ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜನಾ ರೆಡ್ಡಿ ಸಾಲಿಗೆ ಸೇರಿದ ಐಎಎಸ್ ಆಚಾರ್ಯ
ಇದರೊಂದಿಗೆ ಈಗಾಗಲೇ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲಿನಲ್ಲಿ ವಿಶೇಷ ದರ್ಜೆ ವಿಚಾರಣಾಧೀನ ಕೈದಿಯಾಗಿರುವ ಜನಾರ್ದನ ರೆಡ್ಡಿ, ಬಿವಿ ಶ್ರೀನಿವಾಸ ರೆಡ್ಡಿ, ವಿಡಿ ರಾಜಗೋಪಾಲ್ ಮತ್ತು ವೈ ಶ್ರೀಲಕ್ಷ್ಮಿ ಅವರ ಸಾಲಿಗೆ ಸೇರಿದ್ದಾರೆ.
ಪರೋಲ್ ಕೊಡೋರ್ ಇಲ್ಲ: ಈ ಮಧ್ಯೆ, ಆಂಧ್ರ ಪ್ರದೇಶದಾದ್ಯಂತದ ಜೈಲುಗಳಲ್ಲಿರುವ ಕೈದಿಗಳು ಈಗ ವಿಚಿತ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಪರೋಲ್ ಮೇಲೆ ಮನೆಗೆ ಹೋಗುವಂತಿಲ್ಲ. ಏಕೆಂದರೆ, ಹಗರಣವೊಂದರಲ್ಲಿ ಆರೋಪಿಯಾಗಿರುವ ಗೃಹ ಕಾರ್ಯದರ್ಶಿ ಬಿಪಿ ಆಚಾರ್ಯ ಅವರೇ ಸ್ವತಃ ಜೈಲಿನಲ್ಲಿದ್ದಾರೆ.
ಅವರು ಎಮ್ಮಾರ್ ಹಗರಣದಲ್ಲಿ ಭಾಗಿಯಾಗಿದ್ದು, ಇದರ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಕೈದಿಗಳು ಪರೋಲ್ ಮೇಲೆ ಮನೆಗೆ ಹೋಗಬೇಕಾದರೆ ಗೃಹ ಕಾರ್ಯದರ್ಶಿಯ ನೆಲೆಯಲ್ಲಿ ಸಂಬಂಧಿಸಿದ ಕಡತಗಳಿಗೆ ಸಹಿ ಹಾಕಬೇಕಾದವರು ಐಎಎಸ್ ಅಧಿಕಾರಿ ಆಚಾರ್ಯ. ಆದರೆ ಅವರನ್ನು ಜ.30ರಂದು ಎಮ್ಮಾರ್ ಹಗರಣ ಸಂಬಂಧ ಬಂಧಿಸಲಾಗಿದೆ.
Comments
ವಿವಿ ಲಕ್ಷ್ಮಿನಾರಾಯಣ ತಿರುಪತಿ ಆದಾಯ ತೆರಿಗೆ ಜನಾರ್ದನ ರೆಡ್ಡಿ ಜಗನ್ ಮೋಹನ್ ರೆಡ್ಡಿ ಆಸ್ತಿ ಬಂಧನ ಓಬಳಾಪುರಂ ಸಿಬಿಐ ಐಎಎಸ್ ಐಪಿಎಸ್ ಹೈದರಾಬಾದ್ vv lakshminarayana cbi arrest jagan mohan reddy hyderabad assets
English summary
The CBI court granted special class status to senior IAS officer B.P. Acharya whi is in chanchalaguda jail, Hyderabad. B.P. Acharya thus joins the other accused — Gali Janardhan Reddy, B.V. Srinivas Reddy, V.D. Rajagopal and Y. Srila-kshmi — who have special class status in the Obulapuram Mining Company illegal mining case.
Story first published: Tuesday, February 14, 2012, 13:07 [IST]