ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸೆಂಬ್ಲಿ ವಿಸರ್ಜಿಸಿ ಮನೆಗೆ ಹೋಗ್ರಿ: ಸಿದ್ದರಾಮಯ್ಯ

By Mahesh
|
Google Oneindia Kannada News

Siddaramaiah
ವಿಧಾನಸೌಧ, ಮಾ.20: ಸದನದ ನಿಯಮಾವಳಿಗಳನ್ನು ಮೀರಿ ಬಜೆಟ್ ಅಧಿವೇಶನ ಕರೆಯಲಾಗಿದೆ. ಕರ್ನಾಟಕ ಸಾಂವಿಧಾನದ ಬಿಕ್ಕಟ್ಟು ಎದುರಿಸುತ್ತಿದ್ದು, ಅಸೆಂಬ್ಲಿ ವಿಸರ್ಜಿಸಿ ಬಿಜೆಪಿ ಮತ್ತೆ ಚುನಾವಣೆ ಎದುರಿಸಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ.

ವಿಧಾನ ಮಂಡಲ ಅಧಿವೇಶನ ಮಾ.20 ರಂದು ಆರಂಭಗೊಂಡಿದ್ದು, ಬಿಜೆಪಿಯ 34 ಶಾಸಕರು ಮಾತ್ರ ಹಾಜರಾಗಿರುವುದನ್ನು ಕಂಡ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೆಂಡಾಮಂಡಲವಾದರು.

ಸಿಎಂ ಸದಾನಂದ ಗೌಡ ಬಹುಮತ ಕಳೆದುಕೊಂಡಿದ್ದಾರೆ. ಬಿಜೆಪಿ ಮಾಜಿ ಸಿಎಂ ಅಗಲಿದ ನಾಯಕರಿಗೆ ರೆಸಾರ್ಟ್ ನಲ್ಲಿ ಕೂತು ಶ್ರದ್ಧಾಂಜಲಿ ಅರ್ಪಿಸುತ್ತಾರೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಎಂಥಾ ಗತಿ ಬಂತು ರಾಜ್ಯಕ್ಕೆ ಛೇ ಎಂದು ಸಿದ್ದು ಹಲುಬಿದರು.

ಪ್ರಶ್ನೋತ್ತರ ವೇಳೆಗೂ ಕೊಕ್ಕೆ: ಅಸೆಂಬ್ಲಿ ಸೆಷನ್ ನಡೆಸುವ ಬಗ್ಗೆ ನಿಯಮದ ಪ್ರಕಾರ 15 ದಿನ ಮುಂಚಿತವಾಗಿ ನೋಟಿಸ್ ನೀಡಬೇಕು. ಬಹುತೇಕ ಶಾಸಕರಿಗೆ ನೋಟಿಸ್ ತಲುಪಿಲ್ಲ.

ಇವರ ಅನುಕೂಲಕ್ಕೆ ತಕ್ಕಂತೆ ಅಧಿವೇಶನ ಕರೆಯುವುದು ಎಷ್ಟು ಸರಿ? ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ಪ್ರಶ್ನಿಸಲು ಕಾಲಾವಕಾಶವೇ ನೀಡಂತೆ ಪ್ರಶ್ನೋತ್ತರ ವೇಳೆಯನ್ನೂ ನುಂಗಲು ಬಿಜೆಪಿ ಶಾಸಕರು ಸಿದ್ಧತೆ ನಡೆಸಿದ್ದಾರೆ ಎಂದು ಸಿದ್ದು ಗುಡುಗಿದರು.

English summary
Karnataka is facing Constitutional Crisis, many BJP MLAs are absent to Budget Session, administration has become joke. Assembly should be dissolved urged Opposition Congress leader Siddaramaiah today(Mar.20) in Assembly Session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X