ಕೊಯಮತ್ತೂರಿನಲ್ಲಿ ಎರಡು ದಿನ ಕನ್ನಡ ಹಬ್ಬ

ಜಾನಪದ ಹಾಡು ಮತ್ತು ನೃತ್ಯ, ಯಕ್ಷಗಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದೆ.
ಕರ್ನಾಟಕ ಸರ್ಕಾರದ ಜತೆ ಸ್ನೇಹ ಕನ್ನಡ, ಕರ್ನಾಟಕ ಸಂಘಗಳೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ ಎಂದು ಸಂಚಾಲಕ ಎ.ರಾಮದಾಸ್ ಹೇಳಿದ್ದಾರೆ.
ಮೈಸೂರು ದಸರಾ ಮೆರವಣಿಗೆ, ಕೊಡವ ನೃತ್ಯ, ಗೋರಕ ನೃತ್ಯ, ಪೂಜಾ ಕುಣಿತ, ಮಹಿಳೆಯರ ಡೊಳ್ಳು ಕಣಿತ, ಕನ್ನಡದ ಹಳೆಯ ಹಾಡುಗಳು ಹಾಗೂ ಕಾಸರಗೋಡು ತಂಡದವರು ನಡೆಸಿಕೊಡಲಿರುವ ಯಕ್ಷಗಾನ ಹಾಗೂ ತಾಳಮದ್ದಲೆ ಕಾರ್ಯಕ್ರಮಗಳು ರಂಜಿಸಲಿದೆ.
ಕರ್ನಾಟಕ ಸರ್ಕಾರದ ಪ್ರತಿನಿಧಿಗಳಾಗಿ ಸಚಿವ ಸುರೇಶ್ಕುಮಾರ್, ಗೋವಿಂದ ಕಾರಜೋಳ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಕೊಯಮತ್ತೂರು ಕನ್ನಡ ಸಂಘದ ಅಧ್ಯಕ್ಷ ಸಂತೋಷ್ ರಾವ್ ತಿಳಿಸಿದರು.












Click it and Unblock the Notifications