1 ಲಕ್ಷ ಕೋಟಿ ಐಟಿ ರಫ್ತು ನಿರೀಕ್ಷೆಯಲ್ಲಿ ಕರ್ನಾಟಕ

2010-11 ಆರ್ಥಿಕ ವರ್ಷದಲ್ಲಿ ಸುಮಾರು 85,000 ಐಟಿ ರಫ್ತು ಸಾಧಿಸಿದ ಕರ್ನಾಟಕ ಈ ಬಾರಿ ಶೇ.22ರಷ್ಟು ಏಳಿಗೆ ಕಂಡಿದ್ದು, 100,000 ಕೋಟಿ ರು ದಾಟುವ ನಿರೀಕ್ಷೆಯಿದೆ
ಐಟಿಐಆರ್ ಯೋಜನೆ: ರಾಜ್ಯದಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಗತಿ ಏಳಿಗೆ ಕಂಡಿದೆ. 8 ಲಕ್ಷ ಮಂದಿ ನೇರವಾಗಿ ನೇಮಕಾತಿಯಾಗಿದ್ದಾರೆ. ವರ್ಷಾಂತ್ಯಕ್ಕೆ 9 ಲಕ್ಷ ಮಂದಿಗೆ ಉದ್ಯೋಗ ಸಿಗಲಿದೆ ಎಂದರು.
ಮಾಹಿತಿ ತಂತ್ರಜ್ಞಾನ ಬಂಡವಾಳ ಪ್ರದೇಶ(ITIR) ನಿರ್ಮಾಣ ಹಾಗೂ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಈ ಹೊಸ ಐಟಿ ಸಿಟಿ ನಿರ್ಮಾಣವಾಗಲಿದೆ ಎಂದು ವಿದ್ಯಾಶಂಕರ್ ಹೇಳಿದರು.
ಸುಮಾರು 40 ಚ.ಕೀ ವಿಸ್ತೀರ್ಣದ ಈ ಐಟಿ ಸಿಟಿ ಎರಡು ಹಂತಗಳಲ್ಲಿ ರೂಪುಗೊಳ್ಳಲಿದೆ. ಮೊದಲ ಹಂತದಲ್ಲಿ 2,000 ಎಕರೆ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳಲಾಗುವುದು. ಐಟಿಐಆರ್ ಯೋಜನೆಯಿಂದ ಸುಮಾರು 1 ಲಕ್ಷ ರೂ ಬಂಡವಾಳ ನಿರೀಕ್ಷಿಸಲಾಗಿದೆ. ಸುಮಾರು 3 ಮಿಲಿಯನ್ ಮಂದಿಗೆ ಉದ್ಯೋಗ ಸಿಗುವ ಭರವಸೆ ಇದೆ ಎಂದು ವಿದ್ಯಾಶಂಕರ್ ವಿವರಿಸಿದರು.
ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಕೇಂದ್ರ ಸರ್ಕಾರದಿಂದ ಇನ್ನೂ ಉತ್ತರ ಬಂದಿಲ್ಲ. ಕರ್ನಾಟಕ ಸರ್ಕಾರ ಸುಮಾರು 50 ಎಕರೆ ಭೂಮಿಯನ್ನು ಐಐಟಿಗಾಗಿ ಕಾಯ್ದಿರಿಸಿದೆ ಎಂದು ವಿದ್ಯಾಶಂಕರ್ ಹೇಳಿದರು.












Click it and Unblock the Notifications