Get Updates
Get notified of breaking news, exclusive insights, and must-see stories!

ಉಗ್ರರಿಗಿಂತ ಮಠಗಳಿಗೆ ಹಣ ನೀಡುವುದೇ ಒಳಿತು: ಸಚಿವ ಅಶೋಕ್

Afzal Guru & Mutt
ಬೆಂಗಳೂರು, ಡಿ 4: ನಮ್ಮ ಸಂಸ್ಕೃತಿಗೆ ಮಾರು ಹೋಗಿ ವಿದೇಶಿಯರು ನಮ್ಮಲ್ಲಿ ಬರುತ್ತಾರೆ. ಉಗ್ರರ ರಕ್ಷಣೆಗೆ ಹಣ ವ್ಯಯಿಸುವ ಬದಲು ಮಠಗಳಿಗೆ ಹಣ ನೀಡುವುದೇ ಸೂಕ್ತ ಎಂದು ಗೃಹ ಮತ್ತು ಸಾರಿಗೆ ಸಚಿವ ಆರ್ ಅಶೋಕ್ ಅಭಿಪ್ರಾಯ ಪಟ್ಟಿದ್ದಾರೆ.

ಮಠಗಳು ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿವೆ. ಉಗ್ರ ಅಫ್ಜಲ್ ಗುರು ಮತ್ತು ಕಸಬ್ ರಕ್ಷಣೆಗೆ ಕೇಂದ್ರ ಸರಕಾರ ಇದುವರೆಗೆ ಮೂವತ್ತು ಕೋಟಿ ರೂಪಾಯಿ ಹಣ ಖರ್ಚು ಮಾಡಿದೆ. ನಾವು ಮಠಗಳಿಗೆ ಇದುವರೆಗೆ ಅರವತ್ತು ಕೋಟಿ ರೂಪಾಯಿ ನೀಡಿದ್ದೇವೆ. ನಾವು ನೀಡುವ ಅನುದಾನಗಳಿಂದ ಮಠಗಳು ಇನ್ನೂ ಹೆಚ್ಚಿನ ಅನ್ನದಾಸೋಹ, ವಿದ್ಯಾದಾನದಲ್ಲಿ ತೊಡಗಲು ಅನುಕೂಲವಾಗುತ್ತದೆ ಎಂದು ಅಶೋಕ್ ಹೇಳಿಕೆ ನೀಡಿದ್ದಾರೆ.

ರಂಭಾಪುರಿ ಶ್ರೀಗಳಿಗೆ ನಮನ ಸಲ್ಲಿಸಿ ಮಾತನಾಡುತ್ತಿದ್ದ ಅಶೋಕ್, ಹೆಚ್ಚಿನ ಮಠಗಳು ಅನ್ನದಾಶೋಹ, ಶೈಕ್ಷಣಿಕ ಸಂಸ್ಥೆ, ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಬುದ್ದಿಜೀವಿಗಳು ನಮ್ಮ ಮೇಲೆ ಆರೋಪ ಮಾಡುವ ಮೊದಲು ಇದನ್ನೆಲ್ಲಾ ಗಮನಿಸಿ ಹೇಳಿಕೆ ನೀಡಲಿ ಎಂದು ಅವರು ಕಿವಿಮಾತು ಹೇಳಿದ್ದಾರೆ.

ವಿದೇಶಿಯರಲ್ಲಿ ಬಹಳಷ್ಟು ಹಣವಿದ್ದರೂ ಅವರಲ್ಲಿ ನೆಮ್ಮದಿವಿರುವುದಿಲ್ಲ. ಮಾನಸಿಕಶಾಂತಿಗಾಗಿ ನಮ್ಮ ದೇಶಕ್ಕೆ ಬರುವ ಇಂತಹ ಪ್ರವಾಸಿಗರಿಗೆ ನಮ್ಮ ಸಂಸ್ಕೃತಿ ಬಗ್ಗೆ ವಿವರವಾಗಿ, ಮನದಟ್ಟು ಮಾಡುವ ಹೇಳುವ ಅವಶ್ಯಕತೆಯಿದೆ. ಹಾಗಾಗಿ ಮಠಗಳಿಗೆ ಹಣ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಶೋಕ್ ಅಭಿಪ್ರಾಯ ಪಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+