ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿಗಾರಿಕೆ ಸ್ಥಗಿತ : 20,000 ಕೋಟಿ ರು ನಷ್ಟ

By Mahesh
|
Google Oneindia Kannada News

Mining Ban Karnataka
ಬೆಂಗಳೂರು, ಫೆ.9: ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ಸಿಇಸಿ ವರದಿ ಪ್ರಕಟವಾದ ನಂತರ Federation of Indian Minerals Association Industries (FIMI) ತನ್ನ ವರದಿಯಲ್ಲಿ ಗಣಿ ಕೆಲಸ ನಿಂತಿರುವುದರಿಂದ ಸುಮಾರು 20,000 ಕೋಟಿ ರು ನಷ್ಟವಾಗಿದೆ ಎಂದು ಹೇಳಿದೆ.

ಇಂಡಿಯನ್ ಬ್ಯೂರೋ ಆಫ್ ಮೈನ್ಸ್(IBM) ದಾಖಲೆಗಳನ್ನು ಆಧಾರಿಸಿ FIMI ತಯಾರಿಸಿದ ವರದಿಯನ್ನು ನಿರ್ದೇಶಕ ಪಿಚೈಮುತ್ತು ಅವರು ಸುದ್ದಿಗೋಷ್ಠಿಯಲ್ಲಿ ಅಂಕಿ ಅಂಶಗಳೊಂದಿಗೆ ವಿವರಿಸಿದರು.

ಸುಮಾರು 800 ಕೋಟಿ ರು ಹಣ ರಾಯಧನ ನಿರೀಕ್ಷೆಯಿತ್ತು ಹಾಗೂ ಸುಮಾರು 4,800 ಕೋಟಿ ರು ನಷ್ಟವಾಗಿದೆ ಎಂದು ಭಾರತೀಯ ರೈಲ್ವೇ ಈ ಮುಂಚೆ ಪ್ರಕಟಿಸಿತ್ತು. VAT ನಷ್ಟ 300 ಕೋಟಿ ರು ಹಾಗೂ ರಫ್ತು ತೆರಿಗೆ ಹಣ 3,000 ಕೋಟಿ ರು ಬರಬೇಕಿತ್ತು.

'ಎ' ಶ್ರೇಣಿ ಗಣಿ ಕಂಪನಿಗಳು ತಮ್ಮ ಗಣಿಗಾರಿಕೆ ಆರಂಭಿಸಿದರೂ 10 ಮಿಲಿಯನ್ ಟನ್ ನಷ್ಟು ಮಾತ್ರ ಗಣಿಗಾರಿಕೆ ಮಾಡಲು ಸಾಧ್ಯವಿರುತ್ತದೆ. ಸಿಇಸಿ ವರದಿ ಪ್ರಕಾರ ವರ್ಷಕ್ಕೆ 30 ಮಿಲಿಯನ್ ಮೆಟ್ರಿಕ್ ಟನ್ ಗಣಿಗಾರಿಕೆಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಹೀಗಾಗಿ ನಷ್ಟದ ಮೊತ್ತ ಇನ್ನಷ್ಟು ಹೆಚ್ಚಾಗಲಿದೆ ಎಂದು ಸಂಸ್ಥೆ ಹೇಳಿದೆ.

English summary
Mining crisis in Karnataka has effected not only Indian railways but over all revenue losses says Federation of Indian Minerals Association report based on Indian Bureau of Mines (IBM) under the Ministry of Mines. The losses may tune over Rs 20,000 crore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X