ಜಯಲಲಿತಾ ಗೆಳತಿ ಶಶಿ ಬಂಧನಕ್ಕೆ ವೇದಿಕೆ ಸಜ್ಜು

ಕೊಯಮತ್ತೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ನಂದಕುಮಾರ್ ನೇತೃತ್ವದ ಗುಂಪೊಂದು ನೇರವಾಗಿ ಜಿಲ್ಲಾಧಿಕಾರಿ ಹರಿಹರನ್ ಅವರನ್ನು ಭೇಟಿ ಮಾಡಿ, ಶಶಿಕಲಾ ನಟರಾಜನ್ ಅವರನ್ನು ಭೂಕಬಳಿಕೆ ಸಂಬಂಧ ಬಂಧಿಸಬೇಕು ಎಂದು ಮಂಗಳವಾರ ಆಗ್ರಹಿಸಿದೆ.
ಏನಿದು ಪ್ರಕರಣ: 2011ರ ನವೆಂಬರಿನಲ್ಲಿ ವಡವಳ್ಳಿ ಸಮೀಪ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣನ್ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಢಿಯಾ ನಡೆಸಿದ ಹರಾಜಿನ ಮೂಲಕ 2.2 ಕೋಟಿ ರೂಪಾಯಿಗೆ ಖರೀದಿಸಿರುವ 1.2 ಎಕರೆ ಜಮೀನಿನನ್ನು ಕಬಳಿಸಲು ಶಶಿಕಲಾ ಮತ್ತು ಅವರ ಐವರು ಬಂಧುಗಳು ಸಂಚು ರೂಪಿಸಿದ್ದಾರೆ. ಈ ಸಂಬಂಧ ತಮ್ಮ ಬಳಿ ಬಲವಾದ ಸಾಕ್ಷ್ಯುಗಳಿವೆ ಎಂದು ನಂದಕುಮಾರ್ ಹೇಳಿದ್ದಾರೆ.












Click it and Unblock the Notifications