ಸದಾನಂದ ಗೌಡರಿಗೆ ವರವಾದ ಆ ಒಂದು ಭೇಟಿ

ಇತಿಹಾಸದ ಒಂದೆರಡು ಪುಟ ತಿರುವಿದಾಗ...
ಉರಿಮಜಲು ಕೆ ರಾಮಭಟ್ಟರು 2 ಬಾರಿ ಪ್ರತಿನಿಧಿಸಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅವರ ಮತ್ತೊಬ್ಬ ಶಿಷ್ಯೆ ಶಕುಂತಲಾ ಶೆಟ್ಟಿ ಮರುಆಯ್ಕೆಗೆ ಟಿಕೆಟ್ ನಿರಾಕರಿಸಲಾಗಿತ್ತು. ಸದಾನಂದಗೌಡರೇ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬುದು ಎಲ್ಲರ ಎಣಿಕೆಯಾಗಿತ್ತು.
ಆಗಲೇ 'ಸ್ವಾಭಿಮಾನಿ ವೇದಿಕೆ' ತಲೆಯೆತ್ತಿದ್ದು. ತತ್ಫಲವಾಗಿ, ದೀರ್ಘ ಕಾಲದಿಂದ ಸದಾನಂದರಿಗೆ ಗುರು, ಗೈಡ್ ಆಗಿದ್ದ ರಾಮಭಟ್ಟರು ನಿಜಕ್ಕೂ ಸದಾನಂದರಿಂದ ಬಹುದೂರ ಸಾಗಿದ್ದರು. ಶಕುಂತಲಾಗೆ ಟಿಕೆಟ್ ನೀಡದಿರುವುದನ್ನು ಪ್ರತಿಭಟಿಸಿ ರಾಮಭಟ್ಟರು ಬಿಜೆಪಿ ವಿರುದ್ಧವೇ ಲೋಕಸಭೆ ಚುನಾವಣೆಗೂ ನಿಂತು, ಸೋತರು. ಪಕ್ಷದ ಶಿಸ್ತಿನ ಸಿಪಾಯಿ ರಾಮಭಟ್ಟರ ವಿರುದ್ಧ 'ಶಿಸ್ತು ಕ್ರಮವಾಗಿ ಪಕ್ಷದಿಂದ ಉಚ್ಛಾಟಿಸುವ' ಮಂತ್ರವನ್ನು ಉಚ್ಚರಿಸಲು ಬಿಜೆಪಿ ಉದ್ದೇಶಪೂರ್ವಕವಾಗಿ ಮರೆತಿತ್ತು.
ಅದಕ್ಕೂ ಮುನ್ನ ಬಿಜೆಪಿಯಲ್ಲಿ ರಾಮಭಟ್ಟರ ಹಿಡಿತ ಹೇಗಿತ್ತೆಂದರೆ... ಭಾರತೀಯ ಜನಸಂಘದ ದಿನಗಳಿಂದಲೂ ವಾಜಪೇಯಿ ಮತ್ತು ಅಡ್ವಾಣಿ ಅವರಿಗೆ ತೀರಾ ಹತ್ತಿರವಾಗಿದ್ದ ರಾಮಭಟ್ಟರನ್ನು ಎನ್ ಡಿಎ ಆಡಳಿತದ ಕಾಲದಲ್ಲಿ ಉತ್ತರದ ಯಾವುದಾದರೂ ಒಂದು ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೇಮಿಸುವ ವಿಚಾರವೂ ಸುಳಿದಾಡಿತ್ತು. ಆದರೆ ಭಟ್ಟರಿಗೆ ಭಾಷೆ ಕೈಕೊಟ್ಟಿತ್ತು.
ಇಂತಿಪ್ಪ ರಾಮಭಟ್ಟರು ಅತ್ತ ತಮ್ಮ ಮಾಜಿ ಶಿಷ್ಯ ಸದಾನಂದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಹಿರಿಯರ ವೇದಿಕೆಯನ್ನು ರಚಿಸಿದ್ದರು. ಬಿಬಿ ಶಿವಪ್ಪ, ಗೋವಿಂದಪ್ಪ ರಾಮಭಟ್ಟರಿಗೆ ಸಾಥ್ ನೀಡಿದ್ದರು. ಆಗ... ಆ ಹಿರಿಯರ ವೇದಿಕೆ ಮುಂದೊಂದು ದಿನ ತಮ್ಮ ಬುಡಕ್ಕೆ ನೀರು ತರುತ್ತದೆ ಎಂದು ಆತಂಕಗೊಂಡ ಮುಖ್ಯಮಂತ್ರಿ ಸದಾನಂದರು Patch-up ಸಲುವಾಗಿ ...
2011 ಅಕ್ಟೋಬರ್ 24ರ ರಾತ್ರಿ...
58 ವರ್ಷದ ದೇವರಗುಂಡ ವೆಂಕಪ್ಪ ಸದಾನಂದಗೌಡರು ದಂಪತಿ ಜತೆಗೂಡಿ ತಮ್ಮ ರಾಜಕೀಯ ಗುರು ರಾಮಭಟ್ಟರ ನಿವಾಸಕ್ಕೆ ಭೇಟಿ ನೀಡಿಯೇ ಬಿಟ್ಟರು. ಮೂರು ವರ್ಷಗಳ ಅಹಿತಕರ ರಾಜಕೀಯ ಬೆಳವಣಿಗೆಗಳಿಂದಾಗಿ 'ಉರಿಮಜಲು ನಿವಾಸ'ದತ್ತ ಮುಖ ಮಾಡದಿದ್ದ ಗೌಡರನ್ನು ರಾಮಭಟ್ಟರು ಬಾಗಿಲಿಗೇ ಬಂದು (ಚಿತ್ರ ನೋಡಿ) ಆತ್ಮೀಯವಾಗಿ ಸ್ವಾಗತಿಸಿದ್ದರು.
ಇಂತಹ ಸಮಾಗಮಕ್ಕೆ RSS ಹಿರಿತಲೆಗಳಾದ ಮೈ.ಚ. ಜಯದೇವ್, ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಇಂಬು ನೀಡಿದ್ದರು. ಆಗ ರಾಮಭಟ್ಟರ ಭೇಟಿಗಾಗಿ ಅಕ್ಟೋಬರ್ 24ರ ಹಿಂದಿನ ದಿನ ಇವರಿಬ್ಬರೂ ಸದಾನಂದರನ್ನು ತಿದಿಯೊತ್ತಿ ಕಳಿಸಿದ್ದೇ ಇಂದು ಸದಾನಂದರಿಗೆ ವರವಾಗಿ ಪರಿಣಮಿಸಿದೆ.
'ಆದದ್ದೆಲ್ಲ ಒಳ್ಳೇದಕ್ಕೇ, ಎಲ್ಲವೂ ಸರಿ ಹೋಗುತ್ತೆ ಬಿಡಿ' ಎಂದು ಶಕ್ಕು ಅಕ್ಕ ಅಂದು ಶಕುನ ಸಹ ನುಡಿದಿದ್ದರು. ಅದರಂತೆ ಇಂದು ರಾಮಭಟ್ಟರು ಸದಾನಂದರ ಹೆಸರನ್ನು ದಿಲ್ಲಿಯಲ್ಲಿ ಮೆರೆಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಗೌಡರ ಸಿಎಂ ಖುರ್ಚಿಯೂ ಸೇಫ್ ಆಗಿದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications