ಉತ್ತಮ ಛಾಯಾಗ್ರಾಹಕರಿಗೆ ಟಿಎಸ್ ಸತ್ಯನ್ ಪ್ರಶಸ್ತಿ

ಖುದ್ದು ಖ್ಯಾತ ಛಾಯಾಪತ್ರಕರ್ತರಾಗಿದ್ದ ತಂಬ್ರಹಳ್ಳಿ ಸುಬ್ರಮಣ್ಯ ಸತ್ಯನಾರಾಯಣ ಅಯ್ಯರ್ (ಟಿಎಸ್ ಸತ್ಯನ್) ಅವರ ಹೆಸರಲ್ಲಿ ನೀಡುತ್ತಿರುವ ಈ ಪ್ರಶಸ್ತಿಗಳನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಬೆಳಿಗ್ಗೆ 11.15ಕ್ಕೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿತರಿಸಲಿದ್ದಾರೆ.
ಜೀವಮಾನ ಸಾಧನೆ ಪ್ರಶಸ್ತಿ 10 ಸಾವಿರ ರು. ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಉಳಿದ ಪ್ರಶಸ್ತಿ ಪಡೆದವರಿಗೆ 5 ಸಾವಿರ ರು. ಮತ್ತು ಪ್ರಶಸ್ತಿ ಫಲಕ ನೀಡಲಾಗುತ್ತಿದೆ. ಖ್ಯಾತ ಪತ್ರಕರ್ತ ಮತ್ತು ಅಂಕಣಕಾರ ಟಿಜೆಎಸ್ ಜಾರ್ಜ್ ಮತ್ತು ಪ್ರಜಾವಾಣಿ ಸಂಪಾದಕ ಕೆಎನ್ ಶಾಂತ ಕುಮಾರ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.
ಪ್ರಶಸ್ತಿ ಪಡೆದವರು
* ಜೀವಮಾನ ಸಾಧನೆ ಪ್ರಶಸ್ತಿ : ಯಜ್ಞ, ಮಂಗಳೂರು
* ಅತ್ಯುತ್ತಮ ದಿನಪತ್ರಿಕೆ ಛಾಯಾಗ್ರಾಹಕ : ಕೆ. ಗೋಪಿನಾಥನ್, ದಿ ಹಿಂದೂ, ಬೆಂಗಳೂರು
* ಅತ್ಯುತ್ತಮ ವೃತ್ತಿಪರ ಛಾಯಾಗ್ರಾಹಕ : ನೇತ್ರ ರಾಜು, ದಿ ಟೈಮ್ಸ್ ಆಫ್ ಇಂಡಿಯಾ, ಮೈಸೂರು
* ಅತ್ಯುತ್ತಮ ಮ್ಯಾಗಜೀನ್ ಛಾಯಾಗ್ರಾಹಕ : ಭಾನು ಪ್ರಕಾಶ್ ಚಂದ್ರ, ದಿ ವೀಕ್, ಬೆಂಗಳೂರು
* ಅತ್ಯುತ್ತಮ ಹವ್ಯಾಸಿ ಛಾಯಾಗ್ರಾಹಕ : 'ರಿಗ್ರೆಟ್' ಅಯ್ಯರ್, ಬೆಂಗಳೂರು
* ಅತ್ಯುತ್ತಮ ಆನ್ಲೈನ್ ಛಾಯಾಗ್ರಾಹಕ : ಎಮ್ಎಸ್ ಗೋಪಾಲ್, eyeforindia.blogspot.com
ಸೂಚನೆ : ಆಹ್ವಾನ ಪತ್ರಿಕೆ ಇದ್ದವರಿಗೆ ಮಾತ್ರ ಪ್ರವೇಶ ವಿರುತ್ತದೆ. ಸಮಾರಂಭ ಶುರುವಾಗುವ ಮೊದಲೇ ಆಗಮಿಸಬೇಕಾಗಿ ಆಯೋಜಕರು ವಿನಂತಿಸಿಕೊಂಡಿದ್ದಾರೆ. ಸಮಾರಂಭ ರಾಜಭವನದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದೆ.












Click it and Unblock the Notifications