ಯಡಿಯೂರಪ್ಪ ಕಾಲಿಗೆ ದೀಡ್ ನಮಸ್ಕಾರ ಹಾಕಿದ ಡಿವಿಎಸ್

dvs-bows-to-bs-yeddyurappa-in-assembly
ಬೆಂಗಳೂರು, ಡಿ.6: ಮಾಜಿ ಸಿಎಂಗೆ ನಮಸ್ಕರಿಸಿದ ಹಾಲಿ ಸಿಎಂ. ಹೌದು ಸೋಮವಾರ ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಇಂತಹ ಕುತೂಹಲಕಾರಿ ಪ್ರಸಂಗ ಕಡುಬಂದಿತು.

ಮೊಟ್ಟಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿವೇಶನದಲ್ಲಿ ಪಾಳ್ಗೊಳ್ಳಲು ಬೆಳಗ್ಗೆ 11.15ಕ್ಕೆ ಮೊಗಸಾಲೆಗೆ ಆಗಮಿಸಿದ ಸಿಎಂ ಸದಾನಂದಗೌಡ ಅವರು ನೇರವಾಗಿ ಯಡಿಯೂರಪ್ಪ ಅವರ ಬಳಿ ಬಂದು ಕೈ ಮುಗಿದು, ಕಾಲಿಗೆ ಬಿದ್ದರು. ಆ ಮೂಲಕ ತಮಗೆ ಅವಕಾಶ ಕೊಟ್ಟಿದ್ದಾಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ನಂತರ ಉಭಯ ನಾಯಕರು ಒಟ್ಟಾಗಿ ಸದನಕ್ಕೆ ತೆರಳಿದರು.

ಶಾಸಕರು, ಸಚಿವರೂ ಯಡ್ಡಿ ಕಾಲಿಗೆ ಬಿದ್ದರು: ಇದೇ ವೇಳೆ, ಮೊಗಸಾಲೆಗೆ ಆಗಮಿಸಿದ ಹಲವು ಶಾಸಕರು ಹಾಗೂ ಸಚಿವರು ಯಡಿಯೂರಪ್ಪ ಅವರನ್ನು ಕಂಡು ಕೊಂಚ ವಿಸ್ಮಿತರಾಗಿಯೇ ಅವರ ಬಳಿ ಆಗಮಿಸಿ ಕಾಲು ಮುಟ್ಟಿ ನಮಸ್ಕರಿಸಿದರು. ಈ ವೇಳೆಗೆ ತಮ್ಮ ಬಳಿ ಬಂದ ಬಂಧೀಖಾನೆ ಸಚಿವ ನಾರಾಯಣಸ್ವಾಮಿ ಅವರನ್ನು ಉದ್ದೇಶಿಸಿ 'ಜೈಲಿನಲ್ಲಿದ್ದಾಗ ಚೆನ್ನಾಗಿ ನೋಡಿಕೊಂಡೆ ಕಣಯ್ಯ ನೀನು' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+