ವಿದ್ಯಾರ್ಥಿ ನವೀನ್ ಶವ ನಾಪತ್ತೆ ಹೇಗಾಯ್ತು?

ಸಕಲೇಶಪುರ ಪೊಲೀಸರಿಗೆ ಇನ್ನೂ ನವೀನ್ ಸಾವು ಆದದ್ದು ಹೇಗೆ ಎಂಬುದು ಸ್ಪಷ್ಟವಾಗಿಲ್ಲ. ಗೈಡ್ ಇಲ್ಲದೆ, ರೂಟ್ ಮ್ಯಾಪ್ ಇಲ್ಲದೆ, ಜಿಪಿಎಸ್ ಸಾಧನವಿಲ್ಲದೆ ಈ ಕಾಡಿಗೆ ಈ ವಿದ್ಯಾರ್ಥಿಗಳು ಹೊಕ್ಕಿದ್ದಾದರೂ ಹೇಗೆ? ನವೀನ್ ಸಾವನ್ನಪ್ಪಿದ ನಂತರ ಶವ ಕಣ್ಮರೆಯಾಗಿದ್ದು ಹೇಗೆ ಎಂಬುದರ ಬಗ್ಗೆ ಟ್ರಿಕ್ಕಿಂಗ್ ಗುಂಪಿನಲ್ಲೇ ಗೊಂದಲಗಳಿದೆ.
ಟ್ರೆಕ್ಕಿಂಗ್ ಹೋದದ್ದು ಹೀಗೆ?: ಶನಿವಾರ(ಫೆ.4) ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಗುಂಡ್ಯದಿಂದ ಕಾಡಿನೊಳಗೆ ಹೊಕ್ಕು ಚಾರಣ ಆರಂಭಿಸಿದರು. ಗುಂಡ್ಯದಿಂದ ಶಿರಾಡಿ ಘಾಟ್ ಮಾರ್ಗದ ಬದಿಯ ಕಾಡು ಹಾಗೂ ನದೀತೀರದಲ್ಲಿ ಚಾರಣ ಮಾಡುತ್ತಿದ್ದ ಈ ತಂಡವು ಮಧ್ಯಾಹ್ನದ ವೇಳೆ ಸಕಲೇಶಪುರ ವಲಯ ಅರಣ್ಯ ವ್ಯಾಪ್ತಿಯ ಕಬ್ಬಿನಾಲೆ ರಕ್ಷಿತಾರಣ್ಯದಲ್ಲಿರುವ ಗುಂಡ್ಯ ಹೊಳೆಗೆ ಇಳಿದಿದ್ದಾರೆ.
ಹೊಳೆಯಲ್ಲಿ ಸ್ವಲ್ಪ ನೀರಿದ್ದ ಕಾರಣ ತಂಡದಲ್ಲಿದ್ದ ಎಲ್ಲರೂ ಮೋಜಿಗಾಗಿ ನೀರಿಗಿಳಿದರು. ಆ ವೇಳೆ ನೀರಿನ ಮಧ್ಯೆ ಬಂಡೆಕಲ್ಲಿನಿಂದ ಜಾರಿ ಕೆಳಗೆ ಬಿದ್ದ ನವೀನ್ಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ನವೀನ್ ತಾಯಿಗೆ ಇನ್ನೂ ವಿಷಯ ನೇರವಾಗಿ ತಿಳಿಸಿಲ್ಲ. ಕಾಣೆಯಾಗಿದ್ದಾನೆ ಎಂದಷ್ಟೇ ಹೇಳಲಾಗಿದೆ. ಇತರೆ ವಿದ್ಯಾರ್ಥಿಗಳ ಪೋಷಕರು ಸಕಲೇಶಪುರಕ್ಕೆ ಕರೆಸಿಕೊಳ್ಳಲಾಗುವುದು. ನವೀನ್ ಸಾವಿನ ನಿಗೂಢತೆ ಬಯಲಾಗುವ ತನಕ ವಿದ್ಯಾರ್ಥಿಗಳಿಗೆ ಕಷ್ಟ ತಪ್ಪಿದ್ದಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈತನ ಜೊತೆಗಿದ್ದ 13 ಮಂದಿ ದಟ್ಟ ಕಾಡಿನಲ್ಲೇ ರಾತ್ರಿ ಕಳೆದಿದ್ದಾರೆ. ಈ ಗುಂಪಿನಲ್ಲಿ 4 ಮಂದಿ ಹುಡುಗಿಯರೂ ಇದ್ದಾರೆ. ನವೀನ್ ಸಾವಿನ ನಂತರ ಸಹಾಯ ಕೋರಲು ಮೂರ್ನಾಲ್ಕು ಮಂದಿ ಪ್ರಯತ್ನಿಸಿದ್ದಾರೆ.
ನಂತರ ಘಟನೆ ಬಗ್ಗೆ ಅರಣ್ಯಾಧಿಕಾರಿಗಳಿಗೆ ತಿಳಿದಿದೆ. ಹಗಲು ವೇಳೆಯಲ್ಲೇ ಹುಡುಕಲು ಕಷ್ಟವಾಗಿರುವ ಕಾಡಿನಲ್ಲಿ ರಾತ್ರಿ ವೇಳೆ ಶೋಧಕಾರ್ಯ ಅಸಾಧ್ಯ ಎಂದು ಆರ್ಎಫ್ಓ ರತ್ನಪ್ರಭ ತಿಳಿಸಿದ್ದಾರೆ. ಸೋಮವಾರ(ಫೆ.6) ಆರೋಪಿಗಳನ್ನು ಸಕಲೇಶಪುರ ಕೋರ್ಟಿಗೆ ಹಾಜರುಪಡಿಸಲಾಗಿದ್ದು, ಎಲ್ಲರಿಗೂ ಜಾಮೀನು ಮಂಜೂರಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications