ಯಡಿಯೂರಪ್ಪಗೆ ಮೂಗುದಾರ ಹಾಕಲು ಅಸಾಧ್ಯ!

BS Yeddyurappa and Eshwarappa
ಬೆಂಗಳೂರು, ಜ.11: ಯಡಿಯೂರಪ್ಪ ಅವರಿಗೆ ಆರೆಸ್ಸೆಸ್ ಮೂಗುದಾರ ಹಾಕಲು ಯತ್ನಿಸುತ್ತಿದ್ದು ಇದು ಎಂದಿಗೂ ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಬೆಂಬಲಿಗರು ಪಿಸುಮಾತಿನಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಯಡಿಯೂರಪ್ಪ ಮಾತ್ರ ಆರೆಸ್ಸೆಸ್ ಸಭೆ ಹಾಜರಾಗಲು ಸಿದ್ಧತೆ ನಡೆಸಿದ್ದಾರೆ.

ಪಕ್ಷದೊಳಗಿನ ಆಂತರಿಕ ಕಚ್ಚಾಟದಿಂದ ರಾಜ್ಯದ ಆಡಳಿತ ಯಂತ್ರ ಅಸ್ತವ್ಯಸ್ತವಾಗಿದ್ದು, ದಕ್ಷಿಣ ಭಾರತದ ಪ್ರಥಮ ಬಿಜೆಪಿ ಸರ್ಕಾರ ಉಳಿಯುವುದೇ ಕಷ್ಟ ಎನ್ನುವ ಪರಿಸ್ಥಿತಿ ಒದಗಿರುವುದನ್ನು ಮನಗಂಡ ಆರೆಸ್ಸೆಸ್ ಈ ಸಭೆ ಕರೆದಿದೆ. ಯಡಿಯೂರಪ್ಪ ಅವರಿಗೂ ಮೊದಲು ಈಶ್ವರಪ್ಪ ಅವರು ಕೇಶವಕೃಪ ಬಾಗಿಲು ತಟ್ಟಿದ್ದರು ಎಂಬುದನ್ನು ಮರೆಯುವಂತಿಲ್ಲ.

ಜನವರಿ 29ರಂದು ಸಂಘದ ಹಿರಿಯ ನಾಯಕ, ಮಾಜಿ ಸರಸಂಘಚಾಲಕರಾದ ಸುದರ್ಶನ್ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಸಭೆಯ ವಿದ್ಯಮಾನಗಳನ್ನು ಅವರಿಗೆ ತಿಳಿಸಲಾಗುತ್ತದೆ.ಯಡಿಯೂರಪ್ಪ ಅವರು ಮನಸಾರೆ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರ ರಾಜಕೀಯ ಕಾರ್ಯದರ್ಶಿ ಹೇಳಿದ್ದಾರೆ.

ಇತ್ತೀಚೆಗೆ ಯಡಿಯೂರಪ್ಪ ಕೊಂಚ ತಣ್ಣಗಾದರೂ ಅವರ ಬೆಂಬಲಿಗರು ಮುಖ್ಯಮಂತ್ರಿ ಆರೆಸ್ಸೆಸ್ ನಾಯಕರಾದ ಮೈಚ ಜಯದೇವ್, ಪ್ರಭಾಕರ್ ಭಟ್, ಮುಕುಂದ್, ರವೀಂದ್ರ, ಸತೀಶ್ ಮತ್ತು ಸಂತೋಷ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿರುತ್ತಾರೆ.

ಹೆಚ್ಚೆಂದರೆ ಏನಾಗಬಹುದು?: ನಿರೀಕ್ಷೆಯಂತೆ ಈಶ್ವರಪ್ಪ ಹಾಗೂ ಯಡಿಯೂರಪ್ಪ ನಡುವಿನ ಬಿಕ್ಕಟ್ಟು ಶಮನವಾಗಲಿದೆ. ಆದರೆ, ಇದು ಯಡಿಯೂರಪ್ಪ ಅವರ ಶರಣಾಗತಿ ಎನ್ನಲಾಗದು. ಸದಾನಂದ ಗೌಡರ ಸರ್ಕಾರ ಉರುಳಿಸುವ ಯಾವ ಇರಾದೆಯೂ ಯಡಿಯೂರಪ್ಪ ಮುಂದಿಲ್ಲ.

ಸಂಕ್ರಾಂತಿ ನಂತರ ಯಡಿಯೂರಪ್ಪ ಹೊಸ ಬೇಡಿಕೆ ಪಟ್ಟಿಯೊಂದಿಗೆ ಮತ್ತೆ ಪ್ರತ್ಯಕ್ಷವಾಗುವ ಸಾಧ್ಯತೆಯಿದೆ. ಯಡ್ಡಿ ಬೆಂಬಲಿಗರಾದ ರೇಣುಕಾಚಾರ್ಯ, ಸುರೇಶ್ ಗೌಡ ಮುಂತಾದವರಿಗೆ ವಾಗ್ದಂಡನೆ ವಿಧಿಸುವ ಸಂಭವವೂ ಇದೆ. ಏನಾಗುತ್ತೋ ಕಾದು ನೋಡೋಣ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+