ಬನ್ನೂರಮಠ ನಿರಾಕರಣೆಗೆ ಭೂಕಳಂಕ ಕಾರಣವಲ್ಲ: ಭಾರದ್ವಾಜ್
ಇದುವರೆಗೂ, ಖಾಲಿ ಬಿದ್ದಿದ್ದ ಮಹತ್ವದ ಲೋಕಾಯುಕ್ತ ಪೀಠವೇರಲು ನ್ಯಾಯಮೂರ್ತಿ ಸಮೀನ್ದಾರ್ ರುದ್ರಯ್ಯ ಬನ್ನೂರುಮಠ ಅವರ ಹೆಸರನ್ನು ನಿರಾಕರಿಸುತ್ತಿರುವುದಕ್ಕೆ 'ಅಕ್ರಮ ಸೈಟ್ ಕಬಳಿಕೆ' ಕಾರಣವೆಂದು ಭಾವಿಸಲಾಗಿತ್ತು. ಆದರೆ ಇಂದು ಅಕ್ರಮ ನಿವೇಶನ ಕಾರಣವಲ್ಲ. ಅವರ ನೇಮಕಕ್ಕೆ ಅನುಮತಿಸದಿರಲು ಬೇರೆಯದೇ ಕಾರಣವಿದೆ ಎಂದು ಭಾರದ್ವಾಜ್ ಸ್ಪಷ್ಟಪಡಿಸಿದ್ದಾರೆ.
ಹಾಗೆ ನೋಡಿದರೆ ಭಾರದ್ವಾಜ್ ಅವರು ನ್ಯಾ ಬನ್ನೂರುಮಠ ನೇಮಕಕ್ಕೆ ಕೊಕ್ಕೆ ಹಾಕಲು ಬೇರೆಯದೇ ಕಾರಣವಿದೆ ಎಂಬುದರ ಬಗ್ಗೆ ಈ ಹಿಂದೆಯೇ ಸುಳಿವು ನೀಡಿದ್ದರು. ಆದರೆ ಇಂದು ಅದನ್ನು ದೃಢಪಡಿಸಿದ್ದಾರಾದರೂ ಅಂತಹ 'ಘನ ಕಾರಣ' ಏನೆಂಬುದನ್ನು ಬಹಿರಂಗಪಡಿಸಲಿಲ್ಲ. 'ನ್ಯಾ ಬನ್ನೂರುಮಠರ ವಿರುದ್ಧ ನೇಖ ಆರೋಪಗಳಿವೆ ಎಂದು ಈ ಹಿಂದೆ ಸ್ವತಃ ಭಾರದ್ವಾಜ್ ಅವರೇ ಹೇಳಿದ್ದರು.
'ನ್ಯಾ ಬನ್ನೂರುಮಠರ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ. ಆದರೂ ಅವರು ಲೋಕಾಯುಕ್ತ ಸ್ಥಾನಕ್ಕೆ ನೇಮಕವಾಗುವುದಕ್ಕೆ ನನ್ನ ತೀವ್ರ ವಿಓಧವಿದೆ. ಯಾವುದೇ ಕಾರಣಕ್ಕೂ ನಾನು ಸಮ್ಮತಿ ಸೂಚಿಸುವುದಿಲ್ಲ. ಈ ಬಗ್ಗೆ ಸರಕಾರಕ್ಕೂ ಸ್ಪಷ್ಟವಾಗಿ ತಿಳಿಸಿದ್ದೇನೆ' ಎಂದು ರಾಜ್ಯಪಾಲ ಭಾರದ್ವಾಜ್ ಅವರು ಕಡ್ಡಿ ಮುರಿದಂತೆ ಹೇಳಿದರು.