ಬಜೆಟ್ : ಊಹಾಪೋಹಗಳನ್ನು ಗಾಳಿಗೆ ತೂರಿದ ಕೆಎಸ್
ಬೆಂಗಳೂರು,
ಮಾ. 17 : ಮಾರ್ಚ್ 21ರಂದು ಯಾರು ಬಜೆಟ್ ಮಂಡಿಸುತ್ತಾರೆ ಎಂಬ ಜಿಜ್ಞಾಸೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಪೂರ್ಣವಿರಾಮ ಹಾಕಿದ್ದು, ಮುಖ್ಯಮಂತ್ರಿ ಡಿವಿ ಸದಾನಂದ ಗೌಡರೇ ಬಜೆಟ್ ಮಂಡಿಸುತ್ತಾರೆ, ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸ್ಪಷ್ಟವಾಗಿ ನುಡಿದಿದ್ದಾರೆ. id="toptextpromo">ಬಜೆಟ್ಟನ್ನು
ಸದಾನಂದ ಗೌಡರು ಮಂಡಿಸುತ್ತಾರೋ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಂಡಿಸುತ್ತಾರೋ ಎಂಬ ಕುರಿತು ಸಾಕಷ್ಟು ಗಾಳಿಸುದ್ದಿಗಳು ಹರಿದಾಡುತ್ತಿದ್ದವು. ಯಡಿಯೂರಪ್ಪನವರನ್ನು ಗದ್ದುಗೆಯ ಮೇಲೆ ಕೂಡಿಸಲು ಹೈಕಮಾಂಡ್ ಹಸಿರು ನಿಶಾನೆ ನೀಡಿದೆ ಎಂಬ ಸುದ್ದಿಯೂ ಹಬ್ಬಿತ್ತು. ಈ ಊಹಾಪೋಹಗಳನ್ನೇ ಗಾಳಿಗೆ ತೂರಿದ ಈಶ್ವರಪ್ಪ, ಗಾಳಿ ಸುದ್ದಿ ಹರಡುತ್ತಿದ್ದ ಯಡಿಯೂರಪ್ಪ ಬೆಂಬಲಿಗರ ಬಾಯಿಯನ್ನು ಮುಚ್ಚಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಕುರಿತಂತೆ ಹೇಳಿಕೆ ನೀಡುತ್ತಿದ್ದ ಕೇಂದ್ರದ ಮಾಜಿ ಸಚಿವ ಮತ್ತು ಯಡಿಯೂರಪ್ಪ ಬೆಂಬಲಿಗ ಧನಂಜಯ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಈಶ್ವರಪ್ಪ, ಇವರು ಯಾವ ಘನಂದಾರಿ ಮನುಷ್ಯ ಅಂತ ಅವರ ಮಾತನ್ನು ಕೇಳಬೇಕು. ಅವರೇನು ಬಿಜೆಪಿ ವಕ್ತಾರರಲ್ಲ ಎಂದು ತಿರುಗೇಟು ನೀಡಿದ್ದಾರೆ. ಡಿವಿಎಸ್ ಬಜೆಟ್ ಮಂಡಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾತಿನ ಚಾಟಿ ಬೀಸಿದ್ದಾರೆ.











Click it and Unblock the Notifications