ಯಡಿಯೂರಪ್ಪ ಜೋಳಿಗೆಗೆ 339 ಕೋಟಿ ರು ಬಿದ್ದಿದೆ

SR Hiremath
ಹುಬ್ಬಳ್ಳಿ, ಮಾ.18 : ಮಾಜಿ ಸಿಎಂ ಯಡಿಯೂರಪ್ಪ ಗಣಿ ಉದ್ಯಮಿಗಳಿಂದ 339 ಕೋಟಿ ರೂ ಲಂಚ ಪಡೆದಿರುವುದನ್ನು ನಿರೂಪಿಸುವ ಮಾಹಿತಿಯನ್ನೊಳಗೊಂಡ 117 ಪುಟಗಳ ದಾಖಲೆಗಳನ್ನು ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್ ಆರ್ ಹಿರೇಮಠ್ ಕೇಂದ್ರ ಉನ್ನತಾಧಿಕಾರ ಸಮಿತಿಗೆ ಸಲ್ಲಿಸಿದ್ದಾರೆ.

ಬೇಲಿಕೇರಿ ಬಂದರಿನಿಂದ ಕಬ್ಬಿಣದ ಅದಿರು ಕಳ್ಳತನವಾದ ವಿಚಾರವನ್ನು ಸಮಿತಿ ಮಾರ್ಚ್ 20ರಂದು ವಿಚಾರಣೆ ನಡೆಸಲಿದೆ. [ಬೇಲೇಕೇರಿ ಅಕ್ರಮಗಳ ಬಗ್ಗೆ ವರದಿ ನೋಡಿ]

ವಿಚಾರಣೆಗೆ ಎಸ್‌ಪಿಎಸ್ ಸಂಘಟನೆ, ಗಣಿ ಉದ್ಯಮಗಳಾದ ಅಡೋಣಿ ಎಂಟರ್‌ಪ್ರೈಸಸ್, ಜಿಂದಾಲ್ ಸ್ಟೀಲ್ಸ್‌ನ ಪ್ರತಿನಿಧಿಗಳು ಹಾಜರಿರುತ್ತಾರೆ. ಯಡಿಯೂರಪ್ಪ ಕುಟುಂಬ ಸದಸ್ಯರು ಮತ್ತು ಗಣಿ ಉದ್ಯಮಿಗಳ ನಡುವೆ ನಡೆದಿರುವ ಹಣಕಾಸು ವ್ಯವಹಾರಗಳನ್ನು ಸಮಿತಿ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಿದೆ.

ಅಕ್ರಮ ಗಣಿಗಾರಿಕೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿರುವುದಾಗಿ ಹಿರೇಮಠ್ ತಿಳಿಸಿದ್ದಾರೆ. ಸಿಇಸಿ ವರದಿಯನ್ನು ಆಧಾರಿಸಿ ಸಿಇಸಿ ವರದಿ ಆಧಾರದ ಮೇಲೆ ಸುಪ್ರೀಂಕೋರ್ಟ್ ನ ಅರಣ್ಯ ನ್ಯಾಯಪೀಠದ ಮುಖ್ಯ ನ್ಯಾಯಾಧೀಶ ಎಸ್.ಎಚ್ ಕಾಪಾಡಿಯಾ, ಜಸ್ಟೀಸ್ ಅಫ್ತಾಬ್ ಅಲಂ ಹಾಗೂ ಜಸ್ಟೀಸ್ ಸ್ವತಂತ್ರ ಕುಮಾರ್ ಅವರಿದ್ದ ನ್ಯಾಯಪೀಠ ತೀರ್ಪು ನೀಡಲಿದೆ.

ಹಿರೇಮಠ್ ಗೆ ಯಡ್ಡಿ ಕಡೆಯಿಂದ ಬೆದರಿಕೆ? ಅಥವಾ ಸಂಧಾನ? ಮುಂದೆ ಓದಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+