Get Updates
Get notified of breaking news, exclusive insights, and must-see stories!

ಮಡೆಸ್ನಾನ ನಿಷೇಧಿಸಿದರೆ ಅಭ್ಯಂತರವಿಲ್ಲ : ಪೇಜಾವರಶ್ರೀ

Pejawar Sri Vishwesha Tirtha Swamiji
ಹುಬ್ಬಳ್ಳಿ, ಡಿ. 8 : ವಿವಾದಗ್ರಸ್ತ ಮಡೆಸ್ನಾನ ಕುರಿತು ತಟಸ್ಥ ನೀತಿ ತಳೆದು ವ್ಯಾಪಕ ಟೀಕೆಗೊಳಗಾಗಿದ್ದ ಪೇಜಾವರ ಶ್ರೀಗಳಾದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಸರಕಾರ ಮಡೆಸ್ನಾನವನ್ನು ನಿಷೇಧಿಸಿದರೆ ಅಭ್ಯಂತರವೇನೂ ಇಲ್ಲ ಎಂದು ಹೇಳಿ ವಿವಾದಕ್ಕೆ ಮತ್ತಷ್ಟು ಬಿಸಿ ಮುಟ್ಟಿಸಿದ್ದಾರೆ.

ಪೇಜಾವರ ಶ್ರೀಗಳು ವಿದ್ಯಾನಗರದಲ್ಲಿ ಅಖಿಲ ಕರ್ನಾಟಕ ಮಾಧ್ವ ಮಹಾಮಂಡಳ ಹಾಸ್ಟೆಲ್ ಉದ್ಘಾಟಿಸಲು ಬುಧವಾರ ಇಲ್ಲಿಗೆ ಬಂದಾಗ ಈ ನುಡಿಗಳನ್ನು ಹೇಳಿದ್ದಾರೆ. ಆದರೆ, ಈ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸ್ಥಳೀಯರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು ಎಂದು ಸರಕಾರಕ್ಕೆ ಕಿವಿಮಾತು ಹೇಳಿದರು.

ಈ ಆಚರಣೆಯನ್ನು ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಕಳೆದ ನಾಲ್ಕು ಶತಮಾನಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಆಚರಿಸುತ್ತಿರುವವರ ಭಾವನೆಗಳೊಂದಿಗೆ ತಳಕು ಹಾಕಿಕೊಂಡಿದೆ. ಆದ್ದರಿಂದ ನಿರ್ಧಾರ ತೆಗೆದುಕೊಳ್ಳುವಾಗ ಸಾಕಷ್ಟು ಚಿಂತನೆ ನಡೆಸಿ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಪೇಜಾವರ ಶ್ರೀಗಳು ಉಂಡ ಎಲೆಯ ಮೇಲೆ ಉರುಳು ಸೇವೆ ಮಾಡಲಿ ಎಂದು ಕಾಂಗ್ರೆಸ್ ಸಂಸದ ಎಚ್ ವಿಶ್ವನಾಥ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+