ಅನೈತಿಕ ಸಂಬಂಧ ಬಯಲಾಗಿ ವರ ಆತ್ಮಹತ್ಯೆ

ಮೈಸೂರಿನ ಇಲವಾಲದ ನಿವಾಸಿ ಶಿಕ್ಷಕಿಯೂ ಆಗಿರುವ ಗೀತಾ ಎಂಬಾಕೆಗೂ ಎಚ್.ಡಿ.ಕೋಟೆ ತಾಲೂಕು ಹಳ್ಳದಮನುಗನಹಳ್ಳಿಯ ನಿವಾಸಿ ಮಂಜುನಾಥ ಎಂಬಾತನಿಗೆ ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಪಾಲಿಕೆ ಸಮುದಾಯ ಭವನದಲ್ಲಿ ಫೆಬ್ರವರಿ 23 ಮತ್ತು 24ರಂದು ವಿವಾಹ ನಿಶ್ಚಯವಾಗಿತ್ತು. ಅದರಂತೆ ಮದುವೆ ಮಂಟಪಕ್ಕೆ ಎರಡು ಕಡೆಯವರು ಆಗಮಿಸಿದ್ದರು.
ಮದುವೆ ಸಂಪ್ರದಾಯದಂತೆ ನಿನ್ನೆ ರಾತ್ರಿ(ಫೆ.23) ವರೋಪಚಾರವೂ ನಡೆದಿತ್ತು. ಆದರೆ ವಿವಾಹ ಮಂಟಪದಲ್ಲಿದ್ದ ವರ ಮಂಜುನಾಥ ವಿವಾಹಕ್ಕೆ ಬಂದಿದ್ದ ಹೆಂಗಸಿನೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದುದು ಕೆಲವರ ಅನುಮಾನಕ್ಕೆ ಕಾರಣವಾಗಿತ್ತು. ವಿಷಯ ತಿಳಿದ ಕೆಲವರು ಈ ಬಗ್ಗೆ ವಿಚಾರಿಸಿದಾಗ, ಆಕೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದು, ಗಂಡನೊಂದಿಗೆ ವಿಚ್ಛೇದನ ಪಡೆದಿರುವುದಾಗಿಯೂ, ಆಕೆಗೂ ಮಂಜುನಾಥನಿಗೂ ಅನೈತಿಕ ಸಂಬಂಧವಿರುವುದು ಬಯಲಾಯಿತು.
ವಿಷಯ ತಿಳಿದ ವಧು ಗೀತಾ ನಾನು ಮಂಜುನಾಥನನ್ನು ಮದುವೆಯಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಈ ಸಂದರ್ಭ ಗೊಂದಲ ಉಂಟಾಗಿ ವಧುವಿನ ಮನೆಯವರು ವಿವಾಹವನ್ನು ನಿಲ್ಲಿಸಿದ್ದಾರೆ. ಅಲ್ಲದೆ ವರನ ಹಾಗೂ ವಧುವಿನ ಕುಟುಂಬದ ನಡುವೆ ರಂಪಾಟವೂ ನಡೆದಿದೆ. ಆಗ ವಧುವಿನ ಕಡೆಯವರು ಮದುವೆಗಾಗಿ ಖರ್ಚು ಮಾಡಿದ ಹಣವನ್ನು ಕೂಡಲೇ ನೀಡುವಂತೆ ಆಗ್ರಹಿಸಿದ್ದಾರೆ. ಕೊನೆಗೂ ಅನ್ಯಮಾರ್ಗವಿಲ್ಲದೆ ವರನ ಕಡೆಯವರು ಮದುವೆ ಖರ್ಚು 5 ಲಕ್ಷ ರು. ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಅದರಂತೆ ಹಣವನ್ನು ತರುವುದಾಗಿ ಹೇಳಿ ಮದುವೆ ಮಂಟಪದಿಂದ ಹೊರ ನಡೆದ ವರ ಮಂಜುನಾಥ ಭಯದಿಂದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇತ್ತ ಮದುವೆ ಅರ್ಧಕ್ಕೆ ನಿಂತು ಹೋದ ವಿಚಾರ ತಿಳಿದ ಗೀತಾಳ ದೂರದ ಸಂಬಂಧಿ ಶಿವರಾಜ್ ಎಂಬಾತ ಆಕೆಯನ್ನು ಮದುವೆಯಾಗಲು ಮುಂದೆ ಬಂದಿದ್ದರಿಂದ ಶುಕ್ರವಾರ ಮೈಸೂರಿನ ವಿಜಯನಗರದಲ್ಲಿರುವ ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ ಇಬ್ಬರು ಸಪ್ತಪದಿ ತುಳಿದು ಬಾಳಸಂಗಾತಿಗಳಾದರು. ಆದರೆ ದಿಢೀರ್ ಬೆಳವಣಿಗೆ ವಧು ಗೀತಾಳಿಗೆ ಶಾಕ್ ನೀಡಿದ್ದು ಆಕೆ ಇನ್ನಷ್ಟೆ ಚೇತರಿಸಿಕೊಳ್ಳಬೇಕಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications