ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರ್ಜಾಪುರ ಪ್ಲಾಸ್ಟಿಕ್ ಗೋಡೌನಿನಲ್ಲಿ ಬೆಂಕಿ: ಯುವಕ ಸಜೀವ ದಹನ
ಆರ್ ಆರ್ ಪ್ಲಾಸ್ಟಿಕ್ ಗೋದಾಮಿನಲ್ಲಿದ್ದ ರಾಸಾಯನಿಕ ಡಬ್ಬವನ್ನು ಕಟ್ ಮಾಡಿ ತೆಗೆಯಲು ವೆಲ್ಡಿಂಗ್ ಕಟ್ಟರ್ ಬಳಸಿದಾಗ ಅದು ಸಿಡಿದು ಸಮೀಪದಲ್ಲಿದ್ದ ಔರಂಗಾಬಾದಿನ ಯುವಕ ನಿರಂಜನ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ತಮಿಳುನಾಡು ಮೂಲದ ಗೋದಾಮಿನ ಮಾಲೀಕ ಆರ್ಮುಗಂನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಲಾಗಿದೆ. ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ. ಫ್ಯಾಕ್ಟರಿಯಲ್ಲಿದ್ದ ಇತರೆ ಉದ್ಯೋಗಿಗಳನ್ನು ಪಾರುಮಾಡಲಾಗಿದೆ.
Comments
English summary
Fire mishap Plastic godown Sarjapur Bangalore youth dead. Niranjan (30) burnt alive
Story first published: Wednesday, January 11, 2012, 16:14 [IST]