ರೆಡ್ಡಿ ಅಕ್ರಮ: ಶ್ರೀಲಕ್ಷ್ಮಿ ಅಂತೂ ಅಮಾನತು; ಜೈಲಿಗೆ ರವಾನೆ

ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಅಕ್ರಮವಾಗಿ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರನ್ನು ಬಂಧಿಸಿರುವ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಂಕಜ್ ದ್ವಿವೇದಿ ಅವರಿಗೆ ಸಿಬಿಐ ವರದಿ ಕಳುಹಿಸಿತ್ತು.
ಅದರ ಆಧಾರದ ಮೇಲೆ ದ್ವಿವೇದಿ ಗುರುವಾರ ಅಮಾನತು ಕ್ರಮ ಕೈಗೊಂಡರು. ಸಂಬಂಧಿಸಿದ ಕಡತಕ್ಕೆ ಮುಖ್ಯಮಂತ್ರಿ ಎನ್.ಕಿರಣ್ಕುಮಾರ್ ರೆಡ್ಡಿ ಬುಧವಾರ ಸಂಜೆ ಸಹಿ ಹಾಕಿದ್ದರು ಎಂದು ಮೂಲಗಳು ತಿಳಿಸಿವೆ.
ಶ್ರೀಲಕ್ಷ್ಮಿ ಪ್ರಸ್ತುತ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿ ಸಂಪುಟದಲ್ಲಿ ಕೈಗಾರಿಕಾ ಇಲಾಖೆ ಕಾರ್ಯದರ್ಶಿಯಾಗಿದ್ದಾಗ ಜನಾರ್ದನ ರೆಡ್ಡಿಗೆ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ಮಂಜೂರು ಮಾಡಿದ ಆಪಾದನೆ ಅವರ ಮೇಲಿದೆ.












Click it and Unblock the Notifications