ಮಾಗಿಯ ಚಳಿಗೆ ಬಿಜೆಪಿ ಥರಥರ; ಪಕ್ಷೇತರ ಶಾಸಕರಿಗೆ ಗಾಳ

ಒಂದು ವೇಳೆ ಬಿಜೆಪಿ ಸೋತು, ಶ್ರೀರಾಮುಲು ಮತ್ತೆ ಶಾಸಕರಾದರೆ ಅವರೇ ಬಳ್ಳಾರಿಯ ಮುಕುಟವಿಲ್ಲದ ರಾಜ ಎಂಬುದು ನಿಶ್ಚಿತ. ಇದರ ಸುತ್ತಮುತ್ತ ನೋಡಿದಾಗ ಆಪರೇಶನ್ ಕಮಲದ ಅನುಭವಿ ರಾಜಕಾರಣಿಯಾಗಿ ಹೊರಹೊಮ್ಮಿರುವ ಶ್ರೀರಾಮುಲು ಅಕ್ಕಪಕ್ಕದ ಜಿಲ್ಲೆಗಳಿಂದ ಕನಿಷ್ಠ 15-20 ಶಾಸಕರನ್ನಾದರೂ ತಮ್ಮತ್ತ ಸೆಳೆಯುತ್ತಾರೆ. ಅಲ್ಲಿಗೆ ಸರಕಾರ ಖಲಾಸ್ ಎಂಬುದು ಬಿಜೆಪಿಯ ಚಿಂತೆ, ಚಿಂತನೆಯಾಗಿದೆ.
ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಕೆ. ಎಸ್. ಈಶ್ವರಪ್ಪ ಅವರು ಶುಕ್ರವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಸಚಿವ ಆಸ್ನೋಟಿಕರ್ ಅವರ ಮುಖಾಂತರ ಪಕ್ಷೇತರ ಶಾಸಕ, ಮಾಜಿ ಸಚಿವ, ಮಾಜಿ ಬಿಜೆಪಿ ಬೆಂಬಲಿಗ ಗೂಳಿಹಟ್ಟಿ ಶೇಖರ್ ಅವರನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಮಾತನಾಡಿದ್ದಾರೆ. ಗೂಳಿಹಟ್ಟಿ ಈ ವಿಷಯವನ್ನು ಖಚಿತಪಡಿಸಿದ್ದು, ಕುಶಲೋಪರಿ ವಿಚಾರಿಸಲು ಈಶ್ವರಪ್ಪ ಅವರ ಮನೆಗೆ ಹೋಗಿದ್ದೆ ಎಂದಿದ್ದಾರೆ.












Click it and Unblock the Notifications