ರವಿ ಬೆಳಗೆರೆ: ಟಿವಿ9, ಸುವರ್ಣದಿಂದ ಸಖತ್ ವೀಕೆಂಡ್

ಈ ವೀಕೆಂಡ್ ಎಪಿಸೋಡ್ ವೀಕ್ಷಕ ಮಹಾಶಯರಿಗೆ ಅಗತ್ಯವಿತ್ತಾ? ಎಂಬುದಕ್ಕಿಂತ ಅಂತಹುದಕ್ಕೆ TV9 ಮತ್ತು ಸುವರ್ಣ ಚಾನೆಲುಗಳು ವೇದಿಕೆಯನ್ನೊದಗಿಸಿದವು. ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಅದದರದೇ ಕಾರಣಗಳಿಗಾಗಿ ಚಾರಿತ್ರಿಕ ದಿನವಾಗಿ ಹೋಯಿತು.
ಅಥವಾ Public TVಯಲ್ಲಿ ರಂಗಣ್ಣ ಹೇಳಿದಂತೆ ಚಿತ್ರಕ್ಕೆ ಪುಗಸಟ್ಟೆ ಪ್ರಚಾರ ಗಿಟ್ಟಿಸುವ ಗಿಮಿಕ್ ಇದಾಗಿತ್ತಾ? ಎಂಬ ಪ್ರಶ್ನೆಯೂ ಕಾಡಬಹುದು. ಆದರೆ ಸುವರ್ಣ ನ್ಯೂಸ್ ಮಂದಿ ಬೆಟ್ಟ ಅಗೆಯುತ್ತಾ ಕಾರ್ಯಕ್ರಮದ ಕೊನೆಗೆ ಬಂದಾಗ ರಂಗನಾಥ್ ಭಾರದ್ವಾಜ್ 'ವಿಷಯ ಎಲ್ಲೆಲ್ಲಿಗೋ ಹೋಗುತ್ತಿದೆ. ಆದರೂ ಭೀಮಾ ತೀರದಲ್ಲಿ ಚಿತ್ರಕ್ಕೆ ಮಾತ್ರ ಭರ್ಜರಿ ಪುಗಸಟ್ಟೆ ಪ್ರಚಾರ ಸಿಕ್ಕಿತು' ಎಂದು ಎಂದಿನಂತೆ ಆತುರದಿಂದ ಅಂದುಬಿಟ್ಟರು.
ಅದಕ್ಕೆ ಅನತಿ ದೂರದಲ್ಲೇ ಕುಳಿತಿದ್ದ ದುನಿಯಾ ವಿಜಿ ಮೈಕೊಡವಿಕೊಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದಂತೆ ಇದು ಪ್ರಚಾರ ಗಿಟ್ಟಿಸುವ ಗಿಮಿಕ್ ಅಂತೂ ಆಗಿರಲಿಲ್ಲ ಎನಿಸುತ್ತದೆ.
ಭಾರಿ ಮಳೆಯನಂತರ ಇನ್ನೂ ಹನಿ ನಿಂತಿಲ್ಲ... ವಿಷಯ ಇನ್ನೂ ಭಾರಿ ಚರ್ಚೆಗೆ ಎಡವು ಮಾಡಿಕೊಟ್ಟಿದೆ. ಮಾಧ್ಯಮದ ಮಿತ್ರರು, ಸಿನಿಮಾ ಮಂದಿ, ಕೊನೆಗೆ ಕದನ ಕುತೂಹಲಿಗಳು ವಿಷಯವನ್ನು ಇನ್ನೂ ಜೀವಂತವಿಟ್ಟಿದ್ದಾರೆ. ಮಂದಿ ತಮ್ಮ ಮೂಗಿನ ನೇರಕ್ಕೆ, ತಮ್ಮವರ ಪರ ವಹಿಸಿಕೊಂಡು ಸಮರೋಪಾದಿಯಲ್ಲಿ ಮಾತಿನ ಕದನಕ್ಕೆ ಇಳಿದಿದ್ದಾರೆ. ಕೊನೆಗೆ, ಯುದ್ಧ ಗೆದ್ದವರಂತೆ ಮೀಸೆ ತಿರುವಿಕೊಳ್ಳುತ್ತಿದ್ದಾರೆ.
ನಿಮ್ಮ ಮೆಚ್ಚಿನ 'ದಟ್ಸ್ ಕನ್ನಡ' ಯಾರದೇ ಪರ-ವಿರೋಧ ವಹಿಸಿಕೊಳ್ಳದೆ ಚಾನೆಲುಗಳಲ್ಲಿ ನಡೆದ ಕದನ ಕಥನವನ್ನು ಯಥಾವತ್ತಾಗಿ ವರದಿ ಮಾಡುತ್ತಿದೆ. ಇದರಿಂದ 'ದಟ್ಸ್ ಕನ್ನಡ'ದಲ್ಲೂ ಈ ವೀಕೆಂಡ್ ಎಪಿಸೋಡ್ ಕುರಿತು ಚರ್ಚೆಗಳು ನಡೆಯುತ್ತಿವೆ. ಓದುಗ ದೊರೆಗಳು ಒಂದೇ ಸಮನೆ ತಮ್ಮ ಖಡಕ್ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ವಿಷಯ ಕುರಿತು ಈ ವಾರವೆಲ್ಲ ಚರ್ಚೆ ನಡೆಯುವ ಲಕ್ಷಣಗಳು ಹೆಚ್ಚಾಗಿವೆ.
ಈ ಮಧ್ಯೆ, ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಅವರು ನಿನ್ನೆ ರಾತ್ರಿ ಮತ್ತೆ TV9ನ ಚಕ್ರವ್ಯೂಹ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಮೇಲೆ ಬಂದಿರುವ ಆಪಾದನೆಗಳನ್ನು ತೊಡೆದು ಹಾಕಿ, ದೋಷ ಮುಕ್ತರಾಗಲು ಯತ್ನಿಸಿದರು. ಆ ಬಗ್ಗೆಯೂ 'ದಟ್ಸ್ ಕನ್ನಡ'ದಲ್ಲಿ ವರದಿಗಳಿವೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications