ಯಡಿಯೂರಪ್ಪ ಕಾಲಿಗೆ ದೀಡ್ ನಮಸ್ಕಾರ ಹಾಕಿದ ಡಿವಿಎಸ್

ಮೊಟ್ಟಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿವೇಶನದಲ್ಲಿ ಪಾಳ್ಗೊಳ್ಳಲು ಬೆಳಗ್ಗೆ 11.15ಕ್ಕೆ ಮೊಗಸಾಲೆಗೆ ಆಗಮಿಸಿದ ಸಿಎಂ ಸದಾನಂದಗೌಡ ಅವರು ನೇರವಾಗಿ ಯಡಿಯೂರಪ್ಪ ಅವರ ಬಳಿ ಬಂದು ಕೈ ಮುಗಿದು, ಕಾಲಿಗೆ ಬಿದ್ದರು. ಆ ಮೂಲಕ ತಮಗೆ ಅವಕಾಶ ಕೊಟ್ಟಿದ್ದಾಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ನಂತರ ಉಭಯ ನಾಯಕರು ಒಟ್ಟಾಗಿ ಸದನಕ್ಕೆ ತೆರಳಿದರು.
ಶಾಸಕರು, ಸಚಿವರೂ ಯಡ್ಡಿ ಕಾಲಿಗೆ ಬಿದ್ದರು: ಇದೇ ವೇಳೆ, ಮೊಗಸಾಲೆಗೆ ಆಗಮಿಸಿದ ಹಲವು ಶಾಸಕರು ಹಾಗೂ ಸಚಿವರು ಯಡಿಯೂರಪ್ಪ ಅವರನ್ನು ಕಂಡು ಕೊಂಚ ವಿಸ್ಮಿತರಾಗಿಯೇ ಅವರ ಬಳಿ ಆಗಮಿಸಿ ಕಾಲು ಮುಟ್ಟಿ ನಮಸ್ಕರಿಸಿದರು. ಈ ವೇಳೆಗೆ ತಮ್ಮ ಬಳಿ ಬಂದ ಬಂಧೀಖಾನೆ ಸಚಿವ ನಾರಾಯಣಸ್ವಾಮಿ ಅವರನ್ನು ಉದ್ದೇಶಿಸಿ 'ಜೈಲಿನಲ್ಲಿದ್ದಾಗ ಚೆನ್ನಾಗಿ ನೋಡಿಕೊಂಡೆ ಕಣಯ್ಯ ನೀನು' ಎಂದರು.












Click it and Unblock the Notifications