ಉಪ ಲೋಕಾಯುಕ್ತ ಚಂದ್ರಶೇಖರಯ್ಯ ಸಹ ಭೂಕಳಂಕಿತರೇ!

'ನ್ಯಾಯಾಂಗ ಬಡಾವಣೆಯಲ್ಲಿ ನಾನೊಬ್ಬನೇ ನಿವೇಶನ ಹೊಂದಿಲ್ಲ. ನನಗಿಂತಲೂ ಮೊದಲೇ ಅನೇಕ ನ್ಯಾಯಾಧೀಶರು ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ' ಎಂದು ನ್ಯಾ ಚಂದ್ರಶೇಖರಯ್ಯ ಅವರು ತಮ್ಮ ಮೇಲಿನ ಆರೋಪಕ್ಕೆ ಉತ್ತರಿಸಿದ್ದಾರೆ. ತನ್ಮೂಲಕ ಮೇಲ್ನೋಟಕ್ಕೆ ಈ ಆರೋಪವನ್ನು ಅವರೇಒಪ್ಪಿಕೊಂಡಂತಾಗಿದೆ.
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಅನ್ನುವಂತೆ ಈ ಹಿಂದಿನಿಂದಲೂ ಅನೇಕ ನ್ಯಾಯಾಧೀಶರು ಇಲ್ಲಿ ನಿವೇಶನ ಪಡೆದಿದ್ದಾರೆ. ಸೋ, ನನಗೊಬ್ಬನಿಗೇ ಆ ಕಳಂಕ ತಟ್ಟುವುದಿಲ್ಲ ಎನ್ನುವ ಮೂಲಕ ನ್ಯಾ ಚಂದ್ರಶೇಖರಯ್ಯ ತಾವು ಅಕ್ರಮವಾಗಿ ನಿವೇಶನ ಪಡೆದಿರುವುದಕ್ಕೆ ತರ್ಕರಹಿತ ಸಮಜಾಯಿಷಿ ನೀಡಿದ್ದಾರೆ.
ಅಸಲಿಗೆ ಕೋರ್ಟ್ ಉದ್ಯೋಗಿಗಳಿಗೆ ಮಾತ್ರವೇ ಈ ಬಡಾವಣೆಯಲ್ಲಿ ನಿವೇಶನ ನೀಡಬೇಕು ಎಂಬ ಕಾನೂನು ಇದೆ. ಆದರೆ ಈ ಕಾನೂನು ಪರಿಪಾಲಕ ನ್ಯಾಯಮೂರ್ತಿಗಳೂ ತಾವೂ ಉದ್ಯೋಗಿಗಳೇ ಎಂಬ ತರ್ಕಕ್ಕೆ ಬಿದ್ದು ಮನಸೋ ಇಚ್ಛೆ ಇಲ್ಲಿ ನಿವೇಶನಗಳನ್ನು ಪಡೆದಿದ್ದಾರೆ. ನೌಕರರಿಗೆ ಮೀಸಲಾದ ಅನ್ನವನ್ನು ಈ ನ್ಯಾಯದೇವತೆಗಳು ಯಾವುದೇ ಎಗ್ಗಿಲ್ಲದೆ ಕಬಳಿಸಿದ್ದಾರೆ.
ಮತ್ತು ದೌರ್ಭಾಗ್ಯದ ಸಂಗತಿಯೆಂದರೆ ಅದನ್ನು ಇಂದಿಗೂ ಸಮರ್ಥಿಸಿಕೊಳ್ಳುತ್ತಲೂ ಇದ್ದಾರೆ. ನ್ಯಾಯಮೂರ್ತಿಗಳಿಗೇ ಕಾನೂನು ಬೋಧಿಸುವಂತಹ ದುರವಸ್ಥೆ ಈ ನೆಲಕ್ಕೆ ಒದಗಿಬಂದಿರುವುದು ಅಪಾಯಕಾರಿ ಬೆಳವಣಿಗೆಯೇ. ಯಲಹಂಕ ಬಳಿಯ ಅಳ್ಳಾಳ ಸಂದ್ರದಲ್ಲಿ ನಿರ್ಮಾಣವಾಗಿರುವ ವಿವಾದಿತ ನ್ಯಾಯಾಂಗ ಬಡಾವಣೆಯಲ್ಲಿ ನ್ಯಾ ಚಂದ್ರಶೇಖರಯ್ಯ ಅವರು ತಮ್ಮ ಹೆಸರಲ್ಲಿ ನಿವೇಶನ ಹೊಂದಿದ್ದಾರೆ. ಎಟಿ ರಾಮಸ್ವಾಮಿ ವರದಿಯಲ್ಲೂ ಇವರ ಹೆಸರು ಉಲ್ಲೇಖವಾಗಿದೆ.
ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಂಘದ ಸದಸ್ಯರಾದ ಬಳಿಕ ನ್ಯಾ ಚಂದ್ರಶೇಖರಯ್ಯ ಅವರ ಹೆಸರಿಗೆ 80x50 ಅಳತೆಯ ನಿವೇಶನವನ್ನು (ಸಂಖ್ಯೆ 1296/11) ಸರಿಯಾಗಿ 15 ವರ್ಷಗಳ ಹಿಂದೆ (18-01-1997) ಕ್ರಯ ಮಾಡಿಕೊಡಲಾಗಿದೆ. ಆದರೆ ಇದು ಗೃಹ ನಿರ್ಮಾಣ ಸಂಘದ ಬೈಲಾಗೆ ಸಂಪೂರ್ಣ ವಿರುದ್ಧವಾಗಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications