ಜಗನ್ ನೆಂಟ ಸುನಿಲ್ ರೆಡ್ಡಿ ಜೈಲಿಗೆ

ಬುಧವಾರ ಸುನಿಲನನ್ನು ಸಿಬಿಐ ವಿಶೇಷ ಕೋರ್ಟಿನಲ್ಲಿ ಹಾಜರುಪಡಿಸಲಾಯಿತು. ಆ ಸಂದರ್ಭದಲ್ಲಿ, 'ಸುನಿಲನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಾಗಿದೆ. 15 ದಿನಗಳ ಕಾಲ ನಮ್ಮ ಕಸ್ಟಡಿಗೆ ಒಪ್ಪಿಸಿ' ಎಂದು ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಅವರು ಮನವಿ ಮಾಡಿದರು.
ಆದರೆ ಸುನಿಲ್ ಪರ ವಕೀಲರು ಸುನಿಲ್ ಬಂಧನ ಅನಿರೀಕ್ಷಿತವಾಗಿ ದಿಢೀರನೆ ಆಗಿದೆ. ಪ್ರತಿವಾದ ಮಂಡಿಸಲು ಕಾಲಾವಕಾಶ ಬೇಕು ಎಂದು ಕೋರ್ಟಿಗೆ ಮೊರೆಹೋದರು. ಅದನ್ನು ಮನ್ನಿಸಿದ ಕೋರ್ಟ್, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ಎಮ್ಮಾರ್ ಟೌನ್ ಶಿಪ್ ಹಗರಣದಲ್ಲಿ ಸಿಬಿಐ ಬಂಧನದಲ್ಲಿರುವ ಉದ್ಯಮಿ ತುಮ್ಮಲ ರಂಗಾರಾವ್ ಕೋರ್ಟಿನಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಅದರಂತೆ, ಪ್ರಕರಣದ ಪ್ರಮುಖ ಆರೋಪಿ ಕೋನೇರು ಪ್ರಸಾದ್ ಆದೇಶಿಸಿದಂತೆ ಸುನಿಲ್ ಗೆ 80 ಕೋಟಿ ರುಪಾಯಿ ನೀಡಿರುವುದಾಗಿ ಸಿಬಿಐ ಹೇಳಿದೆ. ಎಮ್ಮಾರ್ ಹಗರಣದಲ್ಲಿ ಕೋನೇರು ಪ್ರಸಾದ್ 138 ಕೋಟಿ ರುಪಾಯಿ ಅಕ್ರಮ ಎಸಗಿದ್ದಾರೆ.












Click it and Unblock the Notifications