ಸದಾನಂದ ಗೌಡರಿಗೆ ವರವಾದ ಆ ಒಂದು ಭೇಟಿ

ಇತಿಹಾಸದ ಒಂದೆರಡು ಪುಟ ತಿರುವಿದಾಗ...
ಉರಿಮಜಲು ಕೆ ರಾಮಭಟ್ಟರು 2 ಬಾರಿ ಪ್ರತಿನಿಧಿಸಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅವರ ಮತ್ತೊಬ್ಬ ಶಿಷ್ಯೆ ಶಕುಂತಲಾ ಶೆಟ್ಟಿ ಮರುಆಯ್ಕೆಗೆ ಟಿಕೆಟ್ ನಿರಾಕರಿಸಲಾಗಿತ್ತು. ಸದಾನಂದಗೌಡರೇ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬುದು ಎಲ್ಲರ ಎಣಿಕೆಯಾಗಿತ್ತು.
ಆಗಲೇ 'ಸ್ವಾಭಿಮಾನಿ ವೇದಿಕೆ' ತಲೆಯೆತ್ತಿದ್ದು. ತತ್ಫಲವಾಗಿ, ದೀರ್ಘ ಕಾಲದಿಂದ ಸದಾನಂದರಿಗೆ ಗುರು, ಗೈಡ್ ಆಗಿದ್ದ ರಾಮಭಟ್ಟರು ನಿಜಕ್ಕೂ ಸದಾನಂದರಿಂದ ಬಹುದೂರ ಸಾಗಿದ್ದರು. ಶಕುಂತಲಾಗೆ ಟಿಕೆಟ್ ನೀಡದಿರುವುದನ್ನು ಪ್ರತಿಭಟಿಸಿ ರಾಮಭಟ್ಟರು ಬಿಜೆಪಿ ವಿರುದ್ಧವೇ ಲೋಕಸಭೆ ಚುನಾವಣೆಗೂ ನಿಂತು, ಸೋತರು. ಪಕ್ಷದ ಶಿಸ್ತಿನ ಸಿಪಾಯಿ ರಾಮಭಟ್ಟರ ವಿರುದ್ಧ 'ಶಿಸ್ತು ಕ್ರಮವಾಗಿ ಪಕ್ಷದಿಂದ ಉಚ್ಛಾಟಿಸುವ' ಮಂತ್ರವನ್ನು ಉಚ್ಚರಿಸಲು ಬಿಜೆಪಿ ಉದ್ದೇಶಪೂರ್ವಕವಾಗಿ ಮರೆತಿತ್ತು.
ಅದಕ್ಕೂ ಮುನ್ನ ಬಿಜೆಪಿಯಲ್ಲಿ ರಾಮಭಟ್ಟರ ಹಿಡಿತ ಹೇಗಿತ್ತೆಂದರೆ... ಭಾರತೀಯ ಜನಸಂಘದ ದಿನಗಳಿಂದಲೂ ವಾಜಪೇಯಿ ಮತ್ತು ಅಡ್ವಾಣಿ ಅವರಿಗೆ ತೀರಾ ಹತ್ತಿರವಾಗಿದ್ದ ರಾಮಭಟ್ಟರನ್ನು ಎನ್ ಡಿಎ ಆಡಳಿತದ ಕಾಲದಲ್ಲಿ ಉತ್ತರದ ಯಾವುದಾದರೂ ಒಂದು ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೇಮಿಸುವ ವಿಚಾರವೂ ಸುಳಿದಾಡಿತ್ತು. ಆದರೆ ಭಟ್ಟರಿಗೆ ಭಾಷೆ ಕೈಕೊಟ್ಟಿತ್ತು.
ಇಂತಿಪ್ಪ ರಾಮಭಟ್ಟರು ಅತ್ತ ತಮ್ಮ ಮಾಜಿ ಶಿಷ್ಯ ಸದಾನಂದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಹಿರಿಯರ ವೇದಿಕೆಯನ್ನು ರಚಿಸಿದ್ದರು. ಬಿಬಿ ಶಿವಪ್ಪ, ಗೋವಿಂದಪ್ಪ ರಾಮಭಟ್ಟರಿಗೆ ಸಾಥ್ ನೀಡಿದ್ದರು. ಆಗ... ಆ ಹಿರಿಯರ ವೇದಿಕೆ ಮುಂದೊಂದು ದಿನ ತಮ್ಮ ಬುಡಕ್ಕೆ ನೀರು ತರುತ್ತದೆ ಎಂದು ಆತಂಕಗೊಂಡ ಮುಖ್ಯಮಂತ್ರಿ ಸದಾನಂದರು Patch-up ಸಲುವಾಗಿ ...
2011 ಅಕ್ಟೋಬರ್ 24ರ ರಾತ್ರಿ...
58 ವರ್ಷದ ದೇವರಗುಂಡ ವೆಂಕಪ್ಪ ಸದಾನಂದಗೌಡರು ದಂಪತಿ ಜತೆಗೂಡಿ ತಮ್ಮ ರಾಜಕೀಯ ಗುರು ರಾಮಭಟ್ಟರ ನಿವಾಸಕ್ಕೆ ಭೇಟಿ ನೀಡಿಯೇ ಬಿಟ್ಟರು. ಮೂರು ವರ್ಷಗಳ ಅಹಿತಕರ ರಾಜಕೀಯ ಬೆಳವಣಿಗೆಗಳಿಂದಾಗಿ 'ಉರಿಮಜಲು ನಿವಾಸ'ದತ್ತ ಮುಖ ಮಾಡದಿದ್ದ ಗೌಡರನ್ನು ರಾಮಭಟ್ಟರು ಬಾಗಿಲಿಗೇ ಬಂದು (ಚಿತ್ರ ನೋಡಿ) ಆತ್ಮೀಯವಾಗಿ ಸ್ವಾಗತಿಸಿದ್ದರು.
ಇಂತಹ ಸಮಾಗಮಕ್ಕೆ RSS ಹಿರಿತಲೆಗಳಾದ ಮೈ.ಚ. ಜಯದೇವ್, ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಇಂಬು ನೀಡಿದ್ದರು. ಆಗ ರಾಮಭಟ್ಟರ ಭೇಟಿಗಾಗಿ ಅಕ್ಟೋಬರ್ 24ರ ಹಿಂದಿನ ದಿನ ಇವರಿಬ್ಬರೂ ಸದಾನಂದರನ್ನು ತಿದಿಯೊತ್ತಿ ಕಳಿಸಿದ್ದೇ ಇಂದು ಸದಾನಂದರಿಗೆ ವರವಾಗಿ ಪರಿಣಮಿಸಿದೆ.
'ಆದದ್ದೆಲ್ಲ ಒಳ್ಳೇದಕ್ಕೇ, ಎಲ್ಲವೂ ಸರಿ ಹೋಗುತ್ತೆ ಬಿಡಿ' ಎಂದು ಶಕ್ಕು ಅಕ್ಕ ಅಂದು ಶಕುನ ಸಹ ನುಡಿದಿದ್ದರು. ಅದರಂತೆ ಇಂದು ರಾಮಭಟ್ಟರು ಸದಾನಂದರ ಹೆಸರನ್ನು ದಿಲ್ಲಿಯಲ್ಲಿ ಮೆರೆಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಗೌಡರ ಸಿಎಂ ಖುರ್ಚಿಯೂ ಸೇಫ್ ಆಗಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications