ಹತ್ತು ಮಂದಿ ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ಟಾಟಾ?

ಟಿವಿ9 ವಾಹಿನಿ ಬುಧವಾರ (ಡಿ 14 ) ಪ್ರಸಾರ ಮಾಡಿದ ಫ್ಲ್ಯಾಶ್ ನ್ಯೂಸ್ ಪ್ರಕಾರ, ಅಫ್ಜಲ್ ಪುರ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ನೇತೃತ್ವದಲ್ಲಿ ಸುಮಾರು ಹತ್ತು ಮಂದಿ ಶಾಸಕರು ರಾಜ್ಯದಲ್ಲಿ ಎನ್ ಸಿ ಪಿ ಪಕ್ಷ ಸ್ಥಾಪಿಸುವ ಕಾರ್ಯತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗಿದೆ.
ಪ್ರಸಕ್ತ ಅಸೆಂಬ್ಲಿ ಅಧಿವೇಶನದ ಮುಗಿದ ನಂತರ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಮುಂದಿನ ಕಾರ್ಯತಂತ್ರ ರೂಪಿಸಲು ಅತೃಪ್ತ ಶಾಸಕರು ಮುಂದಾಗಲಿದ್ದಾರೆ. ಹೈದರಾಬಾದ್ ಮತ್ತು ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಶಾಸಕರು ಇದಕ್ಕೆ ಒಲವು ತೋರಿಸಿದ್ದಾರೆಂದು ವಾಹಿನಿ ವರದಿ ಮಾಡಿದೆ. ಭಾರೀ ಕುತೂಹಲ ಮೂಡಿಸಿರುವ ಈ ಬೆಳವಣಿಗೆ ಮುಂದಿನ ದಿನದಲ್ಲಿ ಯಾವ ರೀತಿಯಲ್ಲಿ ತಿರುವು ಪಡೆಯಲಿದೆ ಎನ್ನುವುದು ಕಾದು ನೋಡಬೇಕಷ್ಟೆ.












Click it and Unblock the Notifications