ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಾಸಕ ಕೃಷ್ಣಪ್ಪ ಕುಟುಂಬದ ಮೇಲೆ ಲೋಕಾಯುಕ್ತ ತನಿಖೆ
ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಅವರ ಕುಟುಂಬದ ಮೇಲೆ ವಕೀಲ ಪ್ರಕಾಶ್ ಸಲ್ಲಿಸಿರುವ ದೂರಿನಲ್ಲಿ ಮಾಡಲಾಗಿರುವ ಆರೋಪಗಳು ತನಿಖೆಗೆ ಸೂಕ್ತ ಹಾಗೂ ಅರ್ಹವಾಗಿದೆ ಎಂದು ನ್ಯಾ ಸುಧೀಂದ್ರರಾವ್ ಪರಿಗಣಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಸಕ ಎಂ.ಕೃಷ್ಣಪ್ಪ ಮತ್ತವರ ಪತ್ನಿ ಪ್ರಿಯದರ್ಶಿನಿ, ಪುತ್ರರಾದ ಪ್ರಿಯಕೃಷ್ಣ ಹಾಗೂ ಪ್ರದೀಪ್ ವಿರುದ್ಧ ಅಪರಾಧ ದಂಡ ಪ್ರಕಿಯಾ ಸಂಹಿತೆ ಕಾಯ್ದೆ (ಸಿಆರ್ಪಿಸಿ) ಸೆಕ್ಷನ್ 156(3)ರಡಿ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ನಗರ ಲೋಕಾಯುಕ್ತ ಪೊಲೀಸ್ ಅಧೀಕ್ಷರಿಗೆ ಆದೇಶಿಸಿದ ನ್ಯಾಯಾಧೀಶರು, ತನಿಖಾ ವರದಿಯನ್ನು ಫೆ.17ರಂದು ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.
ಲೋಕಾಯುಕ್ತ ಕೋರ್ಟ್ನ ಈ ಆದೇಶದಿಂದ ರಾಜ್ಯ ರಾಜಕೀಯದ ಮತ್ತೊಂದು ಕುಟುಂಬದ ಮೇಲೆ ಪೊಲೀಸ್ ತನಿಖೆಗೆ ಆದೇಶ ನೀಡಲಾಗಿದೆ. ಎಲ್ಲ ಆರೋಪಿಗಳ ವಿರುದ್ಧ ಶೀಘ್ರವೇ ಎಫ್ಐಆರ್ ದಾಖಲಾಗುವ ಸಾಧ್ಯತೆಯಿದೆ.
Comments
English summary
Lokayukta court judge Sudhindra Rao has ordered probe against Congress MLA M Krishnappa and his wife Priyadarshini, MLA Priya Krishna and Pradeep Krishna in illegal assets case. Earlier Bangalore based advocate HC Prakash lodged a private complaint against them in Lokayukta court on (Jan.9)
Story first published: Tuesday, January 17, 2012, 10:53 [IST]