ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋರ್ಟ್ ಆವರಣದಲ್ಲಿ ಚಟುವಟಿಕೆ ಮತ್ತೆ ಶುರು

By Mahesh
|
Google Oneindia Kannada News

City Civil court, Bangalore
ಬೆಂಗಳೂರು, ಮಾ.15: ವಕೀಲರು, ಪೊಲೀಸರು ಹಾಗೂ ಮಾಧ್ಯಮದವರ ನಡುವೆ ನಡೆದ ದೊಂಬಿ, ಗಲಭೆ, ಘರ್ಷಣೆಗೆ ತುತ್ತಾಗಿ ಮಂಕಾಗಿದ್ದ ಸಿಟಿ ಸಿವಿಲ್ ಕೋರ್ಟ್ ಆವರಣ ಗುರುವಾರ(ಮಾ.15) ಜನಜಂಗುಳಿಯಿಂದ ತುಂಬಿ ಹೋಗಿತ್ತು.

ಕಲಾಪ ಬಹಿಷ್ಕರಿಸಿ ಸುಮಾರೂ 12 ದಿನಗಳಿಂದ ಮುನಿಸಿಕೊಂಡಿದ್ದ ವಕೀಲರು ಗುರುವಾರ ಮತ್ತೆ ಕೋರ್ಟ್ ಆವರಣದಲ್ಲಿ ಕಾಣಿಸಿಕೊಂಡರು. ಸಿಟಿ ಸಿವಿಲ್ ಕೋರ್ಟ್ ನಲ್ಲಿ ವಕೀಲರು, ಕಕ್ಷಿದಾರರ ದಂಡು ಹರಿದು ಬಂದಿತ್ತು. ಕೋರ್ಟ್ ಕಲಾಪ ಎಂದಿನಂತೆ ಕಾರ್ಯಾರಂಭವಾಗಿದ್ದು ಸಾರ್ವಜನಿಕರಿಗೆ ಸಂತಸ ತಂದಿದೆ.

ಕಳೆದ 12 ದಿನಗಳಿಂದ ಕೋರ್ಟ್ ಕಾಯುತ್ತಿದ್ದ ಪೊಲೀಸರು ಇಂದು ಕಂಡು ಬರಲಿಲ್ಲ. ಖಾಕಿಮಯವಾಗಿದ್ದ ಕೋರ್ಟ್ ಆವರಣ ಇಂದು ಕರಿಕೋರ್‍ ಮಯವಾಗಿತ್ತು. ವಕೀಲರ ಪದಾಧಿಕಾರಿಗಳ ಆಕ್ಷೇಪದ ಮೇರೆಗೆ ಕಾವಲು ಕಾಯಲು ನಿಯೋಜನೆಗೊಂಡಿದ್ದ ಪೊಲೀಸರ ಸಂಖ್ಯೆ ಕಡಿಮೆಮಾಡಲಾಗಿದೆ.

ವಕೀಲರ ಪ್ರತಿಭಟನೆಯ ಫಲಕ, ಕಟೌಟ್, ಭಿತ್ತಿಪತ್ರ, ಪೆಂಡಾಲ್ ಗಳನ್ನು ತೆರವುಗೊಳಿಸಲಾಗಿದೆ. ಆದರೆ, ಮಫ್ತಿಯಲ್ಲಿ ಪೊಲೀಸರು ಕೋರ್ಟ್ ಆವರಣದಲ್ಲಿ ಗಸ್ತು ತಿರುಗುತ್ತಿದ್ದಾರೆ. ಕೋರ್ಟ್ ಮತ್ತೆ ಆರಂಭಗೊಂಡಿದ್ದು ಕಕ್ಷಿದಾರರಿಗೆ ಖುಷಿ ಕೊಟ್ಟಿದೆ.

ಇದಕ್ಕೂ ಮುನ್ನ 5,000 ಕ್ಕೂ ಅಧಿಕ ಪೊಲೀಸರು, ಗೃಹ ರಕ್ಷಕ ದಳ, ಕೆಎಸ್ ಆರ್ ಪಿ, ಕ್ಷಿಪ್ರ ಕಾರ್ಯ ಪಡೆ(RAF) ಕೋರ್ಟ್ ಆವರಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಯಲು ನಿಯೋಜನೆಗೊಂಡಿತ್ತು.

English summary
Bangalore police with the help of CAR, KSRP, RAF evicted Protesting Lawyers and ensured smooth court proceeding at City Civil court Complex today(Mar.15). Many Lawyers resumed to work and clients were happy to see court opened after more than 12 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X