ರಾಜ್ಯದಲ್ಲಿ ಅಕ್ಕಿ ಬೆಲೆಯಲ್ಲಿ ಭಾರೀ ಹೆಚ್ಚಳ

ಪ್ರತಿ ಕಿ.ಗ್ರಾಂ. ಮೇಲೆ ಕನಿಷ್ಠವೆಂದರೂ 5 ರು. ಏರಿಸಲಾಗಿದ್ದು, ದಿನನಿತ್ಯದ ಊಟಕ್ಕಾಗಿ ಅನ್ನವನ್ನೇ ಅವಲಂಬಿಸಿರುವ ಬಡವರ ಹೊಟ್ಟೆಯ ಮೇಲೆ ಭಾರೀ ಹೊಡೆತ ನೀಡಲಾಗಿದೆ. ಬುಧವಾರದಿಂದಲೇ ಎಪಿಎಂಸಿಯಲ್ಲಿ ಅಕ್ಕಿಯ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಇದು ದಲ್ಲಾಳಿಗಳನ್ನು ದಾಟಿ ವ್ಯಾಪಾರಿಗಳನ್ನು ಸೇರಿ, ಜನರ ಚೀಲ ಸೇರುವ ಹೊತ್ತಿಗೆ ಎಷ್ಟಾಗಿರುತ್ತದೋ?
ಅಕ್ಕಿಯ ಉತ್ಪಾದನೆ ಕಡಿಮೆಯಾಗಿ, ರಫ್ತು ಹೆಚ್ಚಾಗಿರುವುದರಿಂದ ಅಕ್ಕಿ ಬೆಲೆಯಲ್ಲಿ ಏರಿಕೆಯುಂಟಾಗಿದೆ. ಅಕ್ಕಿ ರಫ್ತನ್ನು ಕೂಡಲೆ ನಿಲ್ಲಿಸಿ ನಮಗೇ ಅಕ್ಕಿ ದಕ್ಕುವಂತೆ ಮಾಡಬೇಕು. ಆಗ ಮಾತ್ರ ಅಕ್ಕಿ ಬೆಲೆ ಇಳಿಯಲು ಸಾಧ್ಯ. ಇಲ್ಲದಿದ್ದರೆ ಬೆಲೆ ಇನ್ನಷ್ಟು ಏರುವ ಸಾಧ್ಯತೆಯಿದೆ ಎಂಬುದು ವರ್ತಕರ ಕಿಡಿನುಡಿ.
ಅಕ್ಕಿ ಬೆಲೆ ಏರಿಕೆಯಿಂದಾಗಿ ಮನೆಗೆ ಬರುವ ಅತಿಥಿಗಳನ್ನು ಊಟಕ್ಕೆ ಕೂಡಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಹಾಗೆಯೆ, ಅಕ್ಕಿ ಯಾವುದೇ ರೀತಿಯಲ್ಲಿ ಹಾಳಾಗದಂತೆ ನೋಡುವ ಜವಾಬ್ದಾರಿಯೂ ನಾಗರಿಕರ ಮೇಲಿದೆ. ಅದೇ ರೀತಿ, ಸರಕಾರ ಕೂಡ ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ. ಇಲ್ಲದಿದ್ದರೆ, ಮೃಷ್ಟಾನ್ನದ ಬದಲು ಚಿತ್ರಾನ್ನವೇ ಗತಿ.
ಅಕ್ಕಿ ಹಾಳಾಗದಂತೆ, ದುಂದಾಗದಂತೆ, ಮಣ್ಣು ಪಾಲಾಗದಂತೆ, 'ಹೆಗ್ಗಣ'ಗಳ ಹೊಟ್ಟೆ ಸೇರದಂತೆ ಮಾಡುವುದು ಹೇಗೆ? ನಮಗೆ ಬರೆದು ತಿಳಿಸಿ.












Click it and Unblock the Notifications