ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಾ ರೆಡ್ಡಿ ಸಾಲಿಗೆ ಸೇರಿದ ಐಎಎಸ್ ಆಚಾರ್ಯ

By Srinath
|
Google Oneindia Kannada News

emaar-scam-ias-acharya-gets-special-class-status-jail
ಹೈದರಾಬಾದ್, ಫೆ. 14: 15 ದಿನಗಳ ಹಿಂದೆ ಎಮ್ಮಾರ್ ಟೌನ್‌ಶಿಪ್ ಹಗರಣದಲ್ಲಿ ಜೈಲುಪಾಲಾದ ಆಂಧ್ರದ ಗೃಹ ಕಾರ್ಯದರ್ಶಿ ಬಿ ಪಿ ಆಚಾರ್ಯಗೆ ಸಿಬಿಐ ಕೋರ್ಟ್ ಸೋಮವಾರದಿಂದ ಚಂಚಲಗೂಡ ಜೈಲಿನಲ್ಲಿ 'ವಿಶೇಷ ಕೈದಿ' ಸ್ಥಾನಮಾನ ನೀಡಿದೆ. ಆಚಾರ್ಯಗೆ ಈ ದರ್ಜೆಯನ್ನು ಕಲ್ಪಿಸುವುದಕ್ಕೆ ಸಿಬಿಐ ತನ್ನದೇನೂ ಆಕ್ಷೇಪಣೆಯಿಲ್ಲ ಎಂದು ಕೋರ್ಟಿಗೆ ತಿಳಿಸಿತು.

ಇದರೊಂದಿಗೆ ಈಗಾಗಲೇ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲಿನಲ್ಲಿ ವಿಶೇಷ ದರ್ಜೆ ವಿಚಾರಣಾಧೀನ ಕೈದಿಯಾಗಿರುವ ಜನಾರ್ದನ ರೆಡ್ಡಿ, ಬಿವಿ ಶ್ರೀನಿವಾಸ ರೆಡ್ಡಿ, ವಿಡಿ ರಾಜಗೋಪಾಲ್ ಮತ್ತು ವೈ ಶ್ರೀಲಕ್ಷ್ಮಿ ಅವರ ಸಾಲಿಗೆ ಸೇರಿದ್ದಾರೆ.

ಪರೋಲ್ ಕೊಡೋರ್ ಇಲ್ಲ: ಈ ಮಧ್ಯೆ, ಆಂಧ್ರ ಪ್ರದೇಶದಾದ್ಯಂತದ ಜೈಲುಗಳಲ್ಲಿರುವ ಕೈದಿಗಳು ಈಗ ವಿಚಿತ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಪರೋಲ್ ಮೇಲೆ ಮನೆಗೆ ಹೋಗುವಂತಿಲ್ಲ. ಏಕೆಂದರೆ, ಹಗರಣವೊಂದರಲ್ಲಿ ಆರೋಪಿಯಾಗಿರುವ ಗೃಹ ಕಾರ್ಯದರ್ಶಿ ಬಿಪಿ ಆಚಾರ್ಯ ಅವರೇ ಸ್ವತಃ ಜೈಲಿನಲ್ಲಿದ್ದಾರೆ.

ಅವರು ಎಮ್ಮಾರ್ ಹಗರಣದಲ್ಲಿ ಭಾಗಿಯಾಗಿದ್ದು, ಇದರ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಕೈದಿಗಳು ಪರೋಲ್ ಮೇಲೆ ಮನೆಗೆ ಹೋಗಬೇಕಾದರೆ ಗೃಹ ಕಾರ್ಯದರ್ಶಿಯ ನೆಲೆಯಲ್ಲಿ ಸಂಬಂಧಿಸಿದ ಕಡತಗಳಿಗೆ ಸಹಿ ಹಾಕಬೇಕಾದವರು ಐಎಎಸ್ ಅಧಿಕಾರಿ ಆಚಾರ್ಯ. ಆದರೆ ಅವರನ್ನು ಜ.30ರಂದು ಎಮ್ಮಾರ್ ಹಗರಣ ಸಂಬಂಧ ಬಂಧಿಸಲಾಗಿದೆ.

English summary
The CBI court granted special class status to senior IAS officer B.P. Acharya whi is in chanchalaguda jail, Hyderabad. B.P. Acharya thus joins the other accused — Gali Janardhan Reddy, B.V. Srinivas Reddy, V.D. Rajagopal and Y. Srila-kshmi — who have special class status in the Obulapuram Mining Company illegal mining case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X