ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿಗೆ ಇಂದು ಏನು ಕಾದಿದೆಯೋ...?

By Srinath
|
Google Oneindia Kannada News

denotification-if-no-bail-in-hc-hdk-may-be-arrest
ಬೆಂಗಳೂರು, ಏ.17: 'ಅರ್ಕಾವತಿ ಬಡಾವಣೆಯ ಬಿಡಿಎ ನಿವೇಶನಗಳ ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಕುಮಾರಸ್ವಾಮಿ ಅಕ್ರಮ ಸಾಬೀತಾಗಿದೆ' ಎಂದು ಅತ್ತ ಲೋಕಾಯುಕ್ತ ಪೊಲೀಸರು ಸೋಮವಾರ ಚಾರ್ಜ್ ಷೀಟ್ ಸಲ್ಲಿಸುತ್ತಿದ್ದಂತೆ ಇತ್ತ ಬಂಧನದ ಭೀತಿಗೊಳಗಾದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಕ್ಷಣ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟಿಗೆ ಅರ್ಜಿ ಹಾಕಿಕೊಂಡಿದ್ದಾರೆ.

ಇದು ಇಂದು ವಿಚಾರಣೆಗೆ ( ಮಂಗಳವಾರ) ಬರಲಿದೆ. ಪ್ರಕರಣದಲ್ಲಿ A1ಆಗಿರುವ ಜಾಮೀನು ಸಿಗದಿದ್ದರೆ ಕುಮಾರಸ್ವಾಮಿಗೆ ಭಾರಿ ಹಿನ್ನಡೆಯಾಗಲಿದೆ. ಇನ್ನು, A2 ಮಾಜಿ ಸಚಿವ ಚನ್ನಿಗಪ್ಪ ಅವರಿಗೂ ಸಂಕಷ್ಟ ಎದುರಾಗಲಿದೆ.

ಅಗತ್ಯಬಿದ್ದಲ್ಲಿ ಸ್ವತಃ ಲೋಕಾಯುಕ್ತ ಪೊಲೀಸರು ಬಂಧಿಸಬಹುದು ಅಥವಾ ಲೋಕಾಯುಕ್ತ ಕೋರ್ಟ್ ಕುಮಾರಸ್ವಾಮಿ ಬಂಧನಕ್ಕೆ ಆದೇಶಿಸಬಹುದು. ಗಮನಾರ್ಹವೆಂದರೆ 'ಅಕ್ರಮ ಸಾಬೀತಾಗಿದೆ' ಎಂದು ಆರೋಪಪಟ್ಟಿ ದಾಖಲಿಸಿರುವುದು ಸ್ಪಷ್ಟವಾಗಿರುವಾಗ ಹೈಕೋರ್ಟ್ ಸಹ ಜಾಮೀನು ನೀಡಲು ಮುಂದಾಗುವುದಿಲ್ಲ.

ಥಣಿಸಂದ್ರ ಗ್ರಾಮದಲ್ಲಿನ 3.08 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ಪ್ರಕರಣದಲ್ಲಿ ಕುಮಾರಸ್ವಾಮಿ ಸಿಲುಕಿದ್ದಾರೆ. ಪ್ರಕರಣದಲ್ಲಿ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುತ್ತಿದ್ದಂತೆ ತಮ್ಮನ್ನು ಪೊಲೀಸರು ಬಂಧಿಸಬಹುದು ಎಂಬ ಭಯದಿಂದ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಪೊಲೀಸರು ತಮ್ಮನ್ನು ಬಂಧಿಸದಂತೆ ಆದೇಶಿಸಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.

ಇದೇ ವೇಳೆ ಕಾಕತಾಳೀಯವೋ ಎಂಬಂತೆ ಮತ್ತಷ್ಟು ರಾಜಕೀಯ ಮುಖಂಡರು ಜೈಲಿಗೆ ಹೋಗಲಿದ್ದಾರೆ ಎಂದು ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಕೊಪ್ಪಳದ ಕುಕನೂರುನಲ್ಲಿ ಸೋಮವಾರ ಭವಿಷ್ಯ ನುಡಿದಿದ್ದಾರೆ.

English summary
The Lokayukta police have chargesheeted former chief minister H.D. Kumaraswamy and former minister C. Chennigappa and two others for allegedly illegally denotifying land. This had not only caused a huge loss to the state exchequer, also denied sites to 44 allottees. Fearing the arrest HDK applied for anticipatory bail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X