ಪೆರೋಲ್ ಇಲ್ಲ: ಆಂಧ್ರ ಕೈದಿಗಳ ಪರದಾಟ
ಹೈದರಾಬಾದ್,
ಫೆ.14: ಜೈಲಿನಲ್ಲಿ ದಿನದೂಡುವ ಕೈದಿಗಳಿಗೆ ಕೌಟುಂಬಿಕ ಕಾರ್ಯಕ್ರಮಗಳು ಇದ್ದರೆ ಅವರಿಗೆ ಪೆರೋಲ್ ನೀಡಲಾಗುತ್ತದೆ. ಆರಂಭದಲ್ಲಿ 15 ದಿನಗಳ ಅವಧಿಗೆ ಪೆರೋಲ್ ನೀಡಲಾಗುವುದು ಹಾಗೂ ಅಗತ್ಯವೆಂದು ಕಂಡುಬಂದರೆ ಅದನ್ನು ವಿಸ್ತರಿಸಲಾಗುತ್ತದೆ. id="toptextpromo">ಪೆರೋಲ್
ನೀಡುವುದಕ್ಕೆ ಪೂರ್ವಭಾವಿಯಾಗಿ ರಾಜ್ಯ ಸರಕಾರ ಸಂಬಂಧಿತ ಕೈದಿಗಳ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಂದ ವರದಿ ತರಿಸಿಕೊಳ್ಳುತ್ತದೆ. ಪೊಲೀಸ್ ಠಾಣೆಯಿಂದ ಪೂರಕ ವರದಿ ಬಂದರೆ ಪೆರೋಲ್ ನೀಡಲಾಗುವುದು. ಕೈದಿಗಳು ಒಂದು ವರ್ಷದ ಶಿಕ್ಷೆಯನ್ನು ಪೂರೈಸಿದ ಬಳಿಕ ಪೆರೋಲ್ ನೀಡಲಾಗುವುದು. ಆದರೆ, ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಗಳು ಪೆರೋಲ್ ಪಡೆಯಬೇಕಾದರೆ ಮೂರು ವರ್ಷಗಳ ಶಿಕ್ಷೆಯನ್ನು ಪೂರೈಸಿರಬೇಕು. id='are-slot-1' class='oiad oi-axt oiadv'> id='top-searched-articles'>ಆಚಾರ್ಯ
ಜೈಲಿಗೆ ಹೋದ ಬಳಿಕ ಅವರ ಜವಾಬ್ದಾರಿಯನ್ನು ಪ್ರಧಾನ ಕಾರ್ಯದರ್ಶಿ (ಪೊಲೀಸ್), ಐಪಿಎಸ್ ಅಧಿಕಾರಿ ಪಿ ಗೌತಮ್ ಕುಮಾರ್ಗೆ ವಹಿಸಲಾಗಿದೆ. ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಉದಾಹರಣೆಗೆ, ಕೈದಿಗಳ ಪೆರೋಲ್ ಅವಧಿಯನ್ನು ವಿಸ್ತರಿಸಬೇಕಾದ ಪ್ರಕರಣಗಳಲ್ಲಿ ಮಾತ್ರ ಕಡತಗಳನ್ನು ಗೌತಮ್ ಕುಮಾರ್ ಕಚೇರಿಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಹೊಸ ಪೆರೋಲ್ ಅರ್ಜಿಗಳನ್ನು ಈವರೆಗೆ ಅವರ ಕಚೇರಿಗೆ ಕಳುಹಿಸಿಕೊಡಲಾಗಿಲ್ಲ. ಇದರಿಂದ ಪೆರೋಲ್ ಇಲ್ಲದೆ ಕೈದಿಗಳು ಪರದಾಡುವಂತಾಗಿದೆ.











Click it and Unblock the Notifications