Get Updates
Get notified of breaking news, exclusive insights, and must-see stories!

ರಾಜ್ಯಪಾಲರ ವಿರುದ್ಧ ಶಾಸಕ ಬೇಳೂರು ಪ್ರತಿಭಟನೆ

MLA Gopalakrishna Protest
ಬೆಂಗಳೂರು, ಜ.30: ಸೋಮವಾರ ಆರಂಭವಾದ ವಿಧಾನಮಂಡಲ ಅಧಿವೇಶನದಲ್ಲಿ ಆಡಳಿತ ಪಕ್ಷದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ರಾಜ್ಯಪಾಲರ ವಿರುದ್ಧ ಲಿಖಿತ ಫಲಕ ಹಿಡಿದು ಪ್ರತಿಭಟಿಸಿದ ಘಟನೆ ಜರುಗಿತು. ಉಳಿದಂತೆ ಹಂಸರಾಜ್ ಭಾರದ್ವಾಜ್ ಅವರ ಭಾಷಣ, ಜೆಡಿಎಸ್ ಹಾರಾಟ ಯಾವುದೋ ಕಲಾಪದ ಹೈಲೇಟ್ ಎನಿಸಲಿಲ್ಲ.

ರಾಜ್ಯಪಾಲ ಎಚ್ ಆರ್ ಭಾರದ್ವಜ್ ಅವರು ವಿಧಾನಸಭೆ ಸಭಾಂಗಣ ಪ್ರವೇಶಿಸುತ್ತಿದ್ದಂತೆ ಗೋಪಾಲಕೃಷ್ಣ ಎದ್ದು ನಿಂತು ಫಲಕ ಪ್ರದರ್ಶಿಸಿದರು. ರಾಜ್ಯಪಾಲರ ವಿರುದ್ಧ ಧಿಕ್ಕಾರ ಫಲಕದಲ್ಲಿ 'ಧಿಕ್ಕಾರ ಧಿಕ್ಕಾರ ರಾಜ್ಯಪಾಲರಿಗೆ ಧಿಕ್ಕಾರ..ಸುಪ್ರೀಂಕೋರ್ಟ್ ರ್ತೀರ್ಪಿನ ಅನ್ವಯ ಅರ್ಹ ಶಾಸಕರಾಗಿ ರಾಜ್ಯಪಾಲರನ್ನು ಭೇಟಿ ಮಾಡಲು ರಾಜಭವನಕ್ಕೆ ತೆರಳಿದಾಗ ಪ್ರವೇಶವನ್ನು ನಿರಾಕರಿಸಿದ ರಾಜ್ಯಪಾಲರಿಗೆ ಧಿಕ್ಕಾರ' ಎಂದು ಬರೆಯಲಾಗಿತ್ತು.

ನಂತರ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ರೇವಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಗೈರು ಹಾಜರಾಗಿ ತಮ್ಮ ವಿರೋಧ ವ್ಯಕ್ತಪಡಿಸಿದರು.

ರಾಜ್ಯಪಾಲರು ಮಾತ್ರ ತಮ್ಮ ಭಾಷಣದಲ್ಲಿ ಸದಾನಂದ ಗೌಡರ ಸರ್ಕಾರವನ್ನು ಹೊಗಳಿ ಅಟ್ಟಕ್ಕೇರಿಸಿಬಿಟ್ಟರು, ಜಲ ಸಮಸ್ಯೆ, ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿದೆ. ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+