ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಖಚಿತ

By Mahesh
|
Google Oneindia Kannada News

K Jayaprakash Shetty candidate
ಚಿಕ್ಕಮಗಳೂರು, ಫೆ.21: ಉಡುಪಿ-ಚಿಕ್ಕಮಗಳೂರು ಸಂಸದೀಯ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಈ ಬಾರಿಯೂ ಜಿದ್ದಾಜಿದ್ದಿನ ಹೋರಾಟ ನಡೆಯುವ ನಿರೀಕ್ಷೆಯಿದೆ. ಕಾಂಗ್ರೆಸ್‌ ಪಕ್ಷ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ.

ಉಪ ಚುನಾವಣೆ ಕುರಿತು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿಯಲ್ಲಿ ಜಯಪ್ರಕಾಶ್ ಹೆಗ್ಡೆ ಹೆಸರು ಸೂಚಿತವಾಗಿತ್ತು. ಅಧ್ಯಕ್ಷ ಜಿ. ಪರಿಮೇಶ್ವರ್, ರೈಲ್ವೆ ಖಾತೆ ಸಚಿವ ಮುನಿಯಪ್ಪ, ಸಿದ್ದರಾಮಯ್ಯ, ಮೋಟಮ್ಮ, ಸಂಸದ ಎಚ್. ವಿಶ್ವನಾಥ್ ಮತ್ತಿತರರು ಹೆಗ್ಡೆ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.

ಜಯಪ್ರಕಾಶ್ ಹೆಗ್ಡೆ ಹೆಸರು ಸೇರಿದಂತೆ ನಾಲ್ಕು ಹೆಸರುಗಳ ಪಟ್ಟಿ ಹೈಕಮಾಂಡ್‌ಗೆ ರವಾನಿಸಲಾಗಿದ್ದು, ಹೆಗ್ಡೆ ಅವರನ್ನು ಆಯ್ಕೆ ಮಾಡುವಂತೆ ಮತ್ತೊಮ್ಮೆ ಮನವಿ ಪತ್ರ ಕೂಡ ಸಲ್ಲಿಸಲಾಗಿದೆ. ಬುಧವಾರ ಅಭ್ಯರ್ಥಿಯು ಅಧಿಕೃತವಾಗಿ ಪ್ರಕಟವಾಗಲಿದ್ದು, ಹೈಕಮಾಂಡ್ ನಿಂದ ಬರುವ ಮುಚ್ಚಿದ ಲಕೋಟೆಗಾಗಿ ಎಲ್ಲರೂ ಕಾದಿದ್ದಾರೆ.

2009 ರಲ್ಲಿ ನಡೆದ ಚುನಾವಣೆಯಲ್ಲಿ ಸದಾನಂದ ಗೌಡ ಮತ್ತು ಕಾಂಗ್ರೆಸ್ ನ ಜಯಪ್ರಕಾಶ್ ಹೆಗ್ಡೆ ನಡುವೆ ತೀವ್ರ ಹಣಾಹಣಿ ನಡೆದು ಗೌಡ್ರು 27ಸಾವಿರ ಮತಗಳಿಂದ ಜಯದ ನಗೆ ಬೀರಿದ್ದರು.

English summary
Former minister K Jayaprakash Hegde has emerged as the front runner in race for Udupi & Chikmagalur Lok Sabha election candidate. KPCC President D Parameshwara, senior leaders Siddaramaiah, Motamma have suggested Shetty's name to high command.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X