ಸದಾನಂದ ಗೌಡರಿಂದ ಚೊಚ್ಚಲ ರಾಜ್ಯ ಬಜೆಟ್ 2012-13

Karnataka Budget 2012-13 LIVE
ಬೆಂಗಳೂರು, ಮಾ. 21 : ತಮ್ಮ ಸ್ವಕ್ಷೇತ್ರವಾಗಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆಯಲ್ಲಿ ತಮ್ಮ ಪಕ್ಷ ಬಿಜೆಪಿ ಕಾಂಗ್ರೆಸ್ಸಿಗೆ ಸೋತು ಮುಖಭಂಗ ಅನುಭವಿಸಿದ ಕ್ಷಣದಲ್ಲೇ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಪ್ರಪ್ರಥಮ ಬಜೆಟ್ ಮಂಡಿಸುತ್ತಿದ್ದಾರೆ. ಭಾಷಣ ಸರಿಯಾಗಿ ಬೆಳಿಗ್ಗೆ 11 ಗಂಟೆಗೆ ಆರಂಭವಾಗಿದೆ.

ಚುನಾವಣೆಯ ಕಣದಲ್ಲಿನ ಸೋಲು ಒಂದೆಡೆಯಾದರೆ, ತಮ್ಮ ಪಕ್ಷದಲ್ಲಿಯೇ ಬಜೆಟ್ ಮಂಡನೆ ಕುರಿತಂತೆ ಎದುರಿಸಿದ ಎಲ್ಲ ಅಡೆತಡೆಗಳು, ತಾತ್ಕಾಲಿಕವಾಗಿಯಾದರೂ ನಿವಾರಿಸಿಕೊಂಡಿರುವ ಸದಾನಂದ ಗೌಡರು ಬಜೆಟ್ ಮಂಡಿಸಲು ಈಗ ವಿಧಾನಸೌಧಕ್ಕೆ ಆಗಮಿಸಿದ್ದಾರೆ.

ಬಜೆಟ್ಟಿಗೆ ಸಂಬಂಧಿಸಿದಂತೆ ಬಲಗೈಯಂತಿದ್ದ ದಿ.ಡಾ. ಆಚಾರ್ಯ ಅವರ ಅನುಪಸ್ಥಿತಿಯಲ್ಲಿ ಗೌಡರು ಬಜೆಟ್ ಮಂಡಿಸುತ್ತಿದ್ದು, ಯಾವ ರೀತಿ ಮಂಡಿಸಲಿದ್ದಾರೆ, ಏನೇನು ಮಂಡಿಗೆ ತಿನ್ನಿಸಲಿದ್ದಾರೆ ಎಂದು ಜನರು ಮಾತ್ರವಲ್ಲ ರಾಜಕಾರಣಿಗಳು ಕೂಡ ಎದಿರುನೋಡುತ್ತಿದ್ದಾರೆ.

ಎಂದಿನಂತೆ ಒನ್ಇಂಡಿಯಾ ಕನ್ನಡ ಕರ್ನಾಟಕ ಬಜೆಟ್ 2012-13ರ ಮುಖ್ಯಾಂಶಗಳನ್ನು ಕ್ಷಣಕ್ಷಣಕ್ಕೆ ನೀಡಲಿದೆ. ಬಜೆಟ್ಟಿಗೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನು ನಿಮ್ಮ ಮುಂದೆ ನೀಡಲಿದ್ದೇವೆ. ನೋಡುತ್ತಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+