ಚಂಚಲಗೂಡ ಜೈಲಿನಲ್ಲಿ ಶ್ರೀಲಕ್ಷ್ಮಿ ಈಗ ಕೈದಿ ನಂ. 4332

ಇತ್ತೀಚಿನ ದಿನಗಳಲ್ಲಿ ಹೈ ಪ್ರೋಪೈಲ್ ಆರೋಪಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜೈಲು ಸೇರಿಕೊಳ್ಳುತ್ತಿದ್ದಾರಾದರೂ ಇಂತಹ ಹೈ ಪ್ರೋಪೈಲ್ ಪ್ರಕರಣಗಳಲ್ಲಿ ಜೈಲುಪಾಲಾದ ಮೊದಲ ಮಹಿಳಾ ಆರೋಪಿ ಎಂಬ ಕುಖ್ಯಾತಿಗೆ ಶ್ರೀಲಕ್ಷ್ಮಿ ಇದೀಗ ಪಾತ್ರರಾಗಿದ್ದಾರೆ.
ಗುರುವಾರ ಸಂಜೆ 5 ಗಂಟೆಗೆ ಸರಿಯಾಗಿ ಚಂಚಲಗೂಡ ಜೈಲಿಗೆ ಹಸಿರು ಸೀರೆಯುಟ್ಟಿದ್ದ ಶ್ರೀಲಕ್ಷ್ಮಿ ಎಂಟ್ರಿ ಹಾಕಿದರು. ತೀವ್ರವಾಗಿ ನಿತ್ರಾಣಗೊಂಡಂತೆ ಕಂಡುಬಂದ ಮಾಜಿ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಮಹಿಳಾ ಜೈಲಿನೊಳಕ್ಕೆ ಬರುತ್ತಿದ್ದಂತೆ ಗಳಗಳನೆ ಅಳುತ್ತಾ, ಕುಸಿದುಬಿದ್ದರು. ಜೈಲಿನ ಬ್ಯಾರಕ್ 9ನಲ್ಲಿ ಇನ್ನೂ 10 ಕೈದಿಗಳ ಜತೆ ಶ್ರೀಲಕ್ಷ್ಮಿ ವಾಸವಾಗಲಿದ್ದಾರೆ. ಸಿಮೆಂಟ್ ನೆಲ ಮೇಲೆ ಮಲಗಬೇಕಾಗಿದ್ದು, ಒಂದೇ ಟಾಯ್ಲೆಟ್ ಮತ್ತು ಬಾತ್ ರೂಂ ಹಂಚಿಕೊಳ್ಳಬೇಕಾಗಿದೆ.
ಅದಕ್ಕೂ ಮುನ್ನ, ಮಧ್ಯಾಹ್ನ 3.30ಕ್ಕೆ ಕೋರ್ಟಿಗೆ ಹಾಜರಾದ ಶ್ರೀಲಕ್ಷ್ಮಿ, 'ನಾನು ಜೈಲಿಗೆ ಹೋಗೊಲ್ಲ. ಇಲ್ಲೇ ಸಿಬಿಐ ಕಚೇರಿಯಲ್ಲೇ ನ್ಯಾಯಾಂಗ ಬಂಧನ ಅನುಭವಿಸುತ್ತೇನೆ' ಎಂದು ನ್ಯಾಯಾಧೀಶ ಬಿ. ನಾಗಮಾರುತಿ ಶರ್ಮಾ ಅವರನ್ನು ಪರಿಪರಿಯಾಗಿ ಬೇಡಿಕೊಂಡರೂ ನ್ಯಾಯಾಧೀಶರು ತಮ್ಮ ಅಸಹಾಯಕತೆ ಪ್ರದರ್ಶಿಸಿದರು.
ಡಿಸೆಂಬರ್ 12ರವರೆಗೂ ಅವರು ಜೈಲಿನಲ್ಲೇ ಇರಬೇಕಾಗುತ್ತದೆ. ಆದರೆ ಇಂದು ಶುಕ್ರವಾರ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಶ್ರೀಲಕ್ಷ್ಮಿ ಪತಿ, 1983ನೇ ಬ್ಯಾಚಿನ ಐಪಿಎಸ್ ಅಧಿಕಾರಿ ಗೋಪಿಕೃಷ್ಣ ಸೇರಿದಂತೆ ಯಾವೊಬ್ಬ ಕುಟುಂಬ ಸದಸ್ಯರೂ ಜೈಲುವರೆಗೂ ಶ್ರೀಲಕ್ಷ್ಮಿಗೆ ಸಾಥ್ ನೀಡಲಿಲ್ಲ. ಕೋರ್ಟಿಗೆ ಬಂದವರು ಜೈಲುವರೆಗೂ ಅವರು ಯಾರೂ ತಮ್ಮ ಪಾಸದ ಬೆಳೆಸಲಿಲ್ಲ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications