ಅಣ್ಣಾವ್ರ ನಾಡಿಗೆ ಬಂದ ಅಣ್ಣಾ ಹಜಾರೆ

ಫ್ರೀಡಂ ಪಾರ್ಕಿನಲ್ಲಿ ಮಧ್ಯಾಹ್ನ ಸಾರ್ವಜನಿಕ ಸಭೆ ಆಯೋಜಿಸಲಾಗಿದ್ದು, 2.30ರ ಸುಮಾರಿಗೆ ಅಣ್ಣಾ ಹಜಾರೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬೆಂಗಳೂರಿಗೆ ಅಣ್ಣಾ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ಮೇ 28ರಂದು ಬಸವನಗುಡಿಯ ಮೈದಾನದಲ್ಲಿ ಅಣ್ಣಾ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಭಾಷಣ ಮಾಡಿದ್ದರು.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಸುದ್ದಿಗಾರನ್ನುದ್ದೇಶಿಸಿ ಸಂಕ್ಷಿಪ್ತವಾಗಿ ಮಾತನಾಡಿದ ಅಣ್ಣಾ, ಇದೇ ಅಧಿವೇಶನದಲ್ಲಿ ಜನ ಲೋಕಪಾಲ ಮಸೂದೆ ಅಂಗೀಕಾರ ಆಗಬೇಕು. ಜ.1ರೊಳಗೆ ಎಲ್ಲ ಪ್ರಕ್ರಿಯೆ ಮುಗಿಯಬೇಕು ಎಂದರು.
ಈ ಬಾರಿ ಲೋಕಪಾಲ ಮಸೂದೆ ಅಂಗೀಕರಿಸದಿದ್ದರೆ ದೇಶದಾದ್ಯಂತ ಜೈಲ್ ಭರೋ ಆಂದೋಲನಕ್ಕೆ ನಾಂದಿ ಹಾಡಲಾಗುವುದು. ದೇಶದ ಎಲ್ಲ ಜೈಲುಗಳೂ ಯವಕ ಯುವತಿಯರಿಂದ ತುಂಬಿ ತುಳುಕುವುದು. ಇದಕ್ಕೆ ಕೇಂದ್ರ ಸರಕಾರ ಅವಕಾಶ ನೀಡಬಾರದು ಎಂದು ಅಣ್ಣಾ ಎಚ್ಚರಿಸಿದರು.
ಅಣ್ಣಾ ಹಜಾರೆ ಅವರ ಜೊತೆ ಅಣ್ಣಾ ಟೀಂನಲ್ಲಿರುವ ಅರವಿಂದ ಕೇಜ್ರಿವಾಲ್, ಕಿರಣ್ ಬೇಡಿ ಮುಂತಾದವರಿದ್ದಾರೆ. ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಕೂಡ ಸಭೆಯಲ್ಲಿ ಭಾಗವಹಿಸಿ ಜನರನ್ನುದ್ದೇಶಿ ಮಾತನಾಡಲಿದ್ದಾರೆ. ಮಹಾರಾಣಿ ಕಾಲೇಜು ಮುಂದಿರುವ ಫ್ರೀಡಂ ಪಾರ್ಕ್ ಈಗಾಗಲೆ ಜನರಿಂದ ತುಂಬಲು ಪ್ರಾರಂಭವಾಗಿದೆ.












Click it and Unblock the Notifications