇಲಿಯಾದ ರಾಷ್ಟ್ರೀಯ ಪಕ್ಷಿ ಉಷ್ಟ್ರಪಕ್ಷಿ (ಆಸ್ಟ್ರೀಚ್) ನಂತರದ ಎರಡನೇ ಅತಿ ದೊಡ್ಡ ಹಾರಲಾಗದ ಪಕ್ಷಿ. ಆದರೆ ಬಿಸಿಲ ನಾಡು ಯಾದಗಿರಿ ಜಿಲ್ಲೆ ಶಹಾಪುರ ಪಟ್ಟಣದಲ್ಲಿ ಡಾ.ಚಂದ್ರಶೇಖರ್ ಸುಬೇದಾರ್ ಎನ್ನುವರು ತಮಿಳುನಾಡಿನ ಬಿಂಡಕಲ್ನಿಂದ ಕಳೆದ ವರ್ಷ 100 ಏಮು ಪಕ್ಷಿ ಮರಿಗಳನ್ನು ತಂದು ಸಾಕ್ತಾಯಿದ್ದಾರೆ. ಐವತ್ತು ಗಂಡು ಹಾಗೂ ಐವತ್ತು ಹೆಣ್ಣೂ ಮರಿಗಳಿವೆ. ಅವುಗಳಿಗೆ ಈಗ ಒಂದು ವರ್ಷ. ಆದರಿಂದಲೇ ಕುರಿ ಸಾಕಾಣಿಕೆ ಬಿಟ್ಟು ಇವುಗಳನ್ನ ಸಾಕಾಣಿಕೆಯಲ್ಲಿ ತೊಡಗಿದ್ದಾರೆ ತೋಟದ ಮಾಲೀಕರಾದ ಕರಣ್ ಸುಬೇದಾರ್.
ಕೃಷಿಕರ ಕಲ್ಪತರು : ಸರಿ ಸುಮಾರು ಐವತ್ತು ಕೆಜಿ ಭಾರವಿರುವ, ಈ ಪಕ್ಷಿಗಳಿಗೆ ಬಹು ಬೇಡಿಕೆ. ಪ್ರತಿಯಂದು ಪಕ್ಷಿಗಳು ಸರಿಸುಮಾರು 20ರಿಂದ 25 ಸಾವಿರ ರೂಪಾಯಿವರೆಗೆ ಮಾರಲ್ಪಡುತ್ತವೆ. ಅದಲ್ಲದೇ ಇದರ ಮಾಂಸಕ್ಕೂ ಹೊರ ರಾಜ್ಯವಲ್ಲದೇ ವಿದೇಶದಲ್ಲೂ ಬಹು ಬೇಡಿಕೆ. ಕೆಜಿ ಮಾಂಸಕ್ಕೆ 700ರಿಂದ 800 ರೂಪಾಯಿ. ಇವುಗಳ ಮೊಟ್ಟೆಗಳು ಬಂಗಾರದ ಮೊಟ್ಟೆಗಳಿದ್ದಂತೆ, ಒಂದಕ್ಕೆ 800ರಿಂದ 1,000 ರೂಪಾಯಿ.
ಹಾಗೇ ಇದರ ಕೊಬ್ಬಿನ ಅಂಶದಿಂದ ಎಣ್ಣೆ ತಯಾರಿಸುತ್ತಾರೆ. ಪ್ರತಿ ಲೀಟರ್ಗೆ 4,000ರಿಂದ 5,000 ರೂಪಾಯಿ ಬೆಲೆ. ಇದರಿಂದ ಮಸಾಜ್ ಎಣ್ಣೆ, ಮೂಳೆ ನೋವು ನಿವಾರಕ ಔಷಧಿ, ಫೇಸ್ ಕ್ರೀಮ್ ಹೀಗೆ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಾರೆ. ಇದರ ಕೂದಲಿನಿಂದ ವಿವಿಧ ಆಟಿಕೆ ಹಾಗೂ ಕಲಾ ವಸ್ತುಗಳನ್ನು ತಯಾರಿಸುತ್ತಾರೆ. ಗರಿಷ್ಠ 50 ಡಿಗ್ರಿ ಸೆಲ್ಶಿಯಸ್ ಬಿಸಿಲಿನ ತಾಪಮಾನದಲ್ಲೂ ನಿರುಮ್ಮಳವಾಗಿ ಇರುತ್ತವೆ. ಕೊಲೆಸ್ಟ್ರಾಲ್ ರಹಿತವಾಗಿರುವುದರಿಂದ ಇವುಗಳ ಮಾಂಸಕ್ಕೆ ಸಖತ್ ಡಿಮ್ಯಾಂಡ್. ಜೋಡಿ ಜೋಡಿಯಾಗಿ ವಿಹರಿಸುವ ಏಮು ಪಕ್ಷಿಗಳು ಒಂಥರಾ ಲವ್ ಬರ್ಡ್ಸ್.
ಸರಳ ನಿರ್ವಹಣೆ, ವೆಚ್ಚ ಕಡಿಮೆ : ಸುಮಾರು ನೂರು ಏಮು ಪಕ್ಷಿಗಳನ್ನು ನೋಡಿಕೊಳ್ಳಲು ಕೇವಲ ಒಬ್ಬ ಆಳನ್ನು ನೇಮಿಸಲಾಗಿದೆ. ಹಾಗೂ ಇವುಗಳ ನಿರ್ವಹಣೆ ವೆಚ್ಚ ತೀರಾ ಕಡಿಮೆ. ರೋಗರುಜಿನಗಳಿಂದಲೂ ಇವು ಬಲು ದೂರ. ಮುಸುಕಿನ ಜೋಳ, ನುಚ್ಚು ಎರೆಹುಳ, ಕೀಟ, ಇರುವೆ ಇವುಗಳ ಆಹಾರ. ಕೆಲವೊಮ್ಮೆ ಚಿಕ್ಕ ಕಲ್ಲುಗಳನ್ನು ಸಹ ತಿನ್ನುತ್ತವೆ ಅಂತಾರೆ ಏಮು ಪಕ್ಷಿಗಳನ್ನು ಪಾಲನೆ ಮಾಡುತ್ತಿರುವ ಸಿದ್ದಪ್ಪ.
ಕರಣ್ ಸುಬೇದಾರ್ ವೃತ್ತಿಯಲ್ಲಿ ಇಂಜಿನಿಯರ್ ಆದರು ಸಹ, ಕೃಷಿಯಲ್ಲಿ ವೈಜ್ಞಾನಿಕ ವಿಧಾನವನ್ನು ಆಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಹೊಸ ಹೊಸ ಲಾಭದಾಯಕ ಯೋಜನೆಗಳನ್ನು ಮಾಡುತ್ತಾ ತಾವು ಇಂಜಿನಿಯರ್ ಅನ್ನೋ ಗರ್ವ ಬಿಟ್ಟು ಈ ಒಂದು ಲಾಭದಾಯಕ ಕೃಷಿಯಲ್ಲಿ ತೊಡಗಿದ್ದಾರೆ. ನಮ್ಮ ದೇಶದ ಪಕ್ಷಿಗಳನ್ನು ಸಾಕೋಕೆ ಹಿಂದೆ ಮುಂದೆ ನೋಡೋ ಈಗಿನ ಕಾಲದಲ್ಲಿ, ಇವ್ರು ಆಸ್ಟ್ರೇಲಿಯಾದ ಪಕ್ಷಿಗಳ ಸಾಕಾಣಿಕೆ ಮಾಡುತ್ತಿರುವುದಕ್ಕೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications