ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಕೀಲರ ಪುಂಡಾಟಿಕೆ: ಪೊಲೀಸರೇ ಬಲಿಪಶು-ಗೃಹಸಚಿವ

By Srinath
|
Google Oneindia Kannada News

bangalore-lawyers-vs-police-always-police-scapegoats-ashok
ಬೆಂಗಳೂರು, ಜ.18: ಮಂಗಳವಾರ ಬೆಂಗಳೂರು ಹೃದಯ ಭಾಗಕ್ಕೆ ಲಗ್ಗೆಯಿಟ್ಟು ಧಾಂದಲೆಯೆಬ್ಬಿಸಿದ ನಗರದ ವಕೀಲರ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ನಿನ್ನೆ ಇಡೀ ದಿನ ಟ್ರಾಫಿಕ್ ಪುಂಡಾಟಿಕೆ ನಡೆಸಿ ಬಸವಳಿದ ವಕೀಲರು ಸದ್ಯಕ್ಕೆ ದಣಿವಾರಿಸಿಕೊಳ್ಳುತ್ತಿದ್ದಾರಾದರೂ ಟ್ರಾಫಿಕ್ ಕಿರಿಕಿರಿ ಅನುಭವಿಸಿದ ಜನಸಾಮಾನ್ಯರು ಇನ್ನೂ ಆ ದುಃಸ್ವಪ್ನದಿಂದ ಎದ್ದಿಲ್ಲ.

ಟ್ರಾಫಿಕ್ ಜಾಮ್ ನಿಂದ ತೀವ್ರಬಾಧೆಗೊಳಗಾದ ಶಾಂತಿಪ್ರಿಯ ಬೆಂಗಳೂರಿನ ಜನತೆ ಒಂದೇ ಸಮನೆ ದಟ್ಸ್ ಕನ್ನಡ ಕಚೇರಿಗೆ ಫೋನ್ ಮತ್ತು ಇಮೇಲ್ ಗಳ ಮೂಲಕ ತಮ್ಮ ರೋಷ ಹೊರಹಾಕುತ್ತಿದ್ದಾರೆ.

ಈ ಮಧ್ಯೆ, ಆಯಾ ಇಲಾಖೆಗಳ ಹೊಣೆ ಹೊತ್ತ ಗೃಹ ಸಚಿವ ಆರ್ ಅಶೋಕ್ ಮತ್ತು ಕಾನೂನು ಸಚಿವ ಸುರೇಶ್ ಕುಮಾರ್ ವಕೀಲರ ಪುಂಡಾಟಿಕೆಯನ್ನು ಕಟು ಶಬ್ದಗಳಿಂದ ಖಂಡಿಸಿದ್ದಾರೆ.

'ಇಂತಹ ಘಟನೆಗಳು ನಡೆದಾಗ ಹೆಚ್ಚಾಗಿ ಪೊಲೀಸರೇ ಬಲಿಪಶುಗಳಾಗುತ್ತಾರೆ. ಅದಕ್ಕಿಂತ ಹೆಚ್ಚಾಗಿ ವಕೀಲರು ಪೊಲಸರ ಮೇಲೆ ಮುಗಿಬೀಳುವುದನ್ನೇ ಗೀಳಾಗಿಸಿಕೊಂಡಿದ್ದಾರೆ. ಪೊಲೀಸರು ಅಸಹಯಾಕರಾಗಿಲ್ಲ. ತಾಳ್ಮೆ ಬಹಿಸಿ,ಪ್ರಕರಣವನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ಘಟನಾವಳಿ ಬಗ್ಗೆ ವರದಿ ಸಲ್ಲಿಸುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿದ್ದೇನೆ' ಎಂದು ಅಶೋಕ್ ಹೇಳಿದ್ದಾರೆ.

ವಕೀಲರು ಬೀದಿಗೆ ಬಂದಿದ್ದು ಸರಿಯಲ್ಲ: ತಾಳ್ಮೆ ವಹಿಸಿದ ಸಮಸ್ಯೆಯ ಆರಂಭಿಕ ಹಂತದಲ್ಲೇ ವಕೀಲರು ಬೀದಿಗೆ ಬಂದಿದ್ದು ಸರಿಯಲ್ಲ. ಅವರ ಈ ವರ್ತನೆಯಿಂದ ಸಮಾಜದ ಇತರೆ ವರ್ಗದವರಿಗೆ ತಪ್ಪು ಸಂದೇಶ ರವಾನಿಸಿದಂತಾಗಿದೆ' ಎಂದು ಸ್ವತಃ ಕಾನೂನು ಸಚಿವರೇ ತಮ್ಮ ಬಾಂಧವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary
“Advocates have a history of fighting with cops. Every time, it’s the cops who have compromised,” - Home Minister-R Ashok. Aslo Suresh kumar, Law minister came down heavily on the Lawers who resorted to meningless strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X